ಸರಗೂರು: ಡಾ.ಬಿ.ಆರ್.ಅಂಬೇಡ್ಕರ್ ದೇಶದ ಬೌದ್ಧಿಕ ಜ್ಞಾನದ ಸಂಕೇತವಾಗಿದ್ದಾರೆ ಎಂದು ಹಾದನೂರು ಗ್ರಾಮದ ಯಜಮಾನ ರಾಜೇಶ್ ಅಭಿಪ್ರಾಯಪಟ್ಟರು.
ತಾಲೂಕಿನ ಹಾದನೂರು ಗ್ರಾಮದಲ್ಲಿ ಸೋಮವಾರ ದಂದು ನೂತನ ಜ್ಞಾನ ಸೂರ್ಯ ಯುವಕರ ಬಳಗ ಸಂಘವನ್ನು ಗ್ರಾಮದ ಹಿರಿಯ ಮುಖಂಡರು ಹಾಗೂ ಗ್ರಾಪಂ ಸದಸ್ಯರು ಅಂಬೇಡ್ಕರ್ ಪೋಟೋ ಪುಷ್ಪಾರ್ಚನೆ ಸಲ್ಲಿಸಿ ಸಂಘದ ನಾಮಕರಣ ಮಾಡಿ ಮಾತನಾಡಿದರು.
ಅಂಬೇಡ್ಕರ್ ಅವರನ್ನು ಜಗತ್ತೇ ವಿಶ್ವದ ಜ್ಞಾನದ ಚಿಹ್ನೆಯಾಗಿ ಒಪ್ಪಿಕೊಂಡರೂ ಭಾರತ ಮಾತ್ರ ಜಾತಿ ಸಂಕೋಲೆಗಳಿಂದ ಬಂಧಿಸಿ ನೋಡುತ್ತಿರುವುದು ವಿಷಾದದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.
ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆ ಕುರಿತಾದ ಧ್ವನಿ ಬೆಳಕು ಸಂಯೋಜನೆಯ ಭಾರತ ಭಾಗ್ಯವಿಧಾತ ಚಿತ್ರವು ನಮ್ಮ ದೇಶದ ಬಹು ಆಯಾಮಗಳ ಮೌಲಿಕ ವಿಷಯಗಳನ್ನು ಒಳಗೊಂಡಿದೆ’ ಎಂದು ಅಶಯ ವ್ಯಕ್ತಪಡಿಸಿದರು.
ಗ್ರಾಮದ ಹಿರಿಯ ಮುಖಂಡ ಪುಟ್ಟಸ್ವಾಮಿ ಮಾತನಾಡಿ ಅಂಬೇಡ್ಕರ್ ಅವರು ಕೇವಲ ದೀನ ದಲಿತರ ಸ್ವತ್ತಲ್ಲ; ಸಮಗ್ರ ರಾಷ್ಟ್ರಾಭಿವೃದ್ಧಿಗೆ ಅವರು ನೀಡಿರುವ ಕೊಡುಗೆಗಳು ಅಪಾರ’ ಎಂದರು.
ಈ ಸಂದರ್ಭದಲ್ಲಿ ಮುಖಂಡರು ಚಿಕ್ಕಸಿದ್ದಯ್ಯ, ಮಹದೇವ್, ನಾಗೇಶ್, ಪ್ರಕಾಶ್, ರಾಜೇಶ್, ರೇವಂತ್, ಕೆಂಪಸಿದ್ದ, ಸುದೀಪ್, ಸುದೀಪ್, ನಂಜುಂಡಿ, ಸುರೇಶ, ಸೂರ್ಯ, ಜೋಗಪ್ಪ, ಚಲುವರಾಜು, ಸುರೇಶ್, ರಂಗಸ್ಟಾಮಿ, ಚಿಕ್ಕ ಪುಟ್ಟಯ್ಯ, ದಾಸಪ್ಪ , ಚೆಲುವರಾಜು, ಸ್ವಾಮಿ, ಮರಿಸ್ವಾಮಿ,ನಾಗರಾಜ್,ಕುಮಾರ್,ಸಿದ್ದರಾಜು, ದೇವರಾಜ್, ಚಿಕ್ಕಣ್ಣ, ಪ್ರಸನ್ನ, ಸೋಮೇಶ್, ಶರತ್, ರಾಹುಲ್, ಹರೀಶ್,ರಘು, ವರದರಾಜು, ಪ್ರಜ್ವಲ್ , ಮಣಿಕಂಠ,ಗಣೇಶ,ಭರತ್, ಮಲ್ಲಿಕಾರ್ಜುನ್ , ಸ್ವಾಮಿ, ಚೇತನ್, ಶ್ರೀನಿವಾಸ, ಚಂದು, ಚೇತನ್, ಕಿರಣ್, ಸಂತೋಷ್, ರಾಮಕೃಷ್ಣ, ರವಿ, ಮಣಿಕಂಠ, ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW