ಸರಗೂರು: ದಾರ್ಶನಿಕ ಮಹಾಶಯರ ಜಯಂತಿಗಳ ಆಚರಣೆಯನ್ನು ಆಚರಿಸಲೆಂದೇ ಸರಕಾರ ನಿಗದಿತ ದಿನದಂದು ರಜಾ ಘೋಷಣೆ ಮಾಡಿ ಅನುವು ಮಾಡಿಕೊಡುತ್ತದೆ ಎಂದು ಪ.ಪಂ. ಮುಖ್ಯಾಧಿಕಾರಿ ಮಂಜುನಾಥ ತಿಳಿಸಿದರು.
ತಾಲೂಕಿನ ಪಟ್ಟಣದ ಪ.ಪಂ. ಆವರಣದಲ್ಲಿ ಗುರುವಾರ ದಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸಂಭ್ರಮ ಸಡಗರದಿಂದ ಪೋಟೋಗೆ ಪುಷ್ಪಾರ್ಚನೆ ಸಲ್ಲಿಸಿ ನಂತರ ಮಾತನಾಡಿದರು.
ಸ್ವಾತಂತ್ರ್ಯ ದಿನಾಚರಣೆ, ಗಾಂಧಿಜಯಂತಿ ಮೊದಲಾದ ರಾಷ್ಟ್ರೀಯ ಹಬ್ಬಗಳ ಹಾಗೆ ಇದು ಕೇವಲ ಸರಕಾರಿ ಆಚರಣೆ ಮಾತ್ರವಲ್ಲ, ಬದಲಾಗಿ ವಾಲ್ಮೀಕಿ, ಬೇಡ ಸಮುದಾಯದ ಮನೆಮನೆಯ ಹಬ್ಬವಾಗಿ ಸಮುದಾಯದೊಳಗೆ ಚಲಿಸುತ್ತದೆ. ಈ ಚಲನೆ ಕನಿಷ್ಠ ಒಂದು ತಿಂಗಳತನಕ ಜೀವಂತವಿರುತ್ತದೆ ಎಂದರು.
ಆದ್ದರಿಂದ ಸದರಿ ದಿನಗಳಂದೇ ದಿನಾಚಾರಣೆಯನ್ನು ಆಚರಿಸುವುದು ಸೂಕ್ತವಾಗಿರುತ್ತದೆ. ಶ್ರೀ ಮಹರ್ಷಿ ವಾಲ್ಮೀಕಿ ರಚಿಸಿರುವಂತಹ ರಾಮಾಯಣದಂತಹ ಉತ್ತಮ ಕೊಡುಗೆಗಳನ್ನು ಅನುಸರಿಸಿದ್ದೇ ಆದಲ್ಲಿ, ಎಲ್ಲಾ ಸಮುದಾಯದವರು ಮುಂದೆ ಬರಲು ಅನುಕೂಲಕವಾಗಲಿದೆ ಎಂದು ತಿಳಿಸಿದರು.
ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಶ್ರೀನಿವಾಸ.ಮಾತನಾಡಿದರು. ಈ ಸಂದರ್ಭದಲ್ಲಿ ಪಪಂ ಉಪಾಧ್ಯಕ್ಷ ಶಿವಕುಮಾರ್, ಸದಸ್ಯರು ವಿನಾಯಕ ಪ್ರಸಾದ್,ಉಮರಾಮಚಂದ್ರ, ಚೆಲುವ ಕೃಷ್ಣ,ನೂರಳಾಸ್ವಾಮಿ,ಸಣ್ಣತಾಯಮ್ಮ, ದಿವ್ಯ ನವೀನ್, ಮುಖಂಡರು ಪುಟ್ಟ ಹನುಮಯ್ಯ, ಶ್ರೀನಾಥ್,ರಾಮು, ನವೀನ್,ಸಿಬ್ಬಂದಿ ವರ್ಗದವರು ಪಳಿನಿ ಸ್ವಾಮಿ,ರಾಮು,ಅರುಣ್ ಆರಾಧ್ಯ, ಶಿವಪ್ರಸಾದ್, ನಾಗೇಶ್, ಪೌರಕಾರ್ಮಿಕರು ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296