nammatumakuru

    Subscribe to Updates

    Get the latest creative news from FooBar about art, design and business.

    What's Hot

    ನ.28 ರಂದು ಪತ್ರಿಕಾ ವಿತರಕರ ಕ್ರೀಡಾಕೂಟದ ಬಹುಮಾನ ವಿತರಣೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

    November 27, 2025

    ಡಿ.6–7ರಂದು ಶ್ರೀ ಅಯ್ಯಪ್ಪಸ್ವಾಮಿಯ ಚರಬಿಂಬ ಪ್ರತಿಷ್ಠಾಪನಾ ಮಹೋತ್ಸವ

    November 27, 2025

    ಮಹಿಳೆಗೆ ಚಾಕು ತೋರಿಸಿ ಚಿನ್ನದ ಸರ ಕಳವು!

    November 27, 2025
    Facebook Twitter Instagram
    ಟ್ರೆಂಡಿಂಗ್
    • ನ.28 ರಂದು ಪತ್ರಿಕಾ ವಿತರಕರ ಕ್ರೀಡಾಕೂಟದ ಬಹುಮಾನ ವಿತರಣೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ
    • ಡಿ.6–7ರಂದು ಶ್ರೀ ಅಯ್ಯಪ್ಪಸ್ವಾಮಿಯ ಚರಬಿಂಬ ಪ್ರತಿಷ್ಠಾಪನಾ ಮಹೋತ್ಸವ
    • ಮಹಿಳೆಗೆ ಚಾಕು ತೋರಿಸಿ ಚಿನ್ನದ ಸರ ಕಳವು!
    • ಡಕಾಯಿತಿಗೆ ಸಂಚು: ಐವರ ಬಂಧನ
    • ಪದವೀಧರರ ಮತದಾರರ ಕರಡು ಪಟ್ಟಿ ಪ್ರಕಟ
    • ನ.30 ರಂದು ಅಮೋಘ ಸಂಗೀತ ಕಛೇರಿ
    • ಹುಳಿಯಾರು: ಘನತ್ಯಾಜ್ಯ ವಿಲೇವಾರಿ ಘಟಕ ಅವಕಾಶ ಕೊಡುವುದಿಲ್ಲ:  ಗ್ರಾಮಸ್ಥರಿಂದ ವಿರೋಧ
    • ಖಾಸಗಿ ಆಸ್ಪತ್ರೆಗಳೊಂದಿಗೆ ಶಾಮೀಲಾದರೆ ಕ್ರಮ: ಸರ್ಕಾರಿ ವೈದ್ಯರು, ಸಿಬ್ಬಂದಿಗೆ ಶಾಸಕ ಎಚ್.ವಿ.ವೆಂಕಟೇಶ್ ಎಚ್ಚರಿಕೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಯೋಗೀಶ್ ರವರೇ ಮೊದಲು ಕೀಳು ಮಟ್ಟದ ರಾಜಕಾರಣ ಬಿಡಿ: ಯುವ ಮೋರ್ಚಾದ ಅಧ್ಯಕ್ಷ ಗೌರೀಶ್ ಕಿಡಿ
    ತುರುವೇಕೆರೆ September 7, 2023

    ಯೋಗೀಶ್ ರವರೇ ಮೊದಲು ಕೀಳು ಮಟ್ಟದ ರಾಜಕಾರಣ ಬಿಡಿ: ಯುವ ಮೋರ್ಚಾದ ಅಧ್ಯಕ್ಷ ಗೌರೀಶ್ ಕಿಡಿ

    By adminSeptember 7, 2023No Comments2 Mins Read
    turuvekere

    ತುರುವೇಕೆರೆ: ಕ್ಷೇತ್ರಕ್ಕೆ ಮಾಜಿ ಶಾಸಕರಾದ  ಜಯರಾಮಣ್ಣ ನವರು ನೀರಿನ ಹೋರಾಟಕ್ಕೆ ಶಾಶ್ವತ ಪರಿಹಾರವನ್ನು ನೀಡಿದ್ದಾರೆ ಹಾಗೂ  ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತ  ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದಾರೆ ಯೋಗೀಶ್ ರವರೇ ಮೊದಲು ಕೀಳು ಮಟ್ಟದ ರಾಜಕಾರಣ ಬಿಡಿ ನಾಲಿಗೆ ಬಿಗಿ ಹಿಡಿದು ಮಾತನಾಡಿ ಯುವ ಮೋರ್ಚಾದ ಅಧ್ಯಕ್ಷ ಗೌರೀಶ್ ಆಕ್ರೋಶ ವ್ಯಕ್ತಪಡಿಸಿದರು.

    ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ  ಸುದ್ದಿಘೋಷ್ಠಿಯಲ್ಲಿ  ಮಾತನಾಡಿದ ತಾಲೂಕು ಯುವ ಮೋರ್ಚಾದ ಅಧ್ಯಕ್ಷ ಗೌರೀಶ್ ಅವರು,  ಜೆಡಿಎಸ್ ಪಕ್ಷದ ವಕ್ತಾರಾದ ವೆಂಕಟಪುರ ಯೋಗೇಶ್   ಮಾಜಿ ಶಾಸಕರಾದ ಮಸಾಲೆ ಜಯರಾಮ್ ಅವರು ಕಮಿಷನ್ ದಂಧೆಗಾಗಿ ಕೆಲಸ ಮಾಡಿದ್ದಾರೆ  ಎಂದು ನೀಡಿರುವ ಹೇಳಿಕೆಯನ್ನ ಖಂಡಿಸಿದರು.


    Provided by
    Provided by

    ಅವರಿಗೂ ಗೊತ್ತಿದೆ ಮತ್ತೆ ಹೇಳುತ್ತಾರೆ ತೂಬುಗಳನ್ನು ಹೊಡೆದು ನೀರು ಬಿಡುತ್ತೇವೆ ಅಷ್ಟು ಪೌರುಷ ನಮಗಿದೆ ಎಂದು ತೂಬನ್ನು ಹೊಡೆದು ಹಾಕಿ ನೀರು ಬಿಡುವ ಅವಶ್ಯಕತೆ ಇಲ್ಲ, ಇವತ್ತು ದಂಡಿನಶಿವರ ಹೋಬಳಿಯ ಕೆರೆಗಳಿಗೆ ನೀರು ಹರಿಸುವ  ಡಿ 10 ತೂಬು ಆಗಿರಬಹುದು ನಮ್ಮ ಮಾಜಿ ಸಣ್ಣ ನೀರಾವರಿಯ ಸಚಿವರಾದಂತಹ ಮಾಧುಸ್ವಾಮಿಯವರು ಮತ್ತು ಮಾಜಿ ಶಾಸಕರಾದ  ಜಯರಾಮಣ್ಣ ನವರು ಸೇರಿ ನೀರಿನ ಹೋರಾಟಕ್ಕೆ ಶಾಶ್ವತ ಪರಿಹಾರವನ್ನು ನೀಡಿದ್ದಾರೆ. ಹಾಲಿ ಶಾಸಕರು ಕಳೆದ ಬಾರಿ ಶಾಸಕರಾಗಿದ್ದಾಗ ನೀರಿನ ಹೋರಾಟಕ್ಕಾಗಿ ಶಾಸಕರು ಹಲವಾರು ಕೇಸುಗಳನ್ನು ಹಾಕಿಸಿಕೊಂಡಿದ್ದಾರೆ ಅವುಗಳು ಇನ್ನು ತೀರ್ಮಾನ ಮಾಡಿಸಿಕೊಂಡಿಲ್ಲ ತಾವರೆಕೆರೆಯಿಂದ ದಂಡಿನಶಿವರದ ವರೆಗೆ ಆಗಿರುವ ರಸ್ತೆ ಮತ್ತೆ ಕಲ್ಲೂರು ರಸ್ತೆ ಉದಾಹರಣೆ ಸಾಕು, ಯಾವುದೇ ಕಮಿಷನ್ ಆಸೆಗಾಗಿ ಈ ಕೆಲಸ ಮಾಡಿಲ್ಲ ಜಯರಾಮಣ್ಣನವರು  ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತ  ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದಾರೆ ಎಂದರು.

    ಯೋಗೀಶ್ ರವರೇ ಮೊದಲು  ನಾಲಿಗೆ ಬಿಗಿ ಹಿಡಿದು ಮಾತನಾಡಿ, ಕ್ಷೇತ್ರದ ಜನತೆಗೆ ಗೊತ್ತಿದೆ ಜಯರಾಮಣ್ಣನವರ ಕಾಲದಲ್ಲಿ  ಏನು ಕೆಲಸ ಆಗಿದೆ ಅಂತ. ಅವರ ಅವಧಿಯಲ್ಲಿ ದಂಡಿನ ಶಿವರದಿಂದ ದುಂಡ ವರೆಗೂ ಒಳ್ಳೆಯ ರಸ್ತೆಯನ್ನು ಮಾಡಿಸಿದ್ದಾರೆ, ಈಗ ಮಾತನಾಡುವವರಿಗೆ ಗೊತ್ತೋ ಗೊತ್ತಿಲ್ಲವೋ  ಊರಲ್ಲಿ ಇದ್ದರೂ ಇರಲಿಲ್ಲನವೋ ನಮಗೆ ಗೊತ್ತಿಲ್ಲ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳ ಸುತ್ತೋಲೆಯನ್ನು ಕೊಡುತ್ತೇವೆ, ಮನೆಯಲ್ಲಿ ಕುಳಿತುಕೊಂಡು ಬಿಡುವಿನ ವೇಳೆಯಲ್ಲಿ ಓದಿ. ಆಗ ಗೊತ್ತಾಗುತ್ತದೆ ಜಯರಾಮಣ್ಣನವರು ಏನು ಕೆಲಸ ಮಾಡಿದ್ದಾರೆ ಎಂದು, ಅಧಿಕಾರಕ್ಕಾಗಿ ಕೆಲವರ ಕುತಂತ್ರದಿಂದ ಜಯರಾಮಣ್ಣನವರು, ಸೋತಿರಬಹುದು. ಆದರೂ ಮತದಾರರು 58000ಕ್ಕೂ ಹೆಚ್ಚು ಮತಗಳನ್ನು ನೀಡಿದ್ದಾರೆ. ಮತದಾರರು ನಮ್ಮ ಪಕ್ಷದ ಬಲವನ್ನು ತೋರಿದ್ದಾರೆ, ಮುಂದಿನ ದಿನಗಳಲ್ಲಿ ಅವರ ಶಕ್ತಿ ಇರುತ್ತದೆ ಹೋರಾಟ ಮಾಡುತ್ತಾರೆ ಮತ್ತೆ ಈ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಲು ಅವಕಾಶ ಮಾಡಿಕೊಡುತ್ತಾರೆ. ಆದ್ದರಿಂದ ವೆಂಕಟಾಪುರ ಯೋಗೀಶ್ ರವರೆ ತಾವು ಮೊನ್ನೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದ ಮಾತನ್ನು ವಾಪಸ್ಸು ಪಡೆಯಬೇಕು ಈ ದಿನ ಅವರಿಗೆ ಎಚ್ಚರಿಕೆನೀಡುತ್ತಿದ್ದೇವೆ ಎಂದರು.

    ಮುಖಂಡರಾದ ವಿ.ಬಿ.ಸುರೇಶ್ ಮಾತನಾಡಿ, ಮೊನ್ನೆ ಜೆಡಿಎಸ್ ಪಕ್ಷದ ಸುದ್ದಿಗೋಷ್ಠಿಯಲ್ಲಿ ವೆಂಕಟಾಪುರ ಯೋಗೀಶ್ ರವರು ಜಯರಾಮಣ್ಣ ನವರ ವಿರುದ್ಧ ಇಲ್ಲಸಲ್ಲದ ಆರೋಪದ ಹೇಳಿಕೆಯನ್ನು ನೀಡಿದ್ದಾರೆ ಜಯರಾಮಣ್ಣನವರ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಆದರೆ ಜೈರಾಮಣ್ಣನವರು ಒಂದಲ್ಲ ನೂರಾರು ಅಭಿವೃದ್ಧಿಯ ಕೆಲಸಗಳನ್ನು ಮಾಡಿದ್ದಾರೆ ನೆನೆಗುದಿಗೆ ಬಿದ್ದಿದ್ದ ದಬ್ಬೇಗಟ್ಟ ತುರುವೇಕೆರೆಯ ಮುಖ್ಯ ರಸ್ತೆಯನ್ನು 25 ಕೋಟಿ ರೂ ವೆಚ್ಚದಲ್ಲಿ ಮಾಡಿದ್ದಾರೆ. ಮೊದಲಿಗೆ ಈ ರಸ್ತೆಯಲ್ಲಿ ಗರ್ಭಿಣಿಯ ಹೆಂಗಸರು ಪ್ರಯಾಣಿಸುವ ಹಾಗೆ ಇರಲಿಲ್ಲ ರಸ್ತೆ ಮಧ್ಯದಲ್ಲಿಯೇ ಡೆಲಿವರಿಗಳು ಆಗುವಂತಹ ಸನ್ನಿವೇಶಗಳು ನಡೆದು ಹೋಗಿದ್ದವು. ಗಬ್ಬೆಘಟ್ಟ ಭಾಗದ ಜನರ ಒತ್ತಾಯದ ಮೇರೆಗೆ ಈ ರಸ್ತೆಯನ್ನು ಮಾಡಿದ್ದಾರೆ ಎಂದರು.

    ಆದರೆ ಹಾಲಿ ಶಾಸಕರು 20 ವರ್ಷಗಳ ಕಾಲ ಶಾಸಕರಾಗಿದ್ದರೂ ಈ ಕೆಲಸ ಏಕೆ ಮಾಡಿರಲಿಲ್ಲ ಎಂದು ಯಾವತ್ತು ಪ್ರಶ್ನೆಯನ್ನು ಮಾಡಿಲ್ಲ, ಆದರೆ ಪದೇಪದೇ ಜಯರಾಮಣ್ಣನವರ ಬಗ್ಗೆ ಮಾತನಾಡುವುದು ಸರಿಯಲ್ಲ, ನಾನು ಒಂದು ಮಾತನ್ನು ಹೇಳುತ್ತೇನೆ ತಾಳಕೆರೆ ಸುಬ್ರಹ್ಮಣ್ಯಂ ರವರನ್ನು ಹೊರತುಪಡಿಸಿ ಅನೇಕ ಶಾಸಕರು ಕೆಲಸ ಮಾಡಿದ್ದಾರೆ, ಅವರೆಲ್ಲರನ್ನೂ ಮೀರಿ ಮಸಾಲ ಜಯರಾಮಣ್ಣನವರು ಮಿಗಿಲಾಗಿ ಕೆಲಸ ಮಾಡಿದ್ದಾರೆ ಎಂದರು.

    ಈ ಸಂದರ್ಭದಲ್ಲಿ ಅಮ್ಮಸಂದ್ರ ಗ್ರಾಮ ಪಂಚಾಯಿತಿ ಉಪಾದ್ಯಕ್ಷ ನರಸಿಂಹಯ್ಯ, ಅರಳೀಕೆರೆ ಬಸವರಾಜು, ಅಶೋಕ್ , ಕುಮಾರ್ ಜಗದೀಶ್, ಅಮ್ಮಸಂದ್ರ ಭರತ್, ರಾಕೇಂದು, ತನುಜ್ ಗೌಡ, ದಯಾನಂದ ಮತ್ತಿತರರಿದ್ದರು

    ವರದಿ: ಸುರೇಶ್ ಬಾಬು ಎಂ. ತುರುವೇಕೆರೆ

    admin
    • Website

    Related Posts

    ಏತ ನೀರಾವರಿ ಯೋಜನೆಗೆ ಹೆಚ್ಚುವರಿ ಅನುದಾನ ಮಂಜೂರು ಮಾಡಿ: ಶಾಸಕ ಎಂ.ಟಿ.ಕೃಷ್ಣಪ್ಪ ಒತ್ತಾಯ

    November 20, 2025

    ಸರ್ಕಾರಿ ಶಾಲೆಗಳು ಬೇಡವಾಗಿದೆ, ಕಾರಣ ಅರಿಯಬೇಕಿದೆ: ಶಾಸಕ ಎಂ.ಟಿ.ಕೃಷ್ಣಪ್ಪ

    November 18, 2025

    ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಮತದಾರರಾಗಲು ನೋಂದಣಿ ಮಾಡಿಸಿ: ಡಿ.ಪಿ.ವೇಣುಗೋಪಾಲ್

    October 26, 2025

    Comments are closed.

    Our Picks

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ನ.28 ರಂದು ಪತ್ರಿಕಾ ವಿತರಕರ ಕ್ರೀಡಾಕೂಟದ ಬಹುಮಾನ ವಿತರಣೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

    November 27, 2025

    ತುಮಕೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ತುಮಕೂರು ಜಿಲ್ಲಾ ದಿನಪತ್ರಿಕೆ ಹಂಚಿಕೆದಾರರ ಸಂಘ ಇವರ ವತಿಯಿಂದ ನ.28 ರಂದು…

    ಡಿ.6–7ರಂದು ಶ್ರೀ ಅಯ್ಯಪ್ಪಸ್ವಾಮಿಯ ಚರಬಿಂಬ ಪ್ರತಿಷ್ಠಾಪನಾ ಮಹೋತ್ಸವ

    November 27, 2025

    ಮಹಿಳೆಗೆ ಚಾಕು ತೋರಿಸಿ ಚಿನ್ನದ ಸರ ಕಳವು!

    November 27, 2025

    ಡಕಾಯಿತಿಗೆ ಸಂಚು: ಐವರ ಬಂಧನ

    November 27, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.