ಬಳ್ಳಾರಿ: ಬಳ್ಳಾರಿ ಜೈಲಿಗೆ ನಟ ದರ್ಶನ್ ತಾಯಿ ಮೀನಾ ತೂಗುದೀಪ, ಅಕ್ಕ ದಿವ್ಯಾ ಹಾಗೂ ಭಾವ ಸೇರಿ ಕುಟುಂಬ ಸದಸ್ಯರು ಗುರುವಾರ ಭೇಟಿ ನೀಡಿದರು.
ಕುಟುಂಬಸ್ಥರ ಭೇಟಿಯಿಂದಾಗಿ ದರ್ಶನ್ ಅವರು ಮಾನಸಿಕವಾಗಿ ಇನ್ನಷ್ಟು ಗಟ್ಟಿಯಾಗುವಂತಾಗಿದೆ. ಇದೇ ವೇಳೆ ಮಗನ ಸ್ಥಿತಿ ಕಂಡು ತಾಯಿ ಕಣ್ಣೀರು ಹಾಕಿದ್ದಾರಂತೆ. ಅಲ್ಲದೇ ದರ್ಶನ್ ಗೆ ಆತ್ಮಸ್ಥೈರ್ಯ ತುಂಬಿದ್ದಾರೆ.
ಕೆಟ್ಟ ಘಳಿಗೆಯಲ್ಲಿ ಏನೋ ನಡೆದಿರಬಹುದು ಆದ್ರೆ, ನಾವೆಲ್ಲ ನಿನ್ನ ಜೊತೆ ಇದ್ದೀವಿ ಎಂದು ಮೀನಾ ತೂಗುದೀಪ್ ಧೈರ್ಯ ತುಂಬಿದ್ದಾರಂತೆ. ಜೊತೆಗೆ ರಾಜರಾಜೇಶ್ವರಿ ದೇವಿಯ ಕೃಪೆಯಿಂದ ಬೇಲ್ ಸಿಗುತ್ತೆ ಅಂತ ಧೈರ್ಯ ತುಂಬಿದ್ರಂತೆ.
ತಾಯಿಯ ಮಾತಿನಿಂದ ಆರೋಪಿ ದರ್ಶನ್ ಧೈರ್ಯ ತೆಗೆದುಕೊಂಡಿದ್ದಾರೆ. ತಾಯಿ ಭೇಟಿಯ ಬಳಿಕ ಆರೋಪಿ ದರ್ಶನ ಲವಲವಿಕೆಯಿಂದ ಇದ್ದಾರೆ ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q