ಕಾಳಿ ಸ್ವಾಮಿ ತುಂಬಿದ ಕೊಡ ಅಲ್ಲ ಅರ್ಧ ತುಂಬಿದ ಕೊಡ ಹಾಗಾಗಿ ಸರಿಯಾಗಿ ನಿಲ್ಲಲು ಸಾಧ್ಯವಾಗಿಲ್ಲ ಎಂದು ಶಾಸಕ ಎಸ್.ಆರ್.ಶ್ರೀ ನಿವಾಸ್ ಕಾಳಿ ಸ್ವಾಮಿ ವಿರುದ್ಧ ಗುಡುಗಿದರು.
ತಾಲೂಕಿನ ನಿಟ್ಟೂರು ಗ್ರಾಮದ ಜೈನಿಗರ ಬಡಾವಣೆಯಲ್ಲಿ ಸುಮಾರು 24 ಲಕ್ಷ ರೂಗಳ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ ಕಾಳಿ ಸ್ವಾಮಿಯ ಬಗ್ಗೆ ನಾನು ಯಾವುದೇ ಮಾತನಾಡಿಲ್ಲ.
ಯಾರು ಸಮಾಜದಲ್ಲಿ ಅಶಾಂತಿ ಮೂಡಿಸುವ ಸ್ವಾಮಿಗಳ ಬಗ್ಗೆ ಮಾತನಾಡಿದ್ದೇನೆ. ಹೊರತು ಈ ಕಾಳಿ ಸ್ವಾಮಿ ಯಾವ ಕಾರಣಕ್ಕೋಸ್ಕರ ಹೇಳಿಕೆ ನೀಡಿದ್ದಾರೋ ಗೊತ್ತಾಗುತ್ತಿಲ್ಲ. ಮಠಾಧೀಶರು ಹಾಗೂ ಸ್ವಾಮಿಗಳ ಮಾತುಗಳಲ್ಲಿ ಹಿಡಿತವಿರಬೇಕು. ಯಾವುದೇ ಸ್ವಾಮಿಗಳನ್ನು ನೋಡಿದರೆ ಕಾಲು ಮುಟ್ಟಿ ನಮಸ್ಕರಿಸುವ ಅಂತಹ ಭಾವನೆಯನ್ನು ಸಾರ್ವಜನಿಕರಲ್ಲಿ ಮೂಡಿಸುವಂತಹ ಸ್ವಾಮಿಗಳು ಲಕ್ಷಾಂತರ ಭಕ್ತರ ಸೇವೆಯಲ್ಲಿ ಹಾಗೂ ಸಮಾಜವನ್ನು ತಿದ್ದುವಂತಹ ಸ್ವಾಮಿಗಳು ಇದ್ದಾರೆ ಎಂದರು.
ಸಮಾಜದಲ್ಲಿ ಒಡಕು ಮೂಡಿಸುವಂತಹ ಯಾವುದೇ ವ್ಯಕ್ತಿಯಾಗಲಿ ಆತನನ್ನು ಶಿಕ್ಷಿಸುವುದು ಅತ್ಯವಶ್ಯಕ. ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಗಳ ಬಳಿ ಹೇಳಿಕೆ ನೀಡಿರುವುದು ಕಟು ಸತ್ಯ. ಯಡಿಯೂರಪ್ಪನವರು ಎಲ್ಲಾ ಸಮಾಜದವರನ್ನು ತಕ್ಕೆಂಗೆ ತೆಗೆದುಕೊಂಡು ರಾಜ್ಯ ನಡೆಸಿದಂತಹ ರಾಜಕಾರಣಿ.
ಕೇವಲ ಬುರುಡೆ ಸ್ವಾಮಿಗಳನ್ನು ದೂರವಿಟ್ಟು ಸಮಾಜದ ಎಲ್ಲಾ ವರ್ಗದವರನ್ನು ಎಲ್ಲಾ ಮಠಾಧೀಶರು ಗಳನ್ನು ಸಮನಾಗಿ ಕಂಡಂತಹ ಬಿಎಸ್ ಯಡಿಯೂರಪ್ಪನವರು ತಡವಾಗಿಯಾದರೂ ಸರ್ಕಾರವನ್ನು ಹೆಚ್ಚೆರಿಸಿರುವುದು ಶ್ಲಾಘನೀಯ ಎಂದರು.
ವರದಿ: ಮಂಜುನಾಥ್ ಗುಬ್ಬಿ