nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೊರಟಗೆರೆ | ತಾಲ್ಲೂಕು ಕುರುಬ ಸಂಘದ ನೂತನ ಅಧ್ಯಕ್ಷರಾದ ಕುರುಡಗಾನಹಳ್ಳಿ ರಂಗಯ್ಯ ಆಯ್ಕೆ

    December 8, 2025

    ಲಂಕೆ ಗ್ರಾಮ ಮಾದರಿ ಗ್ರಾಮ ಮಾಡಲು ಪ್ರಯತ್ನ: ಶಾಸಕ ಅನಿಲ್ ಚಿಕ್ಕಮಾದು

    December 8, 2025

    ವಿವಿಧ ಸ್ಪರ್ಧೆಗಳಲ್ಲಿ ಸಹನಾ ಶಾಲಾ ವಿದ್ಯಾರ್ಥಿಗಳಿಂದ ಸಾಧನೆ

    December 8, 2025
    Facebook Twitter Instagram
    ಟ್ರೆಂಡಿಂಗ್
    • ಕೊರಟಗೆರೆ | ತಾಲ್ಲೂಕು ಕುರುಬ ಸಂಘದ ನೂತನ ಅಧ್ಯಕ್ಷರಾದ ಕುರುಡಗಾನಹಳ್ಳಿ ರಂಗಯ್ಯ ಆಯ್ಕೆ
    • ಲಂಕೆ ಗ್ರಾಮ ಮಾದರಿ ಗ್ರಾಮ ಮಾಡಲು ಪ್ರಯತ್ನ: ಶಾಸಕ ಅನಿಲ್ ಚಿಕ್ಕಮಾದು
    • ವಿವಿಧ ಸ್ಪರ್ಧೆಗಳಲ್ಲಿ ಸಹನಾ ಶಾಲಾ ವಿದ್ಯಾರ್ಥಿಗಳಿಂದ ಸಾಧನೆ
    • ಬೆಳಗಾವಿ ಅಧಿವೇಶನ: ಸಾಲುಮರದ ತಿಮ್ಮಕ್ಕನವರಿಗೆ ಸಂತಾಪದ ನುಡಿಗಳನ್ನಾಡಿದ ಸಿಎಂ ಸಿದ್ದರಾಮಯ್ಯ
    • AI ಭಾವನಾತ್ಮಕವಾಗಿ ಯೋಚಿಸಿದರೆ ಹೇಗಿರಬಹುದು: ಇಲ್ಲಿದೆ ಸುಂದರ ಕಥೆ
    • ಬಳ್ಳಾರಿ ಎಸ್.ಪಿ. ಹೆಸರಿನಲ್ಲಿ ವ್ಯಕ್ತಿಗೆ 50 ಸಾವಿರ ರೂ. ವಂಚನೆ
    • ಸರಗೂರು:  ಶ್ರದ್ಧಾ–ಭಕ್ತಿ, ಸಡಗರದಿಂದ ಹನುಮ ಜಯಂತಿ ಆಚರಣೆ
    • ಬೀದಿ ನಾಯಿಗಳ ಮಾಹಿತಿ ನೀಡಲು ಸೂಚನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸರ್ಕಾರಿ ಪ್ರೌಢಶಾಲೆ ಅರಸೀಕೆರೆ: 38ನೇ ರಾಷ್ಟ್ರೀಯ ವಿಜ್ಞಾನ ದಿನಾಚರಣೆ
    ಪಾವಗಡ February 23, 2025

    ಸರ್ಕಾರಿ ಪ್ರೌಢಶಾಲೆ ಅರಸೀಕೆರೆ: 38ನೇ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

    By adminFebruary 23, 2025No Comments2 Mins Read
    arasikere

    ಅರಸೀಕೆರೆ: ಸರ್ಕಾರಿ ಪ್ರೌಢಶಾಲೆ ಅರಸೀಕೆರೆಯಲ್ಲಿ ಮಿನಿ ವಿಜ್ಞಾನ ಸಂಪನ್ಮೂಲ ಕೇಂದ್ರ ಅರಸೀಕೆರೆ ಮತ್ತು ಮಧುಗಿರಿ ವಿಜ್ಞಾನ ಕೇಂದ್ರ ರವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಆವಿಷ್ಕಾರ್ ಅಭಿಯಾನದ ಅಡಿಯಲ್ಲಿ ಶಾಲಾ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಅದ್ದೂರಿ ಯಾಗಿ 38 ನೇ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು.

    ಕಾರ್ಯಕ್ರಮದಲ್ಲಿ ಶಿರಾ ತಾಲೂಕಿನ ಸರ್ಕಾರಿ ಪ್ರೌಢಶಾಲೆ ದೊಡ್ಡಬಾಣಗೆರೆಯ ಸುಮಾರು 50 ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಎಸ್.ಆರ್.ಪಾಳ್ಯ  ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಾಗೂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಅರಸೀಕೆರೆಯ ವಿದ್ಯಾರ್ಥಿಗಳು ವಿಜ್ಞಾನ ವಸ್ತು ಪ್ರದರ್ಶನವನ್ನು ವೀಕ್ಷಿಸಿದ್ದು ವಿಶೇಷವಾಗಿತ್ತು.


    Provided by
    Provided by

    ಮೊದಲಿಗೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಕಾರ್ಯಕ್ರಮವನ್ನು ವಿಜ್ಞಾನ ನೃತ್ಯದ ಮೂಲಕ ಪ್ರಾರಂಭಿಸಲಾಯಿತು.  ನಂತರ ರಾಸಾಯನಿಕ ಊಸರವಳ್ಳಿ  ಎಂಬ ಪ್ರಯೋಗದ ಮೂಲಕ ಹಾಗೂ ವಿದ್ಯಾರ್ಥಿಗಳಿಂದ ವೈಜ್ಞಾನಿಕವಾಗಿ ತೇಲುತ್ತಿರುವ ಬೆಂಕಿಯನ್ನು ತೋರಿಸುವ ಪ್ರಯೋಗವನ್ನು ವಿದ್ಯಾರ್ಥಿ ಗಳು ನಡೆಸಿ ಕೊಡುವ ಮೂಲಕ ಉದ್ಘಾಟಿಸಲಾಯಿತು.

    ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕರಾದ  ರಾಮಚಂದ್ರಪ್ಪ,  ಕೆ.ಎಸ್.ಡಿ.ಎಂ.ಸಿ. ಅದ್ಯಕ್ಷರಾದ ಗುರುರಾಜ್,  ಅಂತ್ಯೋದಯ ಸಂಸ್ಥೆಯ ಸಂಸ್ಥಾಪಕರಾದ ಬಿ.ಕೆ.ಮುನಿ ಸ್ವಾಮಿ , ಊರಿನ ವಿಜ್ಞಾನಾಸಕ್ತರಾದ ಪಿ.ದೊಡ್ಡಣ್ಣ ಮತ್ತು  ತೀರ್ಪುಗಾರರಾಗಿ ಆಗಮಿಸಿದ  ನಿವೃತ್ತ ಮುಖ್ಯೋಪಾದ್ಯಾಯರಾದ ಗಂಗಾಧರಪ್ಪಎಂ., ಆದರ್ಶ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿಯಾದ ರೂಪಕುಮಾರಿ ಮತ್ತು ಗುಜ್ಜನಡು ಪ್ರೌಢಶಾಲೆಯ ಮುಖ್ಯಶಿಕ್ಷಕರು ಮತ್ತು ವಿಜ್ಞಾನ ಶಿಕ್ಷಕರಾದ ಮಹೇಶ್ವರಪ್ಪ, ಸರ್ಕಾರಿ ಪ್ರೌಢಶಾಲೆ, ದೊಡ್ಡ ಬಾಣಗೆರೆಯ ವಿಜ್ಞಾನ ಶಿಕ್ಷಕರಾದ ಚನ್ನಬಸವರಾಜು, ವಿಶೇಷ ಶಿಕ್ಷಕರಾದ ರಾಮಣ್ಣ ಮತ್ತು ಸಿಬ್ಬಂದಿ ವರ್ಗದವರು , ವಿದ್ಯಾರ್ಥಿಗಳು ಭಾಗವಹಿಸಿದ್ದರು.

    ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ರೇಣುಕರಾಜ್  G.H.,  ವಿಜ್ಞಾನ ದಿನಾಚರಣೆಯ ಮೂಲ ಉದ್ದೇಶ, ಗುರಿ ಮತ್ತು ಮಹತ್ವದ ಕುರಿತು ಸವಿಸ್ತಾರವಾಗಿ ಸರ್. ಸಿ.ವಿ. ರಾಮನ್ ರವರ ಸಾಧನೆಗಳ ಬಗ್ಗೆ ತಿಳಿಸಿದರು.

    ಗಂಗಾಧರಪ್ಪ ಎಂ. ಮಾತನಾಡಿ, ವಿದ್ಯಾರ್ಥಿಗಳು ಆಸಕ್ತಿ, ಕುತೂಹಲದಿಂದ ವಿಜ್ಞಾನವನ್ನು ಓದಿ ಹೆಚ್ಚಿನ ಅಂಕಗಳಿಸಬೇಕೆಂದು ಕಿವಿ ಮಾತು ಹೇಳಿದರು. ವೈಜ್ಞಾನಿಕ ಮನೋಭಾವ ಬೆಳೆಸಿ ಕೊಳ್ಳುವಲ್ಲಿ ವಿದ್ಯಾರ್ಥಿ ಗಳು ಕಾರ್ಯೋನ್ಮುಖರಾಗಬೇಕೆಂದು ತಿಳಿಸಿದರು.

    ಬಿ.ಕೆ.ಮುನಿಸ್ವಾಮಿ ಅವರು ಪರೀಕ್ಷಾ ಫಲಿತಾಂಶ ಸುಧಾರಣ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

    ಇದೇ ಸಂದರ್ಭದಲ್ಲಿ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಲಾಯಿತು.  ಶಾಲೆಯ ಸುಮಾರು 101 ವಿದ್ಯಾರ್ಥಿಗಳು ,ಎಸ್.ಆರ್.ಪಾಳ್ಯ ಶಾಲೆಯ ಸುಮಾರು 5 ವಿದ್ಯಾರ್ಥಿಗಳು ತಾವೇ ತಯಾರಿಸಿದ ವಿಜ್ಞಾನದ ಮಾದರಿಗಳನ್ನು ಪ್ರದರ್ಶನ ಮಾಡಿದರು.

    8,9 ಮತ್ತು 10 ನೇ ತರಗತಿಯ  ಸುಮಾರು 101 ವಿದ್ಯಾರ್ಥಿಗಳು ವಿಜ್ಞಾನದ ಮಾದರಿಗಳಾದ ರಾಕೆಟ್‌ ನ ಮಾದರಿ,ಡಿ.ಸಿ. ಮೋಟಾರು, ಏ.ಸಿ. ಮೋಟಾರ್, ಡೈನಮೋ, ಡ್ರಿಲ್ಲಿಂಗ್ ಮೆಷಿನ್, ಉಪಗ್ರಹ ಉಡಾವಣಾ ವಾಹನ ,ಸೌರವ್ಯೂಹದ ಮಾದರಿ, ನೀರು ಮತ್ತು ಗಾಳಿಯ ರಾಕೆಟ್, ಪರಿಸರ ಮಾಲಿನ್ಯದ ಮಾದರಿ, ಬೋಯಿಂಗ್ ಬೋಟ್, ಟ್ರಕ್ ಮಾದರಿ ,ವ್ಯಾಕ್ಯೂಮ್ ಕ್ಲೀನರ್ ನ ಮಾದರಿ ಹೀಗೆ ಅನೇಕ ಮಾದರಿಗಳನ್ನು ಪ್ರದರ್ಶಿಸಲಾಯಿತು.

    ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮತ್ತು ಭಾಷಣ ಸ್ಪರ್ಧೆ ಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಮೊಮೆಂಟೋ ಗಳನ್ನು ವಿತರಿಸಲಾಯಿತು.

    ಹನುಮೇಶ್ ಸ್ವಾಗತಿಸಿದರು, ಮೋಹನ್ ಕುಮಾರ್  ನಿರೂಪಣೆ ಮಾಡಿದರು. ರಶ್ಮಿ.ಸಿ.ಎಸ್ ರವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಕುಮಾರ್, ವಿಮಲಾ.ಆರ್, ಮಾನಸ ಎನ್., ಮತ್ತು ಅಭಿಷೇಕ್ ಎಂ.ರವರು ಭಾಗವಹಿಸಿದ್ದರು.

    ವರದಿ: ನಂದೀಶ್ ನಾಯ್ಕ, ಪಾವಗಡ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

    admin
    • Website

    Related Posts

    ವಿವಿಧ ಸ್ಪರ್ಧೆಗಳಲ್ಲಿ ಸಹನಾ ಶಾಲಾ ವಿದ್ಯಾರ್ಥಿಗಳಿಂದ ಸಾಧನೆ

    December 8, 2025

    ಅರಸೀಕೆರೆಯ ವಿದ್ಯಾರ್ಥಿಗಳು ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

    December 7, 2025

    ಪ್ರತಿಭಾ ಕಾರಂಜಿ: ಸಹನಾ ಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

    December 5, 2025

    Comments are closed.

    Our Picks

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಕೊರಟಗೆರೆ | ತಾಲ್ಲೂಕು ಕುರುಬ ಸಂಘದ ನೂತನ ಅಧ್ಯಕ್ಷರಾದ ಕುರುಡಗಾನಹಳ್ಳಿ ರಂಗಯ್ಯ ಆಯ್ಕೆ

    December 8, 2025

    ಕೊರಟಗೆರೆ : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಮಾಪ್ತರಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದ ಕೊರಟಗೆರೆ  ತಾಲ್ಲೂಕು ಕುರುಬ ಸಂಘದ ಅಧ್ಯಕ್ಷರಾದ ಮೈಲಾರಪ್ಪನವರ ಅಕಾಲಿಕ ಮರಣದಿಂದ…

    ಲಂಕೆ ಗ್ರಾಮ ಮಾದರಿ ಗ್ರಾಮ ಮಾಡಲು ಪ್ರಯತ್ನ: ಶಾಸಕ ಅನಿಲ್ ಚಿಕ್ಕಮಾದು

    December 8, 2025

    ವಿವಿಧ ಸ್ಪರ್ಧೆಗಳಲ್ಲಿ ಸಹನಾ ಶಾಲಾ ವಿದ್ಯಾರ್ಥಿಗಳಿಂದ ಸಾಧನೆ

    December 8, 2025

    ಬೆಳಗಾವಿ ಅಧಿವೇಶನ: ಸಾಲುಮರದ ತಿಮ್ಮಕ್ಕನವರಿಗೆ ಸಂತಾಪದ ನುಡಿಗಳನ್ನಾಡಿದ ಸಿಎಂ ಸಿದ್ದರಾಮಯ್ಯ

    December 8, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.