ಪಾವಗಡ: ವಸತಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಪ್ರಾಂಶುಪಾಲರುಗಳು ವಸತಿ ನಿಲಯ ನನ್ನದು ಮಕ್ಕಳು ನಮ್ಮವರು ಎಂದು ಪರಿಭಾವಿಸಿದಾಗ ಮಾತ್ರ ವಸತಿ ನಿಲಯಗಳಲ್ಲಿ ಇರುವಂತಹ ವಿದ್ಯಾರ್ಥಿಗಳು ಉದ್ಧಾರ ಆಗಲು ಸಾಧ್ಯವಾಗುತ್ತದೆ ಎಂದು ಶಾಸಕ ಎಚ್.ವಿ.ವೆಂಕಟೇಶ್ ಹೇಳಿದ್ದಾರೆ.
ಶನಿವಾರ ಪಾವಗಡ ತಾಲೂಕಿನ ದೊಡ್ಡಹಳ್ಳಿ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಮತ್ತು ಕಾಲೇಜುಗಳಲ್ಲಿ ಹಮ್ಮಿಕೊಂಡಿದ್ದ ದೂರ ತರಂಗ ಶಿಕ್ಷಣ ಉದ್ಘಾಟನೆ ಸಮಾರಂಭ ಹಾಗೂ ಜ್ಞಾನ ಸಿಂಚನ 2023 ನೇ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಶಾಸಕರು ಮಾತನಾಡುತ್ತಿದ್ದರು.
ಮಕ್ಕಳಿಗೆ ನೀಡುವ ಆಹಾರದಲ್ಲಿ ಕತ್ತರಿ ಹೊಡೆಯುವುದು, ಗುಣಮಟ್ಟ ಆಹಾರವನ್ನು ನೀಡದೆ ಇರುವುದು, ಬೇಕಾಬಿಟ್ಟಿಯಾಗಿ ಕರ್ತವ್ಯ ನಿರ್ವಹಿಸುವುದು ಮಾಡಬಾರದು. ವಸತಿ ನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡುವಂತಹ ಮಕ್ಕಳು ನಮ್ಮ ಮಕ್ಕಳು ಎಂದು ಭಾವಿಸಬೇಕು ಎಂದು ಅವರು ತಿಳಿಸಿದರು.
ವಿದ್ಯಾಭ್ಯಾಸಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು, ಜಪಾನಂದ ಸ್ವಾಮೀಜಿ ಅವರು, ಪಾವಗಡ ತಾಲೂಕಿಗೆ ಒಂದು ರೀತಿಯ ವರ ಇದ್ದ ಹಾಗೆ ತಾಲ್ಲೂಕಿನಾದ್ಯಂತ ಅನೇಕ ಆರೋಗ್ಯ ಶಿಬಿರಗಳನ್ನು ನೆರವೇರಿಸಿದ್ದಾರೆ. ಬರಬಂದಂತಹ ಸಮಯದಲ್ಲಿ ಸರ್ಕಾರ ಮುಂದೆ ಬಾರದಿದ್ದರೂ ಸ್ವಾಮೀಜಿಯವರು ಜಾನುವಾರುಗಳ ಹಸಿವು ನೀಗಿಸಲು ಹುಲ್ಲು ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ನಂತರ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸರಿಯಾದ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವುದಿಲ್ಲ ಆದರೆ ಸ್ವಯಂ ಸೇವಾ ಸಂಸ್ಥೆಯಾಗಿ ರಾಮಕೃಷ್ಣ ಸೇವಾಶ್ರಮದ ಆಸ್ಪತ್ರೆಯಲ್ಲಿ ವೈದ್ಯರು ಜನರಿಗೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಸರ್ಕಾರಿ ಆಸ್ಪತ್ರೆಯ ವೈದ್ಯರು ಖಾಸಗಿ ಆಸ್ಪತ್ರೆಗಳ ಜೊತೆ ಬುಕ್ ಆಗುತ್ತಿದ್ದಾರೆ, ಬಡ ಹೆಣ್ಣು ಮಕ್ಕಳು ಸರ್ಕಾರಿ ಆಸ್ಪತ್ರೆಗೆ ಹೋದರೆ ನಾರ್ಮಲ್ ಡೆಲಿವರಿಯನ್ನು ಸಿಸೇರಿಯನ್ ಮಾಡಿಬಿಡುತ್ತಾರೆ, ಅಂತಹ ನರ್ಸಿಂಗ್ ಹೋಮ್ ಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದೇನೆ, ತಾಲೂಕಿನಲ್ಲಿ ವೈದ್ಯರು ಅತ್ಯಂತ ಕೆಳಮಟ್ಟಕ್ಕೆ ಇಳಿದು ಬಡವರ ರಕ್ತ ಹೀರುತ್ತಿದ್ದಾರೆ ಈ ನಿಟ್ಟಿನಲ್ಲಿ ನಾವೆಲ್ಲ ಬದಲಾವಣೆ ಆಗಬೇಕಾದರೆ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸವನ್ನು ಮಾಡಿ ಬಡ ಜನರಿಗೆ ಸೇವೆ ಮಾಡುವಂಥವರಾಗಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು,
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಜಪಾನಂದ ಸ್ವಾಮೀಜಿ ಶಾಲೆಗಳು ಉದ್ದಾರ ಆಗಬೇಕಾದರೆ ಪೋಷಕರ ಪಾತ್ರವೂ ಸಹ ಅತ್ಯಂತ ಪ್ರಮುಖವಾಗಿರುತ್ತದೆ, ತಮ್ಮ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಉತ್ತಮ ಮತ್ತು ಆಧಾರಿತ ಶಿಕ್ಷಣ ಲಭಿಸುತ್ತಿದೆ, ಮತ್ತು ವಿದ್ಯಾರ್ಥಿಗಳು ಗ್ರಾಮೀಣ ಸಂಸ್ಕೃತಿಯನ್ನ ಮತ್ತು ಪರಂಪರೆಯನ್ನು ಎತ್ತಿ ಹಿಡಿಯುವವರಾಗಬೇಕು ಈ ದಿನ ಶಾಲೆಯಲ್ಲಿ ಗ್ರಾಮೀಣ ಸೊಬಗಿನ ವಾತಾವರಣವನ್ನು ವಿದ್ಯಾರ್ಥಿಗಳು ನಿರ್ಮಾಣ ಮಾಡಿದ್ದಲ್ಲ ಕಂಡು ಸಂತೋಷವಾಯಿತು, ಇದು ನಮ್ಮ ರಾಮಕೃಷ್ಣ ಸೇವಾಶ್ರಮದಿಂದ ತಮ್ಮ ಶಾಲೆಗೆ ದೂರ ತರಂಗ ಶಿಕ್ಷಣದ ಯೋಜನೆಯನ್ನು ನೀಡಿದ್ದೇವೆ ತಾವೆಲ್ಲರೂ ಸದ್ಬಳಕೆ ಮಾಡಿಕೊಳ್ಳಿ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪ್ರಾಂಶುಪಾಲ ಕಸ್ತೂರಿ ಕುಮಾರ್ ಮಾತನಾಡಿದ ಕಾಲೇಜಿನಲ್ಲಿ ಸದ್ಯ ಪಿಯುಸಿ ವಿಭಾಗವು ಸಹ ಇದು ಪ್ರತ್ಯೇಕವಾದ ಕಟ್ಟಡ ಅಗತ್ಯವಿದೆ, ಹೆಚ್ಚು ವಿದ್ಯಾರ್ಥಿಗಳು ಇರುವುದರಿಂದ ತರಗತಿಗಳನ್ನು ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದಾಗಿ ಆರು ಎಕರೆ ಸ್ಥಳ ಇದ್ದು ಪ್ರತ್ಯೇಕ ವಿಭಾಗ ಮತ್ತು ವಿದ್ಯಾರ್ಥಿಗಳಿಗೆ ವಸತಿ ನಿಲಯದ ಕಟ್ಟಡವನ್ನು ನಿರ್ಮಾಣ ಮಾಡಲು ವಹಿಸುವಂತೆ ಅವರು ಶಾಸಕರಿಗೆ ಮನವಿ ಮಾಡಿದರು ನಂತರ ಕಾಲೇಜಿನಲ್ಲಿ ಸದ್ಯ ಒಂದೇ ಬೋರ್ವೆಲ್ ಇದ್ದು ಬರ ಇರುವುದರಿಂದ ಯಾವ ಸಮಯದಲ್ಲಿ ನೀರಿನ ಕೊರತೆ ಉಂಟಾಗುವ ಸದ್ಯದ ಇದ್ದು ಮತ್ತೊಂದು ಬೋರ್ ವೆಲ್ ಅವಶ್ಯಕತೆ ಇದೇ ಎಂದು ಮನವಿ ಮಾಡಿದರು
ಕಾಲೇಜಿನ ವಿಭಾಗದಲ್ಲಿ ಉತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ಶರತ್ ಮತ್ತು ಗಗನ ಎಮ್ ಜಿ ಎನ್ನುವ ವಿದ್ಯಾರ್ಥಿಗೆ ಪಡೆದುಕೊಂಡಿದ್ದು ಅದೇ ರೀತಿ ಉತ್ತಮ ತಂಡವಾಗಿ ಕೆಂಪು ತಂಡ ಆಯ್ಕೆಗೊಂಡಿದ್ದು ಶಾಸಕರು ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಿದರು
ಕಾರ್ಯಕ್ರಮದಲ್ಲಿ ತಾಲೂಕು ಲಂಬಾಣಿ ಸಂಘದ ಅಧ್ಯಕ್ಷರಾದ ರಮೇಶ್ ನಾಯ್ಕ ಮುಖಂಡರಾದ ವೆಂಕಟೇಶ್, ಶಾಲೆಯ ಪ್ರಧಾನ ಪೋಷಕರಾದ ರಾಂಪುರ ನಾಗೇಶ್ ,ರಮೇಶ್ ವಸತಿ ನೆಲೆಗಳ ಜಿಲ್ಲಾ ಸಂಯೋಜಕರಾದ ಶ್ರೀನಿವಾಸ್, ವಿವಿಧ ವಸತಿ ಶಾಲೆಗಳ ಪ್ರಾಂಶುಪಾಲರುಗಳು ಉಪನ್ಯಾಸಕರಗಳು ಶಿಕ್ಷಕರುಗಳು ಪೋಷಕರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವರದಿ : ನಂದೀಶ್ ನಾಯ್ಕ, ಪಾವಗಡ