nammatumakuru

    Subscribe to Updates

    Get the latest creative news from FooBar about art, design and business.

    What's Hot

    ನಕಾಶೆ ರಸ್ತೆ ತೆರವುಗೊಳಿಸಲು ವಿಳಂಬ: ಹಸಿರು ಸೇನೆಯಿಂದ ಪ್ರತಿಭಟನೆ

    December 19, 2025

    ಡಿ.21ರಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮ: ತಪ್ಪದೇ ಲಸಿಕೆ ಹಾಕಿಸಿ: ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್

    December 19, 2025

    ನಾಟಕ, ಬದುಕನ್ನು ಕಟ್ಟಿಕೊಡುವ ಜೊತೆಗೆ ಸಾಮರಸ್ಯ ಬೆಳೆಸುತ್ತದೆ: ವೈ.ಎಂ.ಪುಟ್ಟಣ್ಣಯ್ಯ

    December 19, 2025
    Facebook Twitter Instagram
    ಟ್ರೆಂಡಿಂಗ್
    • ನಕಾಶೆ ರಸ್ತೆ ತೆರವುಗೊಳಿಸಲು ವಿಳಂಬ: ಹಸಿರು ಸೇನೆಯಿಂದ ಪ್ರತಿಭಟನೆ
    • ಡಿ.21ರಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮ: ತಪ್ಪದೇ ಲಸಿಕೆ ಹಾಕಿಸಿ: ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್
    • ನಾಟಕ, ಬದುಕನ್ನು ಕಟ್ಟಿಕೊಡುವ ಜೊತೆಗೆ ಸಾಮರಸ್ಯ ಬೆಳೆಸುತ್ತದೆ: ವೈ.ಎಂ.ಪುಟ್ಟಣ್ಣಯ್ಯ
    • ಲೇಖಕಿಯರ ಸಂಘದ ದತ್ತಿ ಬಹುಮಾನಗಳಿಗೆ ಕಥೆ—ಕವನಗಳ ಆಹ್ವಾನ
    • ಡಿ.24ರಂದು ಮಧುಗಿರಿ ತಾಲ್ಲೂಕು ಸಾಹಿತ್ಯ ಸಮ್ಮೇಳನ: ಅಧ್ಯಕ್ಷರಾಗಿ ಕೆ.ಪಿ. ನಟರಾಜು ಆಯ್ಕೆ
    • ಶಿರಾ | ಜಮೀನು ವಿಚಾರಕ್ಕೆ ಜಗಳ: ಒಬ್ಬನ ಕೊಲೆಯಲ್ಲಿ ಅಂತ್ಯ
    • ಉತ್ತರ ಕರ್ನಾಟಕಕ್ಕೆ ₹3,450 ಕೋಟಿ ಬಂಪರ್ ಅನುದಾನ: ಸಚಿವ ಸಂಪುಟ ಸಭೆಯ ಮಹತ್ವದ ತೀರ್ಮಾನಗಳು
    • ಮುಳ್ಳೂರು ಆಸ್ಪತ್ರೆಗೆ ಎರಡು ಬಾರಿ ಉತ್ತಮ ಆಸ್ಪತ್ರೆ  ಪ್ರಶಸ್ತಿ: ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸೋಶಿಯಾಲಜಿ ಸಿನರ್ಜಿ: ಅಂತರ್ ಕಾಲೇಜು ಸಮಾಜಶಾಸ್ತ್ರ ವಿಷಯದ ವಿನಿಮಯ ಉಪನ್ಯಾಸ
    ತುಮಕೂರು April 7, 2025

    ಸೋಶಿಯಾಲಜಿ ಸಿನರ್ಜಿ: ಅಂತರ್ ಕಾಲೇಜು ಸಮಾಜಶಾಸ್ತ್ರ ವಿಷಯದ ವಿನಿಮಯ ಉಪನ್ಯಾಸ

    By adminApril 7, 2025No Comments2 Mins Read
    tumakuru news

    ತುಮಕೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು ಇಲ್ಲಿ ಸಮಾಜಶಾಸ್ತ್ರ ವಿಭಾಗ ಮತ್ತು ಐ.ಕ್ಯೂ.ಎ.ಸಿ. ಸಹಯೋಗದೊಂದಿಗೆ “ಸೋಶಿಯಾಲಜಿ ಸಿನರ್ಜಿ” ಎಂಬ ಅಂತರ್ ಕಾಲೇಜು ಸಮಾಜಶಾಸ್ತ್ರ ವಿಷಯದ ವಿನಿಮಯ ಉಪನ್ಯಾಸ ಮಾಲೆಯನ್ನು ಹಮ್ಮಿಕೊಳ್ಳಲಾಗಿತ್ತು.

    ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ.ವಿಜಯಲಕ್ಷ್ಮೀ ಎನ್., ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಧುಗಿರಿ ಇವರು ಲಿಂಗತ್ವವು ಆರೋಗ್ಯದ ಸಾಮಾಜಿಕ ನಿರ್ಧಾರಕಾಂಶ: ಸಮಸ್ಯೆಗಳು ಮತ್ತು ಸವಾಲಗಳು ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.


    Provided by
    Provided by

    ಸಮಾಜದಲ್ಲಿ ಸ್ತ್ರೀಯರ ಆರೋಗ್ಯಕ್ಕೆ ದ್ವಿತೀಯ ಸ್ಥಾನ ನೀಡಲಾಗುತ್ತದೆ. ಲಿಂಗತ್ವವು ಕೇವಲ ಜೈವಿಕ ಆಯಾಮವನ್ನಷ್ಟೇ ಹೊಂದಿರದೆ ಮಾನಸಿಕ ಹಾಗೂ ಸಾಮಾಜಿಕ ಆಯಾಮವನ್ನು ಒಳಗೊಂಡಿರುತ್ತದೆ. ಸಮಾಜದಲ್ಲಿ ಲಿಂಗತಾರತಮ್ಯ ಕಂಡು ಬರುತ್ತದೆ. ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳಿಗಿಂತ ಹೆಚ್ಚು ಪ್ರಾಶಸ್ತ್ರ ನೀಡುವುದು, ಸ್ತ್ರೀಯರು ಅಡುಗೆ ಮಾಡುವುದು, ಅತಿಥಿ ಸತ್ಕಾರ, ಮಕ್ಕಳ ಪಾಲನೆ, ವಿಟಮಿನ್ಯುಕ್ತ ಆಹಾರದ ಸೇವನೆಯ ಕೊರತೆ, ಪುರುಷರ ಊಟದ ನಂತರ ಉಳಿದ ಆಹಾರ ಸೇವಿಸುವ ಪದ್ಧತಿ ಗರ್ಭ ನಿರೋಧಕಗಳ ಬಳಕೆ, ಮುಂತಾದವುಗಳಿಂದ ಸ್ತ್ರೀಯರ ಆರೋಗ್ಯದ ನಿರ್ಲಕ್ಷವಾಗುತ್ತದೆ. ಸ್ತ್ರೀಯರ ಸಾವುಗಳು ಸಂಭವಿಸುತ್ತಿದ್ದು ಸ್ತ್ರೀಯರ ಸಂಖ್ಯೆ ಕುಸಿಯುತ್ತಿದೆ. ಲಿಂಗತಾರತಮ್ಯವು ಸ್ತ್ರೀಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಸ್ತ್ರೀ ಸಮಾನತೆಯು ಸ್ತ್ರೀಯ ಆರೋಗ್ಯವನ್ನು ವೃದ್ಧಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಬಹುದು ಎಂದರು.

    ಕಾರ್ಯಕ್ರಮದಲ್ಲಿ ಮತ್ತೊಬ್ಬ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ.ತಿರುಮಲೇಶ ಬಾಬು ಟಿ. ಆರ್, ಸಹ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಡವನಹಳ್ಳಿ ಇವರು ಸಮಾಜದ ಮೇಲೆ ಜನಸಂಖ್ಯೆ ಪರಿಣಾಮ : ಸಮಸ್ಯೆಗಳು ಮತ್ತು ಸವಾಲಗಳು ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ, ಜನಸಂಖ್ಯಾ ಸ್ಪೋಟವು ಒಂದು ಬೃಹತ್ ಸಾಮಾಜಿಕ ಸಮಸ್ಯೆಯಾಗಿದ್ದು ಇದು ಸಾಮಾಜಿಕ ಸಮಸ್ಯೆಗಳ ಸರಮಾಲೆಯನ್ನೆ ಸೃಷ್ಟಿಸುತ್ತದೆ. ಜನಸಂಖ್ಯಾ ಸ್ಫೋಟವು ಯಾವುದೇ ದೇಶದ ಆರ್ಥಿಕತೆಗೆ ಮಾರಕವಾಗಬಹುದು. ಇಂದು ಹಲವು ರಾಷ್ಟ್ರಗಳು ಜನಸಂಖ್ಯಾ ಸ್ಫೋಟದ ಸಮಸ್ಯೆಯನ್ನು ಎದುರಿಸುತಿದ್ದು ಆರ್ಥಿಕವಾಗಿ ದುಸ್ಥಿತಿಗೆ ತಲುಪಿವೆ. ನಾಗರೀಕರು ಮೂಲಭೂತ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿರುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಹಲವು ದೇಶಗಳು ನಾಗರಿಕರಿಗೆ ಜನಸಂಖ್ಯಾ ನಿಯಂತ್ರಣದ ಅರಿವು ಹಾಗೂ ನಿಯಂತ್ರಣದಿಂದ ಉಂಟಾಗುವ ಅನುಕೂಲಗಳನ್ನು ತಿಳಿಸಿಕೊಡಬೇಕಾಗುತ್ತದೆ. ನಿಯಮಗಳ ಪಾಲನೆ ಮಾಡುವಂತೆ ಪ್ರೇರೆಪಿಸುವ ಜವಾಬ್ದಾರಿ ಮತ್ತು ಸವಾಲು ಸಮಾಜದ ಮುಂದಿದೆ ಎಂದು ಅಭಿಪ್ರಾಯಪಟ್ಟರು.

    ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನಾಡುತ್ತಾ ಡಾ.ಅಶ್ವಾಖ್ ಅಹಮದ್, ಮುಖ್ಯಸ್ಥರು ಸಮಾಜಶಾಸ್ತ್ರ ವಿಭಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು ಮಾತನಾಡುತ್ತಾ, ಇಂದು ನಮ್ಮ ಕಾಲೇಜಿನಲ್ಲಿ ಸಾಮಾಜಿಕ ವಿಷಯಗಳ ಚಿಂತನ ಮಂಥನ ಕಾರ್ಯ ನಡೆಯುತ್ತಿದೆ. ಇಂದು ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ ಮತ್ತು ಸಾಮಾಜಿಕ ಜ್ಞಾನಗಳೆರಡರ ಕೊರತೆಯು ಕಂಡು ಬರುತ್ತಿದೆ. ಇದಕ್ಕೆ ಮೂಲ ಕಾರಣ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಅರಿವಿನ ಕೊರತೆ ಎದ್ದು ಕಾಣುತ್ತಿರುವುದೆ ಆಗಿದೆ. ವಿದ್ಯಾರ್ಥಿಗಳು ಇಂದು ಕೇವಲ ಅಂಕಗಳಿಸಲು ಮತ್ತು ಪದವಿ ಪಡೆದಿಕೊಳ್ಳಲಷ್ಠೆ ಸೀಮಿತರಾಗಿದ್ದಾರೆ. ಶಿಕ್ಷಕರು ತಮ್ಮ ಜವಾಬ್ದಾರಿ ಪೂರ್ಣಗೊಳಿಸುವ ಅನಿವಾರ್ಯತೆಯನ್ನು ಹೊಂದಿದ್ದಾರೆ. ವಿಶೇಷ ಹಾಗೂ ವ್ಯವಸ್ಥಿತ ಅಧ್ಯಯನದಿಂದ ಮಾತ್ರ ಉತ್ತಮ ಜ್ಞಾನ ಪಡೆಯಲು ಸಾಧ್ಯ. ವ್ಯವಸ್ಥಿತ ಜ್ಞಾನದಿಂದ ಉತ್ತಮ ಆವಿಷ್ಕಾರಗಳು ಸಾಧ್ಯ. ಉತ್ತಮ ಆವಿಷ್ಕಾರಗಳು ಸಮಾಜ ಕಲ್ಯಾಣಕ್ಕೆ ದಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಇಂದಿನ ಶಿಕ್ಷಣ ಕೇವಲ ಅಂಕಗಳಿಸಲು, ಪದವಿ ಪಡೆಯಲಷ್ಠೆ ಸೀಮಿತವಾಗಬಾರದು, ಜ್ಞಾನಾರ್ಜನೆಯ ಶಾಖೆಗಳಾಗಿ ಬೆಳೆಯಬೇಕು ಎಂದು ಅಭಿಪ್ರಾಯಪಟ್ಟರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯರಾದ ಪ್ರೊ.ವಸಂತ ಟಿ.ಡಿ. ರವರು ಮಾತನಾಡುತ್ತಾ, ಕಾಲೇಜಿನ ಸಮಾಜಶಾಸ್ತ್ರ ವಿಭಾಗವು ವಿವಿಧ ಕಾಲೇಜುಗಳ ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿದ್ಯಾರ್ಥಿಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸಮಸ್ಯೆಗಳ ಅರಿವು ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ಸಮಾಜ ನಾಶವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

    ಕಾರ್ಯಕ್ರಮದಲ್ಲಿ ಡಾ.ಯೋಗೀಶ್, ಡಾ.ತಿಪ್ಪೇಸ್ವಾಮಿ ಜಿ., ಡಾ.ಮಲ್ಲೇಶಪ್ಪ, ಡಾ.ನಾರಾಯಣಸ್ವಾಮಿ, ಡಾ.ಶಿವಲಿಂಗಮೂರ್ತಿ ಹಾಜರಿದ್ದರು.

    ಪ್ರಾರ್ಥನೆಯನ್ನು ಲಕ್ಷ್ಮೀ ಮತ್ತು ಸಂಗಡಿಗರು ನೆರವೇರಿಸಿದರು. ಪುನೀತ್ ರವರು ಸ್ವಾಗತಿಸಿದರು, ಕಾರ್ತಿಕ್ರವರು ಎಲ್ಲರಿಗೂ ವಂದಿಸಿದರೆ ಸುರೇಖಾರವರು ಕಾರ್ಯಕ್ರಮ ನಿರೂಪಿಸಿದರು.


    ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ:

    https://chat.whatsapp.com/H1duNIQRfXnJcfQKWPzNqD

     

    admin
    • Website

    Related Posts

    ಲೇಖಕಿಯರ ಸಂಘದ ದತ್ತಿ ಬಹುಮಾನಗಳಿಗೆ ಕಥೆ—ಕವನಗಳ ಆಹ್ವಾನ

    December 19, 2025

    ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದು ಅಪರಾಧ: ಪೊಲೀಸ್ ಅಧಿಕಾರಿ ಎಸ್.ಜಿ.ಶ್ರೀನಿವಾಸ ಪ್ರಸಾದ್

    December 19, 2025

    ತುಮಕೂರು | ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ

    December 18, 2025

    Comments are closed.

    Our Picks

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಪಾವಗಡ

    ನಕಾಶೆ ರಸ್ತೆ ತೆರವುಗೊಳಿಸಲು ವಿಳಂಬ: ಹಸಿರು ಸೇನೆಯಿಂದ ಪ್ರತಿಭಟನೆ

    December 19, 2025

    ಪಾವಗಡ: ತಾಲ್ಲೂಕಿನ ನಾಗಲಮಡಿಕೆ ಹೋಬಳಿಯ ತಿಮ್ಮಮ್ಮನಹಳ್ಳಿಯಲ್ಲಿ ರೈತರು ತಮ್ಮ ಜಮೀನುಗಳಿಗೆ ಹೋಗಲು ರಸ್ತೆಯ ಸಮಸ್ಯೆಯಿದ್ದು ಅಧಿಕಾರಿಗಳು ಶೀಘ್ರವೇ ಬಗೆಹರಿಸಬೇಕೆಂದು ಒತ್ತಾಯಿಸಿದರು.…

    ಡಿ.21ರಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮ: ತಪ್ಪದೇ ಲಸಿಕೆ ಹಾಕಿಸಿ: ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್

    December 19, 2025

    ನಾಟಕ, ಬದುಕನ್ನು ಕಟ್ಟಿಕೊಡುವ ಜೊತೆಗೆ ಸಾಮರಸ್ಯ ಬೆಳೆಸುತ್ತದೆ: ವೈ.ಎಂ.ಪುಟ್ಟಣ್ಣಯ್ಯ

    December 19, 2025

    ಲೇಖಕಿಯರ ಸಂಘದ ದತ್ತಿ ಬಹುಮಾನಗಳಿಗೆ ಕಥೆ—ಕವನಗಳ ಆಹ್ವಾನ

    December 19, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.