nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು: ಬುದ್ಧನ ತತ್ವಗಳು ಸೂರ್ಯ ಚಂದ್ರರು ಇರುವ ತನಕ ಪ್ರಸ್ತುತ: ಡಾ.ಜಿ.ಪರಮೇಶ್ವರ್

    May 2, 2026

    ತುಮಕೂರು: ಚುನಾವಣಾ ಆಯೋಗ ಕೈಗೊಂಡಿರುವ SIR ಪ್ರಕ್ರಿಯೆಗೆ ವಿರೋಧ: ಬಿಎಸ್‌ ಎನ್‌ ಎಲ್‌ ಕಚೇರಿ ಮುಂಭಾಗ ಸಿಪಿಎಂ ಪ್ರತಿಭಟನೆ

    May 2, 2026

    ತುಮಕೂರು: ರಾಷ್ಟ್ರೀಯ ಮಟ್ಟದ ತಾಂತ್ರಿಕ ವಿಚಾರ ಸಂಕಿರಣ

    May 2, 2026
    Facebook Twitter Instagram
    ಟ್ರೆಂಡಿಂಗ್
    • ತುಮಕೂರು: ಬುದ್ಧನ ತತ್ವಗಳು ಸೂರ್ಯ ಚಂದ್ರರು ಇರುವ ತನಕ ಪ್ರಸ್ತುತ: ಡಾ.ಜಿ.ಪರಮೇಶ್ವರ್
    • ತುಮಕೂರು: ಚುನಾವಣಾ ಆಯೋಗ ಕೈಗೊಂಡಿರುವ SIR ಪ್ರಕ್ರಿಯೆಗೆ ವಿರೋಧ: ಬಿಎಸ್‌ ಎನ್‌ ಎಲ್‌ ಕಚೇರಿ ಮುಂಭಾಗ ಸಿಪಿಎಂ ಪ್ರತಿಭಟನೆ
    • ತುಮಕೂರು: ರಾಷ್ಟ್ರೀಯ ಮಟ್ಟದ ತಾಂತ್ರಿಕ ವಿಚಾರ ಸಂಕಿರಣ
    • ನವಿಲುಗಳ ಸಾಮೂಹಿಕ ಸಾವಿನ ರಹಸ್ಯ ಬಯಲು: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾಹಿತಿ
    • ಕಾರ್ಮಿಕ ಚಳುವಳಿಗಳು ಮತ್ತೆ ಪುಟ್ಟಿದೇಳಬೇಕಿದೆ: ಕಾರ್ಮಿಕ ದಿನಾಚರಣೆಯಲ್ಲಿ ಎಲ್. ಹನುಮಂತಯ್ಯ ಕರೆ
    • ಅಂಬೇಡ್ಕರ್ ಸ್ಮರಣೆ: ಪುಸ್ತಕ ವಿತರಣೆ ಕಾರ್ಯಕ್ರಮ
    • ಬಸವ ತತ್ವಗಳಿಂದ ಸಾಮಾಜಿಕ ಪಿಡುಗನ್ನು ತೊಲಗಿಸಿ: ಶಾಸಕ ಎಂ.ಟಿ.ಕೃಷ್ಣಪ್ಪ
    • ಚಿಕ್ಲಿ (ಜೆ) ಗ್ರಾಮದಲ್ಲಿ ಸಂಭ್ರಮದ ಅಂಬೇಡ್ಕರ್ ಜಯಂತಿ: ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕಾರ್ಮಿಕ ಚಳುವಳಿಗಳು ಮತ್ತೆ ಪುಟ್ಟಿದೇಳಬೇಕಿದೆ: ಕಾರ್ಮಿಕ ದಿನಾಚರಣೆಯಲ್ಲಿ ಎಲ್. ಹನುಮಂತಯ್ಯ ಕರೆ
    ತುಮಕೂರು May 2, 2026

    ಕಾರ್ಮಿಕ ಚಳುವಳಿಗಳು ಮತ್ತೆ ಪುಟ್ಟಿದೇಳಬೇಕಿದೆ: ಕಾರ್ಮಿಕ ದಿನಾಚರಣೆಯಲ್ಲಿ ಎಲ್. ಹನುಮಂತಯ್ಯ ಕರೆ

    By adminMay 2, 2026No Comments2 Mins Read
    citu

    ತುಮಕೂರು: ಕಾರ್ಮಿಕರ ಸೌಲಭ್ಯಗಳು, ಕಾನೂನು ಮತ್ತು ಸಾಮಾಜಿಕ ಭದ್ರತೆಗಳನ್ನು ಕಸಿಯುತ್ತಿರುವ ಇಂದಿನ ಸಮಯದಲ್ಲಿ ಹಿಂದಿಗಿಂತಲೂ ಸ್ವಲ್ಪ ಸೊರಗಿರುವ ಕಾರ್ಮಿಕರ ಚಳುವಳಿ ಪುಟ್ಟಿದೇಳಬೇಕು. ಸಂಘಟನೆಯು ತಾತ್ವಿಕ ನೆಲೆಯಲ್ಲಿ ಕಟ್ಟಬೇಕು. ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾದವರಿಗೆ ಮತ ನೀಡುವುದು ಸರಿಯಲ್ಲ. ಜಾತಿ, ಮತಗಳ ಹಿಂದೆ ಹೋಗುವುದು ಸರಿಯಲ್ಲ ಎಂಬ ನಿರ್ಧಾರಕ್ಕೆ ಬರಬೇಕು. ಸರ್ಕಾರಗಳು ಜೀವನ ನಡೆಸುವಂತಹ ಕನಿಷ್ಠ ವೇತನವನ್ನು ನೀಡುತ್ತಿಲ್ಲ. ಅದರ ನಿಗದಿಯಲ್ಲೂ ಸಹ ಸರ್ಕಾರ ಬದ್ಧತೆ ತೋರದೆ ಇರುವ ಬಗ್ಗೆ ಕಾರ್ಮಿಕರು ಒಂದಾಗಿ ಹೋರಾಟ ನಡೆಸುವ ಅಗತ್ಯವಿದೆ ಎಂದು ಮಾಜಿ ರಾಜ್ಯ ಸದಸ್ಯರು, ಲೇಖಕರು ಆದ ಎಲ್. ಹನುಮಂತಯ್ಯ ಅವರು ಅಭಿಪ್ರಾಯಪಟ್ಟರು.

    ಸಿಐಟಿಯು ತುಮಕೂರು ಜಿಲ್ಲಾ ಸಮಿತಿಯು ಆಯೋಜಿಸಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ಸಮಯದಲ್ಲಿ ಇದ್ದ ಕಲ್ಯಾಣದ ಪರಿಕಲ್ಪನೆ ಇಂದು ಇನ್ನಷ್ಟು ಬಲಗೊಳ್ಳಬೇಕಾಗಿತ್ತು. ಆದರೆ ಅದನ್ನು ಕಸಿಯಲಾಗುತ್ತಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ ಸಂಬಂಧಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಲ್ಲಿ ಸುಮಾರು 14 ಲಕ್ಷ ಮತ್ತು ರಾಜ್ಯ ಸರ್ಕಾರದಲ್ಲಿ 3 ಲಕ್ಷದಷ್ಟು ಉದ್ಯೋಗಗಳು ಖಾಲಿ ಇವೆ, ಇದನ್ನು ತುಂಬಬೇಕಾದ ಅಗತ್ಯವಿದೆ ಎಂದರು.


    Provided by
    Provided by

    ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಿಂದೆ ಜನತೆ ಹಸಿವಿನಿಂದ ಸಾಯಬಾರದು ಮತ್ತು ಅವರಿಗೆ ಉದ್ಯೋಗ ಗ್ರಾಮೀಣ ಪ್ರದೇಶದಲ್ಲೇ ಸಿಗುವ ಯೋಜನೆಯನ್ನು ಯುಪಿಐ ಅವಧಿಯಲ್ಲಿ ರೂಪಿಸಿದ್ದರು. ಆದರೆ ಅಂದು 60 ಜನ ಎಡಪಕ್ಷಗಳ (ಕಮ್ಯುನಿಸ್ಟ್ ಪಕ್ಷದ) ಅಂದಿನ ಸಂಸತ್ ಸದಸ್ಯರ ಒತ್ತಾಸೆಯಿತ್ತು ಎಂದ ಅವರು, ಅದನ್ನು ಬಿಜೆಪಿ ಸರ್ಕಾರ ನಾಶ ಮಾಡುತ್ತಿದೆ ಎಂದು ಆಕ್ಷೇಪಿಸಿದರು. ಇದರ ವಿರುದ್ಧವೂ ಜನ ಧ್ವನಿ ಎತ್ತಬೇಕು ಎಂದರು.

    ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಕಮಲ ಮಾತನಾಡಿ, ಆಳುತ್ತಿರುವ ಸರ್ಕಾರಗಳು ಜನಹಿತ ಮರೆತು ಸ್ವಹಿತಕ್ಕೆ ಬಂಡವಾಳದ ಹಿತಕ್ಕೆ ಮಾತ್ರ ದುಡಿಯುತ್ತಿವೆ ಎಂದು ಆಪಾದಿಸಿದರು. ಕಸದ ವಾಹನ ಚಾಲಕರು ಮತ್ತು ಸಹಾಯಕರ ಸಂಘದ ಪ್ರಧಾನ ಕಾರ್ಯದರ್ಶಿ ಮಾರುತಿ ಅವರು ಮಾತನಾಡಿ, ಸ್ವಚ್ಛತಾ/ಮುನ್ಸಿಪಲ್ ಕಾರ್ಮಿಕರ ನಡುವೆ ತಾರತಮ್ಯ ಮಾಡಲಾಗಿದೆ. ನಾಮಿಲ್ಲದ ವೇತನಕ್ಕೆ ಹೆಚ್ಚು ದುಡಿಸಲಾಗುತ್ತಿದೆ. ಸರ್ಕಾರ ನ್ಯಾಯೋಚಿತವಾಗಿ ವರ್ತಿಸುವಂತೆ ಒತ್ತಾಯಿಸಿದರು.

    ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಭಾರತ ಸರ್ಕಾರವು ಸಂವಿಧಾನ ವಿರೋಧಿ, ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆ ಮತ್ತು ಶ್ರಮ ನೀತಿ ಜಾರಿಗೆ ಹೊರಟಿದೆ. ಇದು ಕಾರ್ಮಿಕರ ತೀವ್ರ ವಿರೋಧದ ನಡುವೆ ಯಾರ ಒತ್ತಕ್ಕೆ ಜಾರಿ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು. ಕಾರ್ಮಿಕರ ಐಕ್ಯತೆ ಮತ್ತು ಸಮರ್ಥಿರ ಹೋರಾಟ ಇಂದಿನ ಅಗತ್ಯ ಎಂದರು. ಕಾಲಕ್ಕೆ ತಕ್ಕಂತೆ ಕಾರ್ಮಿಕ ಸಂಘಟನೆಗಳನ್ನು ಬದಲಿಸಬೇಕಾದ ಅಗತ್ಯವಿದೆ. ಅಳುತ್ತಿರುವ ಸರ್ಕಾರಗಳನ್ನು ಬದಲಿಸುವ ಶಕ್ತಿ ಕಾರ್ಮಿಕರಿಗೆ ದುಡಿಯುವವರಿಗೆ ಇದೆ, ಅದನ್ನು ವಿವೇಚನೆಯಿಂದ ಬಳಸಬೇಕು ಎಂದರು.

    ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ಬಾರ್ ಬಾನು ಮಾತನಾಡಿ, ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಇಲ್ಲ. ಸರ್ಕಾರವೇ ಸ್ಕೀಮ್ ನೌಕರರನ್ನು ದುಡಿಸಿಕೊಳ್ಳುವ ಸರ್ಕಾರ, ಶೋಷಕನಂತೆ ವರ್ತಿಸುತ್ತಿದೆ ಎಂದರು.

    ಆರಂಭದಲ್ಲಿ ಮೇ ಡೇ ಸಮಿತಿ ಸಂಚಾಲಕ ಷಣ್ಮುಖಪ್ಪ ಸ್ವಾಗತಿಸಿ, ಸುಜಿತ್ ನಾಯಕ್ ವಂದಿಸಿದರು. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.

    ವೇದಿಕೆಯಲ್ಲಿ ಜಿಲ್ಲಾ ಖಜಾಂಚಿ ಎ. ಲೋಕೇಶ್, ಕಟ್ಟಡ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಬಿ.ಉಮೇಶ್, ಐರಾಂಟಿಂಕಾಲೀಲ್, ಸಾರಿಗೆ ನೌಕರರ ಸಂಘದ ಅಧ್ಯಕ್ಷ ದೇವರಾಜು, ಸಿಐಟಿಯು ಕಾರ್ಯದರ್ಶಿಗಳಾದ ಪುಷ್ಪ, ಶಿವಕುಮಾರಸ್ವಾಮಿ, ಎನ್.ಕೆ.ಸುಬ್ರಹ್ಮಣ್ಯ, ಅಬ್ದುಲ್ ಮುನಾಫ್, ಉಪಾಧ್ಯಕ್ಷರುಗಳಾದ ಅನುಸೂಯ, ಪಾರ್ವತಮ್ಮ, ಬಿಡಿ ಕಾರ್ಮಿಕ ಸಂಘಟನೆಯ ಚಿಕ್ಕೇಗೌಡ, ಪುಟ್ಟಣ್ಣ, ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ವಸೀಂಅಕ್ರಮ್, ಮುತ್ತುರಾಜ್, ಹಮಾಲಿ ಸಂಘಟನೆಯ ನಾಗರಾಜು, ನಿಖಿತಾ ಕಾರ್ಮಿಕ ಸಂಘದ ಯತೀಶ್ ಕುಮಾರ್, ಮಹಾನಗರಪಾಲಿಕೆ ನೀರು ಸರಬರಾಜು ನೌಕರರ ಸಂಘ, ಕುಮಾರ್, ಐಸಾಕ್ ಕಾರ್ಮಿಕ ಸಂಘ ಸ್ಟಾಲಿ ಸುಕುಮಾರ್, ಆಟೋಚಾಲಕರ ಸಂಘಟನೆಯ ಇಂತಿಯಾಜ್ ಪಾಷ, ತಿಪ್ಪೇಸ್ವಾಮಿ, ತುಮಕೂರು ತಾಂತ್ರಿಕ ಸಂಸ್ಥೆಗಳ ಮುಖಂಡ ದೊಡ್ಡರಾಮೇಗೌಡ, ತುಮಕೂರು ವಿವಿ ಗಂಗಮ್ಮ ಮತ್ತಿತರರು ಹಾಜರಿದ್ದರು.

    ಕಾರ್ಯಕ್ರಮದಲ್ಲಿ ಅರುಣ್ ಮತ್ತು ತಿರುಮಲಯ್ಯ ಸಂಘಟಿಗಾರು ಹೋರಾಟ ಗೀತೆಗಳನ್ನು ಹಾಡಿದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ತುಮಕೂರು: ಬುದ್ಧನ ತತ್ವಗಳು ಸೂರ್ಯ ಚಂದ್ರರು ಇರುವ ತನಕ ಪ್ರಸ್ತುತ: ಡಾ.ಜಿ.ಪರಮೇಶ್ವರ್

    May 2, 2026

    ತುಮಕೂರು: ಚುನಾವಣಾ ಆಯೋಗ ಕೈಗೊಂಡಿರುವ SIR ಪ್ರಕ್ರಿಯೆಗೆ ವಿರೋಧ: ಬಿಎಸ್‌ ಎನ್‌ ಎಲ್‌ ಕಚೇರಿ ಮುಂಭಾಗ ಸಿಪಿಎಂ ಪ್ರತಿಭಟನೆ

    May 2, 2026

    ತುಮಕೂರು: ರಾಷ್ಟ್ರೀಯ ಮಟ್ಟದ ತಾಂತ್ರಿಕ ವಿಚಾರ ಸಂಕಿರಣ

    May 2, 2026

    Leave A Reply Cancel Reply

    Our Picks

    ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ನಟ ದರ್ಶನ್: ಮೇ 4ಕ್ಕೆ ವಿಚಾರಣೆ

    April 29, 2026

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರು: ಬುದ್ಧನ ತತ್ವಗಳು ಸೂರ್ಯ ಚಂದ್ರರು ಇರುವ ತನಕ ಪ್ರಸ್ತುತ: ಡಾ.ಜಿ.ಪರಮೇಶ್ವರ್

    May 2, 2026

    ತುಮಕೂರು: ಜೀವನದ ಸತ್ಯವನ್ನು ಅರ್ಥಪೂರ್ಣವಾಗಿ ಬಹಳ ಸರಳವಾಗಿ ತಿಳಿಸಿದ ಬುದ್ಧನ ತತ್ವಗಳು ಸೂರ್ಯ ಚಂದ್ರರು ಇರುವ ತನಕ ಪ್ರಸ್ತುತವಾಗಿರುತ್ತವೆ ಎಂದು…

    ತುಮಕೂರು: ಚುನಾವಣಾ ಆಯೋಗ ಕೈಗೊಂಡಿರುವ SIR ಪ್ರಕ್ರಿಯೆಗೆ ವಿರೋಧ: ಬಿಎಸ್‌ ಎನ್‌ ಎಲ್‌ ಕಚೇರಿ ಮುಂಭಾಗ ಸಿಪಿಎಂ ಪ್ರತಿಭಟನೆ

    May 2, 2026

    ತುಮಕೂರು: ರಾಷ್ಟ್ರೀಯ ಮಟ್ಟದ ತಾಂತ್ರಿಕ ವಿಚಾರ ಸಂಕಿರಣ

    May 2, 2026

    ನವಿಲುಗಳ ಸಾಮೂಹಿಕ ಸಾವಿನ ರಹಸ್ಯ ಬಯಲು: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾಹಿತಿ

    May 2, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.