ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಣ ಕೊಬ್ಬರಿ ತಿಂದರೆ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಎನ್ನುತ್ತಾರೆ ವೈದ್ಯಕೀಯ ತಜ್ಞರು, ಒಣ ತೆಂಗಿನ ಕಾಯಿಯನ್ನು ನಿತ್ಯವೂ ಸೇವಿಸುವುದು ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಇದರಲ್ಲಿ ಕ್ಯಾಲ್ಸಿಯಂ, ಮೆಗ್ನಿಸಿಯಮ್, ಕಬ್ಬಿಣ ಮತ್ತು ವಿಟಮಿನ್-ಬಿ ಸಮೃದ್ಧವಾಗಿದೆ. ಅಲ್ಲದೆ, ಫೈಬರ್ ಕೂಡ ಇದೆ. ಇದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ ಮತ್ತು ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ.
ಕೊಬ್ಬರಿ ಎಣ್ಣೆ ಸಾಮಾನ್ಯ ತಾಪಮಾನದಲ್ಲಿ ಗಟ್ಟಿಯಾಗುತ್ತದೆ ಎಂಬ ಒಂದೇ ಕಾರಣಕ್ಕೆ ಇದು ಅನಾರೋಗ್ಯಕರ ಟ್ರಾನ್ಸ್ ಫ್ಯಾಟ್ ಹೊಂದಿದೆ, ಇದನ್ನು ಸೇವಿಸಬಾರದು ಎಂದು ಹಿಂದಿನ ದಿನಗಳಲ್ಲಿ ಹಬ್ಬಿದ್ದ ವದಂತಿಯನ್ನು ಈಗ ವೈಜ್ಞಾನಿಕ ಮಾಹಿತಿಗಳು ಅಲ್ಲಗಳೆದಿವೆ. ಒಂದು ವೇಳೆ ಹೀಗಾಗಿದ್ದಿದ್ದರೆ ದಿನದ ಮೂರೂ ಹೊತ್ತು ತೆಂಗಿನ ತುರಿಯಿಂದಲೇ ತಯಾರಿಸಿದ ಆಹಾರವನ್ನು ಸೇವಿಸುವ ನಮ್ಮ ಕರಾವಳಿಯ ಅಷ್ಟೂ ಜನರಿಗೆ ಭಯಂಕರ ಹೃದ್ರೋಗವಿರಬೇಕಿತ್ತು. ಇವರೆಲ್ಲಾ ಆರೋಗ್ಯವಾಗಿಯೇ ಇದ್ದಾರೆ ಎಂದರೆ ಮಸಲತ್ತು ಬೇರೇನೋ ಇರಬೇಕು ಎಂಬುದು ಸ್ಪಷ್ಟವಾಗುತ್ತದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy