ಹಿರಿಯೂರು: ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಪತಿಯ ದರ್ಬಾರ್ ಹಾಗೂ ಇದರ ವಿರುದ್ಧ ಕ್ರಮಕೈಗೊಳ್ಳದೇ ಅಸಹಾಯಕತೆ ವ್ಯಕ್ತಪಡಿಸುತ್ತಿರುವ ಜಿಲ್ಲಾಡಳಿತದ ವಿರುದ್ಧ ಮಾಜಿ ಸಚಿವ ಡಿ.ಸುಧಾಕರ್ ಹಾಗೂ ಹಿರಿಯೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಆದಿವಾಲ ಗ್ರಾಮದಲ್ಲಿ ರೂ. 25 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಹೈಟೆಕ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆಯ ಸರ್ಕಾರಿ ಕಾರ್ಯಕ್ರಮದಲ್ಲಿ ಹಿರಿಯೂರು ಶಾಸಕಿಯ ಪತಿಯ ಫೋಟೋವನ್ನು ದೊಡ್ಡದಾಗಿ ಹಾಕಲಾಗಿತ್ತು. ಜೊತೆಗೆ ಶಾಸಕಿ ಮಾಡಬೇಕಾದ ಭಾಷಣವನ್ನು ಅವರ ಪತಿ ಮಾಡಿದ್ದರು ಇದರ ಬಗ್ಗೆ ಕ್ರಮಕೈಗೊಳ್ಳಬೇಕಾದ ಚಿತ್ರದುರ್ಗ ಜಿಲ್ಲಾಧಿಕಾರಿ ಕವಿತಾ, ನಾನು ಜಿಲ್ಲಾಧಿಕಾರಿಯಾಗಿದ್ದರೂ ಬಹಳ ಅಸಹಾಯಕಳಾಗಿದ್ದೇನೆ ಎಂದು ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದರು. ಇಂತಹ ಹೇಳಿಕೆ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಖಾದಿರಮೇಶ್ ಹೇಳಿದರು.
ಶಾಸಕಿ ಪೂರ್ಣಿಮಾಶ್ರೀನಿವಾಸ್ ರವರ ಪತಿ ಡಿ.ಟಿ ಶ್ರೀನಿವಾಸ್ ರವರು ಹಿರಿಯೂರು ತಾಲ್ಲೂಕಿನ ಪ್ರತಿಯೊಂದು ಗ್ರಾಮ ಪಂಚಾಯತಿಯ ಪಿ ಡಿ ಓ ಅಧಿಕಾರಿಗಳನ್ನು ಕರೆದುಕೊಂಡು, ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾದ್ಯಾಕ್ಷರು, ಸದಸ್ಯರೊಂದಿಗೆ ಸಭೆ ನಡೆಸಿ, ಗ್ರಾಮ ಪಂಚಾಯತಿಗಳಲ್ಲಿ ಏನು ಕೆಲಸ ನಡೆಯಬೇಕು. ಅದರ ಬಗ್ಗೆ ಒಂದು ಪಟ್ಟಿ ಕೊಡಿ ನಾನು ಸರ್ಕಾರದಿಂದ ಅನುದಾನ ತಂದು ಮಾಡುತ್ತೇನೆ ಎಂಬುದಾಗಿ ಹೇಳಿಕೆ ನೀಡುತ್ತಿದ್ದರೂ, ಸಂಬಂಧ ಪಟ್ಟ ಸರ್ಕಾರಿ ಇಲಾಖೆಯ ಮೇಲಾಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಒಬ್ಬ ಶಾಸಕ ಮಾಡಬೇಕಾದ ಕಾರ್ಯಕ್ರಮವನ್ನು , ಒಬ್ಬ ಜಿಲ್ಲಾಧಿಕಾರಿ ಮಾಡಬೇಕಾದ ಕಾರ್ಯಕ್ರಮವನ್ನು ಖಾಸಗಿ
ವ್ಯಕ್ತಿ ಮಾಡುತ್ತಿದ್ದು, ಈ ಖಾಸಗಿ ವ್ಯಕ್ತಿಯ ಹಿಂದೆ ಓಡುವಂತಹ ಅಧಿಕಾರಿಗಳ ಬಗ್ಗೆ ಕ್ರಮ ತೆಗೆದುಕೊಳ್ಳುವವರು ಯಾರು? ಎಂದು ಖಾದಿ ರಮೇಶ್ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ನಾವು ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ರಾಜ್ಯಪಾಲರಿಗೂ , ಮುಖ್ಯಮಂತ್ರಿಗಳಿಗೂ , ಆರೋಗ್ಯ ಸಚಿವರಿಗೂ ಈಗಾಗಲೇ ದೂರನ್ನು ಸಲ್ಲಿಸಿದ್ದೇವೆ ಎಂದು ಅವರು ತಿಳಿಸಿದರು.
ಈ ತಾಲ್ಲೂಕಿನ ಅಧಿಕಾರಿಗಳಿಗೆ ಏನಾಗಿದೆ. ಇವರೇನೂ ಈ ದೇಶದ ಸಂವಿಧಾನವನ್ನು ಓದಿಕೊಂಡು ಅಧಿಕಾರಿಯಾಗಿದ್ದರೋ ಏನೋ ಎಂಬುದೇ ತಿಳಿಯುತ್ತಿಲ್ಲ ಎಂದು ಖಾದಿ ರಮೇಶ್ ಅಧಿಕಾರಿಗಳ ಮೇಲೆ ಬೇಸರ ವ್ಯಕ್ತಪಡಿಸಿದ್ದರು.
ಹಿರಿಯೂರು ನಗರಸಭೆಯ ಸದಸ್ಯರಾದ ಅಜ್ಜಪ್ಪ ಮಾತನಾಡಿ, ಹಿರಿಯೂರು ತಾಲ್ಲೂಕಿನಲ್ಲಿ ಶಿಷ್ಟಾಚಾರ ನಡೆಯುತ್ತಿರುವುದು ಇದೇನು ಹೊಸದಲ್ಲ, ಕಳೆದ ಮೂರು ನಾಲ್ಕು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಕಳೆದ ಒಂದು ವರ್ಷಗಳ ಹಿಂದೆ ಹಿರಿಯೂರು ನಗರದ ಟಿ.ಬಿ. ಸರ್ಕಲ್ ವೃತ್ತದ ಬಳಿ ಇರುವ ಅಂಬೇಡ್ಕರ್ ಸರ್ಕಲ್ ಬಳಿ ಅಂಬೇಡ್ಕರ್ ಸರ್ಕಲ್ ನ ಉದ್ಘಾಟನೆ ಸಮಯದಲ್ಲಿ ಪಾಂಬ್ಲೆಟ್ಸ್ ಪ್ರಿಂಟ್ ಮಾಡಿಸಿದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವೆಂದು ಪ್ರಿಂಟ್ ಮಾಡಿಸಿದರು . ಆ ಸಂದರ್ಭದಲ್ಲಿ ನಗರಸಭೆ ಕಮಿಷನರ್ ಗಮನಕ್ಕೆ ಸಹ ತಿಳಿದುಬಂದಿಲ್ಲ ಎಂಬುದಾಗಿಯೂ , ತಾಲ್ಲೂಕು ಆಡಳಿತ ತಹಶೀಲ್ದಾರರ ಗಮನಕ್ಕೆ ಸಹ ತಿಳಿಸದೇ,ನಿರ್ಲಕ್ಷ್ಯತನವಾಗಿ ಸರ್ಕಾರಿ ಕಾರ್ಯಕ್ರಮ ವೆಂದು ಪಾಂಬ್ಲೆಟ್ಸ್ ಪ್ರಿಂಟ್ ಮಾಡಿರಬಹುದು ಎಂದು ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಹ ಇದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಆ ಸಂದರ್ಭದಲ್ಲಿ ಶಿಸ್ತು ಕ್ರಮಕ್ಕೆ ಜಿಲ್ಲಾ ಪಂಚಾಯತಿಯ ಅಧ್ಯಕಕ್ಷರು ಹಾಗೂ ನಗರಸಭೆಯಿಂದ ಗೌರ್ನಮೆಂಟ್ ಸೆಕ್ರೆಟರಿಯವರಿಗೆ ದೂರು ನೀಡಿದ್ದೇವೆ , ಅದ ನಂತರ ಶಿಷ್ಠಾಚಾರವಾಯಿತು. ಅಲ್ಲಿ ತಹಶೀಲ್ದಾರು, ಜಿಲ್ಲಾಧಿಕಾರಿ, ಕಮಿಷನರ್ ಸೇರಿ ಆರು ಬಾರಿ ಕಟ್ಟಕಡೆಯಲ್ಲಿ (ಕೋರ್ಟು ) ನಿಂತು ಬಂದಿರುವುದಾಗಿಯೂ ನಗರಸಭೆ ಸದಸ್ಯರಾದ ಅಜ್ಜಪ್ಪ ತಿಳಿಸಿದರು. ಸರ್ಕಾರ ಮಟ್ಟದಲ್ಲಿಯೇ ಈ ವಿಷಯವನ್ನು ಮುಚ್ಚಿಹಾಕುತ್ತಿದ್ದಾರೆ. ಜಿಲ್ಲೆಯ ಜಿಲ್ಲಾಧಿಕಾರಿಗಳೇ ತಾನು ಅಸಹಾಯಕಳಾಗಿದ್ದೇನೆ ಎನ್ನುತ್ತಿದ್ದಾರೆ. ಅದು ಜಿಲ್ಲಾಧಿಕಾರಿಗಳ ಲಕ್ಷಣವಲ್ಲ ಎಂದು ಅಜ್ಜಪ್ಪ ತಿಳಿಸಿದರು. .
ಈ ಸಂದರ್ಭದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನಗರಸಭಾ ಉಪಾಧ್ಯಾಕ್ಷರಾದ ಬಿ.ಎನ್. ಪ್ರಕಾಶ್, ನಗರಸಭಾ ಅಧ್ಯಕ್ಷರಾದ ಅಜ್ಜಪ್ಪ , ಅನಿಲ್ ಕುಮಾರ್ , ಸಮೀವುಲ್ಲಾ , ಚಿದಾನಂದಸ್ವಾಮಿ ಆರ್., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಟಿ.ವಿಭಾಗದ, ಎಸ್.ಸಿ.ನಗರ ಘಟಕ ಅಧ್ಯಕ್ಷರಾದ ಚಂದ್ರನಾಯ್ಕ , ಕಾರ್ಮಿಕ ವಿಭಾಗದ ಅಧ್ಯಕ್ಷರಾದ ವಿ.ಶಿವಕುಮಾರ್ , ಎಸ್.ಸಿ. ಘಟಕದ ಉಪಾಧ್ಯಾಕ್ಷರಾದ ಜ್ಞಾನೇಶ್, ಮಾಜಿ ಪಿ.ಎಲ್. ಡಿ.ಬ್ಯಾಂಕ್ ಅಧ್ಯಕ್ಷರಾದ ಸಾದತ್ ವುಲ್ಲಾ , ಹೊಸ ಯಳನಡು ಗ್ರಾಮ ಪಂಚಾಯತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ತಿಪ್ಪೇಸ್ವಾಮಿ ,ಶರಣಪ್ಪ ಇತರರು ಉಪಸ್ಥಿತರಿದ್ದರು .
ವರದಿ: ಮುರುಳಿಧರನ್ ಆರ್. ಹಿರಿಯೂರು (ಚಿತ್ರದುರ್ಗ).
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB