ವರದಿ: ಚಂದ್ರ ಹಾದನೂರು
ಹೆಚ್.ಡಿ.ಕೋಟೆ: ತಾಲ್ಲೂಕಿನ ಹಾದನೂರು ಗ್ರಾ.ಪಂ.ದಲ್ಲಿ ಶುದ್ಧ ಕುಡಿಯುವ ನೀರು ಘಟಕವೊಂದಿದ್ದು, ಸ್ಥಾಪನೆಯಾಗಿ 6 ವರ್ಷಗಳಾದರೂ ಈ ಘಟಕ ಯಾವ ಇಲಾಖೆಯವರ ಉಸ್ತುವಾರಿಯಲ್ಲಿದೆ ಎನ್ನುವುದೇ ಗೊತ್ತಾಗುತ್ತಿಲ್ಲ ಎಂದು ಇಲ್ಲಿನ ಸ್ಥಳೀಯರು ದೂರುತ್ತಿದ್ದಾರೆ.
ಸ್ಥಳೀಯ ಪಂಚಾಯತ್ ಬಳಿ ಈ ಬಗ್ಗೆ ವಿಚಾರಿಸಿದರೆ, ನಮಗೆ ಇನ್ನೂ ಉಸ್ತುವಾರಿ ಕೊಟ್ಟಿಲ್ಲ ಎನ್ನುತ್ತಿದ್ದಾರೆ. ಈ ಘಟಕದಲ್ಲಿ ನೀರು ಶುದ್ಧೀಕರಣ ಕೂಡ ಆಗುತ್ತಿಲ್ಲ. ಬೋರ್ ವೇಲ್ ನಿಂದ ಘಟಕಕ್ಕೆ ನೀರು ಹೋಗುತ್ತದೆ. ನೀರು ಅಲ್ಲಿ ಫಿಲ್ಟರ್ ಆಗುವುದಿಲ್ಲ ಎನ್ನಲಾಗುತ್ತಿದೆ.
ಇನ್ನೂ ಘಟಕದ ಸುತ್ತ ಕಂಪೌಂಡ್ ಕೂಡ ಇಲ್ಲ. ಘಟಕದ ಸುತ್ತ ಮದ್ಯದ ಬಾಟಲಿಗಳು, ಪ್ಯಾಕೆಟ್ ಗಳು ಬಿದ್ದಿವೆ. ಇದೇ ಪ್ರದೇಶದಲ್ಲಿ ಕಿಡಿಗೇಡಿಗಳು ಮೂತ್ರ ವಿಸರ್ಜನೆಯೂ ಮಾಡುತ್ತಿದ್ದಾರೆ. ಹೀಗಾಗಿ ಘಟಕದ ಸಮೀಪ ಹೋದಾಗಲೇ ದುರ್ವಾಸನೆ ಮೂಗಿಗೆ ಬಡಿಯುತ್ತದೆ ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ.
ಶುದ್ಧ ಕುಡಿಯುವ ನೀರು ಘಟಕಕ್ಕೆ ಯಾರು ಅಧಿಕಾರಿಗಳು ಎನ್ನುವುದು ಗೊತ್ತಿಲ್ಲ. ಯಾರನ್ನು ಪ್ರಶ್ನಿಸಬೇಕು ಎಂತಲೂ ಗೊತ್ತಿಲ್ಲ. ನೀರಿಗೆನಿಂದ ಬಂದ ಹಣವನ್ನು ಅಧಿಕಾರಿಗಳು ತೆಗೆದುಕೊಂಡು ಹೋಗುತ್ತಾರೆ ಅಷ್ಟೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಶುದ್ಧ ಕುಡಿಯುವ ನೀರಿನ ಘಟಕ ಇನ್ನೂ ಉದ್ಘಾಟನೆ ಕೂಡ ಆಗಿಲ್ಲ ಎಂದು ಕೆಲವರು ಆರೋಪಿಸುತ್ತಿದ್ದಾರೆ. ದಿ.ಚಿಕ್ಕಮಾದು ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಈ ಘಟಕವನ್ನು ಮಾಡಲಾಗಿತ್ತು ಎಂದು ತಿಳಿದು ಬಂದಿದೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700