ಗುಬ್ಬಿ: ಬಿಜೆಪಿ ಪಕ್ಷ ಕೋಮುಪ್ರಚೋದನೆ ಸೃಷ್ಟಿಸುವುದನ್ನು ನಿಲ್ಲಿಸಬೇಕು. ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಅತೀಕ್ ಅಹಮದ್ ಒತ್ತಾಯಿಸಿದ್ದಾರೆ.
ರಾಜ್ಯ ಮತ್ತು ಕೇಂದ್ರ ದಲ್ಲಿರುವ ಬಿಜೆಪಿ ಸರ್ಕಾರ ನಿತ್ಯ ವು ಕೋಮುಪ್ರಚೋದನೆ ನೀಡುವ ಮೂಲಕ ಗಲಭೆ ಸೃಷ್ಟಿಸುವುದು ನಿಲ್ಲಿಸಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಗುಬ್ಬಿ ನಗರದ ಪ್ರವಾಸಿ ಮಂದಿರದಲ್ಲಿ ದಿ.22ರಂದು ತುಮಕೂರಿನ ಗಾಜಿನಮನೆಯಲ್ಲಿ ನಡೆಯುವ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ ಸಮಾವೇಶ ದ ಕುರಿತು ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಮುಪ್ರಚೋದನೆ ನೀಡುವ ಮೂಲಕ ರಾಜ್ಯದಲ್ಲಿ ಶಾಂತಿ ಗಲಭೆ ಉಂಟು ಮಾಡುವ ಬದಲು ರಾಜ್ಯ ದ ಅಭಿವೃದ್ಧಿ ಗೆ ಹೆಚ್ಚಿನ ಒತ್ತು ನೀಡುವ ಕಡೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಮನಹರಿಸಲಿ ಎಂದರು.
ಕೇವಲ ಒಂದು ಸಮುದಾಯವನ್ನು ರಾಜ್ಯದ ಲ್ಲಿ ಶೋಷಣೆಗೆ ಒಳಗಾಗುವಂತೆ ಮಾಡಿದರೆ, ಅದು ರಾಜ್ಯದ ಅಭಿವೃದ್ಧಿ ಗೆ ಮಾರಕವಾಗುತ್ತದೆ. ಇಂದು ನಿತ್ಯವೂ ಒಂದಲ್ಲ ಒಂದು ರೀತಿಯಲ್ಲಿ ಮುಸ್ಲಿಂ. ದಲಿತ. ಕ್ರೈಸ್ತ. ಹಾಗೂ ಇತರೆ ಹಿಂದುಳಿದವರು ಅಲ್ಪ ಸಂಖ್ಯಾತರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವ ಬಹಳ ದುರಾದೃಷ್ಟಕರ ಸಂಗತಿಯಾಗಿದೆ ಎಂದರು.
ಈ ನಿಟ್ಟಿನಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ದಿ.22ರಂದು ತುಮಕೂರು ಡಿ.ಸಿ.ಕಚೇರಿಯ ಸಮೀಪದ ಗಾಜೀನ ಮನೆಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಾವೇಶ ಆಯೋಜನೆ ಮಾಡಿರುವುದರಿಂದ ಈ ಸಮಾವೇಶಕ್ಕೆ. ರಾಜ್ಯದ ನಾಯಕರಾದ ಸಿದ್ದರಾಮಯ್ಯ. ಡಿ.ಕೆ.ಶಿವಕುಮಾರ್. ಡಾ.ಜಿ.ಪರಮೇಶ್ವರ್. ಕೆ.ಎನ್.ರಾಜಣ್ಣ ಹಾಗೂ ಹಿರಿಯ ನಾಯಕರು. ಪಕ್ಷದ ಶಾಸಕರು.ವಿಧಾನ ಪರಿಷತ್ ಸದಸ್ಯರು. ಇನ್ನೂ ಅನೇಕ ಗಣ್ಯರು ಭಾಗವಹಿಸುತ್ತಿದ್ದು, ತುಮಕೂರು ಜಿಲ್ಲೆಯ ಎಲ್ಲಾ ತಾಲ್ಲೂಕಿನ ಅಲ್ಪಸಂಖ್ಯಾತ ಬಂಧುಗಳು ಸೇರಿ ಸುಮಾರು ಈ ಸಮಾವೇಶಕ್ಕೆ 20 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಭಾಗವಹಿಸುವ ನಿರೀಕ್ಷೆ ಇದೆ. ಈ ಮೂಲಕ ಸಮಾವೇಶ ದ ಯಶಸ್ವಿ ಗೆ ಗುಬ್ಬಿ ತಾಲ್ಲೂಕಿನ ಅಲ್ಪಸಂಖ್ಯಾತ ಬಂಧುಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರಸಿಂಹಯ್ಯ ಮಾತನಾಡಿ, ಈ ಸಮಾವೇಶವು ಅಲ್ಪಸಂಖ್ಯಾತರ ಅಭಿವೃದ್ಧಿ ಗೆ ಹೆಚ್ಚಿನ ಒತ್ತುನೀಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂದಾಗಲಿ ಈ ಸಮಾವೇಶಕ್ಕೆ ಜಿಲ್ಲಾ ಎಲ್ಲಾ ಗ್ರಾಮಗಳ ಅಲ್ಪಸಂಖ್ಯಾತ ಸಮುದಾಯದವರು ಭಾಗಿಯಾಗಲಿ ಎಂದು ತಿಳಿಸಿದರು.
ಮುಖಂಡ ಸಲೀಂ ಪಾಷ ಮಾತನಾಡಿ, ಇಂದು ರಾಜ್ಯ ದಲ್ಲಿ ಮುಸ್ಲಿಂ ಸಮುದಾಯವನ್ನು ಸರ್ಕಾರ ಕಡೆಗಣಿಸುತ್ತಿದೆ. ನಮಗೆ ಸರಿಯಾಗಿ ರಾಜಕೀಯ ಪ್ರತಿನಿಧ್ಯ ವಿಲ್ಲ. ಮುಸ್ಲಿಂ ಸಮಾಜದಲ್ಲಿ ಸಂಘಟನೆ ಕೊರತೆ ಕಾಣುತ್ತಿರುವುದೇ ಇಂದು ನಡೆಯುತ್ತಿರುವ ದೌರ್ಜನ್ಯಗಳ ನೈಜ ಉದಾಹರಣೆ ಯಾಗಿವೆ. ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ 30 ಕೋಟಿ ಇದ್ದರೂ ಸಹ ನಮಗೆ ರಾಜಕೀಯವಾಗಿ. ಸಾಮಾಜಿಕವಾಗಿ. ಶೈಕ್ಷಣಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ವಾಗದಿರುವುದು ನಮ್ಮ ದೌರ್ಭಾಗ್ಯ ವಾಗಿದೆ. ರಾಜ್ಯ ದಲ್ಲಿ ವೀರಶೈವ ಸಂಘಟನೆ ಇರುವಂತೆ ನಮ್ಮರಾಜ್ಯದಲ್ಲಿ ಮುಸ್ಲಿಂ ಸಂಘಟನೆ ಇಲ್ಲ ನಮ್ಮನ್ನು ಅಲ್ಪಸಂಖ್ಯಾತ ರೆಂದು ಗುರುತಿಸಿದ್ದು ನಾವು ಎಲ್ಲಾ ರೀತಿಯಲ್ಲೂ ಸಹ ಹಿಂದುಳಿದ ಸಮುದಾಯವಾಗಿದ್ದೇವೆ ಎಂದರು.
ಸರ್ಕಾರ ಸ್ವಚ್ಛ ಭಾರತವೆಂಬ ಧ್ಯೇಯ ವಾಕ್ಯದಂತೆ ಭೂಮಿ ಮೇಲಿರುವ ಕಸ ತೆಗೆದರೆ ಸಾಲದು ಮನಸ್ಸಿನಲ್ಲಿರು ಕಸ ಸ್ವಚ್ಛ ಮಾಡಿದರೆ ಮಾತ್ರ ಅದರಿಂದ ಸಾರ್ಥಕತೆ ಹೊಂದಲು ಸಾಧ್ಯ ವಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಕಾಂಗ್ರೆಸ್ ಮುಖಂಡ ಹೊನ್ನಗಿರಿ ಗೌಡ ಮಾತನಾಡಿ, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಗಳು ನಡೆದಾಗ ಕಾಂಗ್ರೆಸ್ ಮುಖಂಡರು ಧಾವಿಸುವ ಮೂಲಕ ಅಲ್ಪಸಂಖ್ಯಾತ ಜೊತೆಗೆ ನಾವೀದ್ದೇವೆ ಎಂಬ ಸಂದೇಶ ಸಾರುವ ಸಮಾವೇಶವಾಗಬೇಕು ಪ್ರತಿ ಜಿಲ್ಲೆ ಗೆ ಒಬ್ಬ ನಾಯಕರನ್ನು ನೇಮಿಸುವ ಮೂಲಕ ಪ್ರತಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಮೇಲೆ ಯಾವುದೇ ಗಲಾಟೆಗಳು ನಡೆದರೆ ಕಾಂಗ್ರೆಸ್ ನಾಯಕರು ತಕ್ಷಣವೇ ಸ್ಪಂದಿಸುವ ನಿಟ್ಟಿನಲ್ಲಿ ಮುಂದಾಗುವಂತೆ ಈ ಸಮಾವೇಶದಲ್ಲಿ ರಾಜ್ಯದ ನಾಯಕರು ಬಹಿರಂಗವಾಗಿ ತಿಳಿಸಬೇಕಿದೆ.
ಕಾಂಗ್ರೆಸ್ ಸರ್ಕಾರ ದಲ್ಲಿ ಮಾತ್ರವೇ ಅಲ್ಪಸಂಖ್ಯಾತರಿಗೆ ರಾಜಕೀಯ ಪ್ರತಿನಿಧ್ಯ ದೊರೆಯಲು ಸಾಧ್ಯ. ಜೆಡಿಎಸ್ ಪಕ್ಷ ಒಬ್ಬ ರಿಗೆ ಮಾತ್ರ ಸಚಿವ ಸ್ಥಾನ ನೀಡಿದರೆ, ಬಿಜೆಪಿ ಪಕ್ಷ ಯಾರಿಗೂ ಸಹ ರಾಜಕೀಯ ಸ್ಥಾನ ಮಾನ ನೀಡುವುದಿಲ್ಲ ಕಾಂಗ್ರೆಸ್ ಪಕ್ಷ ಮಾತ್ರ ಅಲ್ಪಸಂಖ್ಯಾತರ ಪರ ಹೋರಾಟ ಮಾಡುವ ಪಕ್ಷ ವಾಗಿದೆ ಎಂದರು.
ರಾಜ್ಯ ದಲ್ಲಿ ನಡೆಯುವ ಕೋಮುಗಲಭೆಗಳನ್ನು ತಡೆಯುವಲ್ಲಿ ಸರ್ಕಾರ ಮುಂದಾಗಬೇಕು ಜೊತೆಗೆ ಮುಸ್ಲಿಂ ಸಮಾಜದಲ್ಲಿ ಕೆಲವು ಯುವಕರು ಯಾವುದೇ ಪ್ರಚೋದನೆ ನೀಡುವ ವಿಡಿಯೋ ಗಳನ್ನು ಮೊಬೈಲ್ ನಲ್ಲಿ ಚಿತ್ರಿಕರಣ ಮಾಡುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದನ್ನು ತಡೆಯುವಲ್ಲಿ ಮುಸ್ಲಿಂ ಮುಖಂಡರು ಹೆಚ್ಚಿನ ನಿಗಾವಹಿಸಬೇಕು ಎಂದು ಸಲಹೆ ನೀಡಿದರು. ಇನ್ನೂ ಈ ಸಮಾವೇಶಕ್ಕೆ ಜಿಲ್ಲೆಯ ಎಲ್ಲಾ ಭಾಗಗಳಿಂದ ಹೆಚ್ಚಿನ ರೀತಿಯಲ್ಲಿ ಜನತೆ ಭಾಗವಹಿಸುವಂತೆ ಕರೆ ನೀಡಿದರು.
ಈ ವೇಳೆಯಲ್ಲಿ ಪ.ಪಂ.ಸದಸ್ಯ ಸಾದಿಕ್, ಗುಬ್ಬಿ ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಹಮದ್ ರಫಿ, ನಗರ ಅಧ್ಯಕ್ಷ ಶಿವನಂದ್, ಜಿ.ವಿ.ಮಂಜುನಾಥ್, ಸೌದ್ ಕುನ್ನಾಲ.ರಾಜಣ್ಣ ಹಾಗೂ ಇತರ ಮುಖಂಡರು ಹಾಜರಿದ್ದರು.
ವರದಿ: ಮಂಜುನಾಥ್, ಗುಬ್ಬಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5