nammatumakuru

    Subscribe to Updates

    Get the latest creative news from FooBar about art, design and business.

    What's Hot

    ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದು ಅಪರಾಧ: ಪೊಲೀಸ್ ಅಧಿಕಾರಿ ಎಸ್.ಜಿ.ಶ್ರೀನಿವಾಸ ಪ್ರಸಾದ್

    December 19, 2025

    ಗುಬ್ಬಿ: ಹೋಟೆಲ್‌ ಗೆ ಊಟಕ್ಕೆ ತೆರಳಿದ್ದ ದಲಿತ ಯುವಕನ ಮೇಲೆ ಹಲ್ಲೆ: ಪ್ರಕರಣ ದಾಖಲು

    December 18, 2025

    ಮಧುಗಿರಿ: ಕಿತ್ತಾಡುತ್ತಿದ್ದ ಜಾನುವಾರುಗಳನ್ನು ಬಿಡಿಸಲು ಹೋಗಿ ರೈತ ಸಾವು

    December 18, 2025
    Facebook Twitter Instagram
    ಟ್ರೆಂಡಿಂಗ್
    • ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದು ಅಪರಾಧ: ಪೊಲೀಸ್ ಅಧಿಕಾರಿ ಎಸ್.ಜಿ.ಶ್ರೀನಿವಾಸ ಪ್ರಸಾದ್
    • ಗುಬ್ಬಿ: ಹೋಟೆಲ್‌ ಗೆ ಊಟಕ್ಕೆ ತೆರಳಿದ್ದ ದಲಿತ ಯುವಕನ ಮೇಲೆ ಹಲ್ಲೆ: ಪ್ರಕರಣ ದಾಖಲು
    • ಮಧುಗಿರಿ: ಕಿತ್ತಾಡುತ್ತಿದ್ದ ಜಾನುವಾರುಗಳನ್ನು ಬಿಡಿಸಲು ಹೋಗಿ ರೈತ ಸಾವು
    • ಕರ್ನಾಟಕ ದ್ವೇಷ ಅಪರಾಧಗಳ ತಡೆ ವಿಧೇಯಕ–2025ಕ್ಕೆ ಅನುಮೋದನೆ: ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಎಂದ ಬಿಜೆಪಿ
    • ಬೀದರ್ | ತಾಯಿ, ಮಗು ನಾಪತ್ತೆ: ಪತ್ತೆಗಾಗಿ ಮನವಿ
    • ಸ್ವರ ಸಿಂಚನ ಸಂಗೀತ ಶಾಲೆ ವಿಟ್ಲ ದಶ ಸಂಭ್ರಮ: ಛಲ ಇದ್ದರೆ ಏನನ್ನೂ ಸಾಧಿಸಬಹುದು: ಕುಮಾರ್ ಪೆರ್ನಾಜೆ
    • ತುರುವೇಕೆರೆ  | ಗಂಧದ ಮರ ಕಳ್ಳತನ: ಮಾಲು ಸಹಿತ ಕಳ್ಳರ ಬಂಧನ
    • ತುಮಕೂರು | ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬೌದ್ಧ ಧರ್ಮದಲ್ಲಿ ವಿಜ್ಞಾನ, ವೈಚಾರಿಕತೆಗೆ ಒತ್ತು: ಡಾ.ರವಿಕುಮಾರ್
    ತುಮಕೂರು May 13, 2025

    ಬೌದ್ಧ ಧರ್ಮದಲ್ಲಿ ವಿಜ್ಞಾನ, ವೈಚಾರಿಕತೆಗೆ ಒತ್ತು: ಡಾ.ರವಿಕುಮಾರ್

    By adminMay 13, 2025No Comments2 Mins Read
    budha

    ತುಮಕೂರು: ಬೌದ್ಧ ಧರ್ಮ ವಿಜ್ಞಾನ ಮತ್ತು ವೈಚಾರಿಕತೆಗೆ ಮಹತ್ವ ನೀಡುವುದರೊಂದಿಗೆ ನೈತಿಕತೆಗೂ ಸಮಾನ ಮಹತ್ವ ನೀಡುತ್ತದೆ ಎಂದು ಬೆಂಗಳೂರು ನ್ಯಾಷನಲ್ ಕಾಲೇಜಿನ ಸಹ ಪ್ರಾಧ್ಯಾಪಕ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ರವಿಕುಮಾರ್ ಬಾಗಿ ಅಭಿಪ್ರಾಯಪಟ್ಟರು.

    ತುಮಕೂರು ವಿಶ್ವವಿದ್ಯಾನಿಲಯದ ಗೌತಮ ಬುದ್ಧ ಅಧ್ಯಯನ ಪೀಠ ಹಾಗೂ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು ಸೋಮವಾರ ಬುದ್ಧಪೂರ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಧಮ್ಮ ಕುರಿತ ಬುದ್ಧನ ಚಿಂತನೆಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದರು.


    Provided by
    Provided by

    ಬುದ್ಧನ ಧರ್ಮ ದೇವರು ಇದ್ದಾನೋ ಇಲ್ಲವೋ ಎಂಬ ಚರ್ಚೆಗೆ ಪ್ರಾಮುಖ್ಯತೆ ನೀಡುವುದಿಲ್ಲ; ಬದಲಾಗಿ “ನನಗೆ ತಿಳಿದಿಲ್ಲ” ಎನ್ನುತ್ತದೆ. ಇತರ ಮಹಾನ್ ವ್ಯಕ್ತಿಗಳ ಅಸ್ತಿತ್ವವನ್ನು ಗೌರವಿಸುತ್ತದೆ. ಪ್ರಜ್ಞೆಯೇ ಮುಖ್ಯವೆಂದು ಸಾರುವ ಬುದ್ಧ, ತನ್ನ ಹೇಳಿಕೆಗಳನ್ನು ಯಾರೂ ನಂಬಲೇಬೇಕಾಗಿಲ್ಲ, ಬದಲಾಗಿ ಪರಿಶೀಲಿಸಬಹುದೆಂದು ತಿಳಿಸುತ್ತಾನೆ ಎಂದು ವಿಶ್ಲೇಷಿಸಿದರು.
    ಕಾಲ ಮತ್ತು ಸಂದರ್ಭಕ್ಕೆ ಹೊಂದಿಕೆಯಾಗದಿದ್ದರೆ ಯಾವುದನ್ನಾದರೂ ತಿರಸ್ಕರಿಸುವ ಸ್ವಾತಂತ್ರ‍್ಯವಿದೆ, ಆದರೆ ಆಲೋಚಿಸುವ ಸಾಮರ್ಥ್ಯ ಪ್ರತಿಯೊಬ್ಬರಿಗೂ ಇರಬೇಕು. ಬುದ್ಧ ಧರ್ಮದಲ್ಲಿ ನೈತಿಕತೆಗೆ ಹೆಚ್ಚಿನ ಸ್ಥಾನವಿದ್ದು, ತಪ್ಪು ಮಾಡಿದವರು ತಪ್ಪಿತಸ್ಥರು, ಸರಿ ಮಾಡಿದವರು ಸರಿ ಎನಿಸಿಕೊಳ್ಳುತ್ತಾರೆ ಎಂದರು.

    ಸ್ತ್ರೀಯರನ್ನು ಕೇವಲ ಗೃಹಸೇವೆಯನ್ನಷ್ಟೇ ಮಾಡುವವರೆಂದು ಪರಿಗಣಿಸುವ ಧೋರಣೆಯನ್ನು ಬೌದ್ಧ ಧರ್ಮ ಖಂಡಿಸುತ್ತದೆ. ಹೆಣ್ಣು ಮತ್ತು ಗಂಡು ಸಮಾನರು ಎಂದು ಸಾರಿದ ಬುದ್ಧ, ಎಲ್ಲರೂ ಸಮಾನರು ಎಂದು ಪ್ರತಿಪಾದಿಸಿದನು. ಸಮಾನತೆ, ಶೂದ್ರರ ಪರ ಕಾಳಜಿ ಮತ್ತು ಮಾತೃತ್ವವನ್ನು ಬುದ್ಧ ಗೌರವಿಸಿದ ಎಂದರು.

    ಕಾರ್ಯಕ್ರಮವನ್ನು ಉದ್ಘಾಟಿಸಿದ ಬೌದ್ಧಚಿಂತಕ ಪದ್ಮಾಲಯ ನಾಗರಾಜ್, ಕೇವಲ ಪೂಜೆ ಮತ್ತು ಆಚರಣೆಗಳಿಂದ ಯಾವುದೇ ಪ್ರಯೋಜನವಿಲ್ಲ. ಬುದ್ಧನ ಬೋಧನೆಗಳನ್ನು ಒಂದು ಚಿಕಿತ್ಸೆಯಂತೆ ಅಳವಡಿಸಿಕೊಳ್ಳಬೇಕು. ಇದನ್ನು ಬೇರೆಯವರು ಮಾಡುವುದಿಲ್ಲ, ನಾವೇ ಸ್ವತಃ ಪ್ರಯತ್ನಿಸಬೇಕು. ಯಾವಾಗ ನಾವು ಈ ದಿಟ್ಟ ಹೆಜ್ಜೆ ಇಡುತ್ತೇವೆಯೋ ಆಗ ಬದಲಾವಣೆ ಸಾಧ್ಯ ಎಂದರು.

    ಅವಕಾಶದ ಕೊರತೆ, ಅಸ್ಮಿತೆಯ ಸಮಸ್ಯೆ, ಸಂಬಂಧಗಳ ಸಂಘರ್ಷ ಮತ್ತು ನೈತಿಕತೆಯ ಗೊಂದಲವು ಮನಸ್ಸಿಗೆ ಅಶಾಂತಿಯನ್ನು ಉಂಟುಮಾಡುತ್ತದೆ. ಈ ಎಲ್ಲ ಸಮಸ್ಯೆಗಳಿಗೆ ಅಸ್ತಿತ್ವದ ಅಹಂಕಾರವೇ ಕಾರಣ. ಹಣ, ಅಧಿಕಾರ ಮತ್ತು ಖ್ಯಾತಿಯು ಕೇವಲ ಜೈವಿಕ ಅಸ್ತಿತ್ವವನ್ನು ಪೋಷಿಸುತ್ತವೆ, ಆದರೆ ಬುದ್ಧನ ಮಾರ್ಗವು ಅಸ್ತಿತ್ವದ ಅಹಂಕಾರವನ್ನು ನಿವಾರಿಸುತ್ತದೆ ಎಂದರು.

    ಕರ್ಮ ಚಳುವಳಿ ಮತ್ತು ಸ್ತ್ರೀ ಚಳವಳಿಗಳು ಹೊರಗಿನ ಬದಲಾವಣೆಗೆ ಪ್ರಯತ್ನಿಸಿದರೂ, ನಿಜವಾದ ಬದಲಾವಣೆ ಒಳಗಿನಿಂದ ಬರಬೇಕು. ನಮ್ಮ ಮನಸ್ಸನ್ನು ಶೂನ್ಯವಾಗಿಸಿಕೊಂಡು ಸುತ್ತಲಿನ ಪ್ರಪಂಚ ಮತ್ತು ನಮ್ಮ ಅಂತರಂಗದಲ್ಲಿ ನಡೆಯುವ ಕ್ರಿಯೆಗಳನ್ನು ಗಮನಿಸುವುದೇ ಬುದ್ಧನ ಬೋಧನೆ. ಆಗ ಹುಟ್ಟುವ ಮನಸ್ಸಿಗೆ ಪ್ರಶ್ನೆಗಳಿರುತ್ತವೆ. ಜಾತಿಯ ಕಲ್ಪನೆಯಿರುವುದು ನಮ್ಮ ಮನಸ್ಸಿನಲ್ಲಿಯೇ, ದೇವರು ಸಹ ಅಷ್ಟೇ ಎಂದರು.

    ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ಜೀವನದಲ್ಲಿ ಯಶಸ್ಸು ದೊರೆಯದಿರಲು ಮುಖ್ಯ ಕಾರಣವೆಂದರೆ ತಮ್ಮನ್ನು ತಾವು ಅರಿಯದಿರುವುದು. ಅತಿಯಾದ ಚಿಂತೆ ಮತ್ತು ಇತರರ ಮಾತುಗಳನ್ನು ಕೇಳುವುದರಿಂದ ಆತ್ಮಹತ್ಯೆಯಂತಹ ದುರಂತಗಳು ಸಂಭವಿಸುತ್ತವೆ. ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಜೀವನದ ಮಾರ್ಗವನ್ನು ತಾವೇ ಕಂಡುಕೊಳ್ಳಬೇಕು ಎಂದು ಬುದ್ಧ ಹೇಳುತ್ತಾನೆ ಎಂದರು.

    ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ., ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ.ಪ್ರಕಾಶ್ ಎಂ. ಶೇಟ್, ಗೌತಮ ಬುದ್ಧ ಅಧ್ಯಯನ ಪೀಠದ ಸಂಯೋಜಕ ಡಾ.ನಾಗಭೂಷಣ ಬಗ್ಗನಡು ಉಪಸ್ಥಿತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

    ————————————

    admin
    • Website

    Related Posts

    ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದು ಅಪರಾಧ: ಪೊಲೀಸ್ ಅಧಿಕಾರಿ ಎಸ್.ಜಿ.ಶ್ರೀನಿವಾಸ ಪ್ರಸಾದ್

    December 19, 2025

    ತುಮಕೂರು | ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ

    December 18, 2025

    80 ವರ್ಷ ಮೇಲ್ಪಟ್ಟ ಹಿರಿಯ ಚೇತನರಿಗೆ ಗೌರವ ಸಮರ್ಪಣೆ

    December 17, 2025

    Comments are closed.

    Our Picks

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದು ಅಪರಾಧ: ಪೊಲೀಸ್ ಅಧಿಕಾರಿ ಎಸ್.ಜಿ.ಶ್ರೀನಿವಾಸ ಪ್ರಸಾದ್

    December 19, 2025

    ಬ್ಯಾಲ್ಯ: ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದು ಅಪರಾಧ. ರಸ್ತೆ ಸುರಕ್ಷತೆ ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸ ಬೇಕಾದ್ದು ನಿಮ್ಮ…

    ಗುಬ್ಬಿ: ಹೋಟೆಲ್‌ ಗೆ ಊಟಕ್ಕೆ ತೆರಳಿದ್ದ ದಲಿತ ಯುವಕನ ಮೇಲೆ ಹಲ್ಲೆ: ಪ್ರಕರಣ ದಾಖಲು

    December 18, 2025

    ಮಧುಗಿರಿ: ಕಿತ್ತಾಡುತ್ತಿದ್ದ ಜಾನುವಾರುಗಳನ್ನು ಬಿಡಿಸಲು ಹೋಗಿ ರೈತ ಸಾವು

    December 18, 2025

    ಕರ್ನಾಟಕ ದ್ವೇಷ ಅಪರಾಧಗಳ ತಡೆ ವಿಧೇಯಕ–2025ಕ್ಕೆ ಅನುಮೋದನೆ: ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಎಂದ ಬಿಜೆಪಿ

    December 18, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.