ಸರಗೂರು: ರಾಯಚೂರು ಜಿಲ್ಲೆ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ಸೇವೆಯಿಂದ ವಜಾಗೊಳಿಸಿ, ದೇಶದಿಂದ ಗಡೀಪಾರು ಮಾಡುವಂತೆ ಸಂವಿಧಾನ ಸಂರಕ್ಷಣಾ ಸಮಿತಿ ಒತ್ತಾಯಿಸಿದೆ
ತಾಲ್ಲೂಕು ಕಚೇರಿಯಲ್ಲಿ ಮುಂಭಾಗದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ, ಮಲ್ಲಿಕಾರ್ಜುನ ಗೌಡ ಅವರಿಗೆ ಧಿಕ್ಕಾರ ಕೂಗಿ ಪ್ರತಿಭಟಿಸಿದ ಪ್ರತಿಭಟನಾಕಾರರು, ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಲಕ್ಷಣ್ ಲಂಕೆ, ನಮ್ಮ ದೇಶಕ್ಕೆ ಸಂವಿಧಾನವನ್ನು ರಚಿಸಿ, ಜನವರಿ 26, 1950 ರಂದು ನಾವು ನಮಗಾಗಿ ಅರ್ಪಣೆ ಮಾಡಿಕೊಂಡು ದಿನದ ಅಂಗವಾಗಿ ನೆನಪಿಗಾಗಿ ಮತ್ತು ಗೌರವಕ್ಕಾಗಿ ಪ್ರತಿ ವರ್ಷ ಜನವರಿ 26 ರಂದು ಸಂವಿಧಾನ ದಿನಾಚರಣೆ ಅಚರಿಸಿಕೊಂಡು ಬರುತ್ತಿದ್ದೇವೆ. ಇಂತಹ ಶ್ರೇಷ್ಠ ಸಂವಿಧಾನವನ್ನು ರಚಿಸಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಇರಿಸಿ ಇಡೀ ದೇಶ ಸಂವಿಧಾನ ದಿನಾಚರಣೆವನ್ನು ಆಚರಿಸಿದೆ ಆದರೆ ನ್ಯಾಯಾಧೀಶರು ಇಂತಹ ಸಂದರ್ಭದಲ್ಲಿ ಅಂಬೇಡ್ಕರ್ ಅವರಿಗೆ ಅವಮಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಿಣ ಮಹೇಶ್ ಮಾತನಾಡಿ ರಾಯಚೂರು ಜಿಲ್ಲಾ ನ್ಯಾಯದೀಶರಾಧ ಮಲ್ಲಿಕಾರ್ಜುನ ಗೌಡ ಅವರು, ಸಂವಿಧಾನಾತ್ಸೋವ ಆಚರಣೆ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆರವು ಮಾಡಿದರೆ ಮಾತ್ರ ಧ್ವಜಾರೋಹಣ ನೆರವೇರಿಸುತ್ತಾನೆ ಎಂದು ಅಯೋಜಕರಿಗೆ ಹೇಳುವ ಮೂಲಕ ಮತ್ತು ಅದೇ ರೀತಿ ಭಾವಚಿತ್ರವನ್ನು ತೆರವುಗೊಳಿಸಿದ ನಂತರ ಕಾರ್ಯಕ್ರಮಕ್ಕೆ ಆಗಮಿಸಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರಿಗೆ ಅಪಮಾನ ಮಾಡಿರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಸಂಸ (ಅಂಬೇಡ್ಕರ್ ವಾದ )ತಾಲ್ಲೂಕು ಸಂಘಟನೆ ಸಂಚಾಲಕರಾದ ಗೊವಿಂದರಾಜು ಕೂಡುಗಿ ಮಾತನಾಡಿ, ಅಂಬೇಡ್ಕರ್ ಅವರು ಈ ದೇಶದ ಸಂಪತ್ತು. ಈ ದೇಶದ ಕೀರ್ತಿ, ಸಮಾನತೆ ಹರಿಕಾರ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂದು ಪ್ರತಿಪಾದಿಸಿಸಿದವರು ಇಡೀ ದೇಶ ಒಪ್ಪಿಕೊಂಡಿರುವ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದವರು. ಅಂಬೇಡ್ಕರ್ ರವರು ಇಂತಹ ಮಹಾನ್ ಪುರಷರಿಗೆ ಈ ವ್ಯಕ್ತಿ ಅಪಮಾನ ಮಾಡುವ ಮೂಲಕ ರಾಷ್ಟ್ರದ್ರೋಹ ಕೆಲಸವನ್ನು ಮಾಡಿ ಈ ನೆಲದ ಕಾನೂನಿಗೆ ಅಪಚಾರ ಮಾಡಿದ್ದಾರೆ ಅವರನ್ನು ತಕ್ಷಣವೇ ಬಂಧಿಸುವಂತೆ ಅವರು ಒತ್ತಾಯಿಸಿದರು.
ಹೋರಾಟಗಾರ ಸರಗೂರು ಕೃಷ್ಣ ಮಾತನಾಡಿ, ದೇಶದಲ್ಲಿ ಅಶಾಂತಿ ಸಂಘರ್ಷ ವನ್ನುಂಟು ಮಾಡಲು ಬೀಜ ಬಿತ್ತುವ ಪ್ರಯತ್ನ ಮಾಡಿದ್ದಾರೆ. ಹಾಗಾಗಿ ರಾಯಚೂರು ಜಿಲ್ಲಾ ನ್ಯಾಯಧೀಶರಾದ ಮಲ್ಲಿಕಾರ್ಜುನ ಗೌಡ ಅವರನ್ನು ಈ ತಕ್ಷಣವೇ ಸೇವೆಯಿಂದ ವಜಾಗೊಳಿಸಿ, ನಮ್ಮ ಭಾರತ ದೇಶದಿಂದಲೇ ಗಡಿಪಾರು ಮಾಡಬೇಕೆಂದು ಭಾರತೀಯರಾದ ನಾವುಗಳು ನಿಮ್ಮನ್ನು ಒತ್ತಾಯ ಮಾಡುತ್ತಿದ್ದೇವೆ ಎಂದರು.
” ಒಂದು ವೇಳೆ ಇವರ ವಿರುದ್ಧ ಕಾನೂನುಕ್ರಮ ಕೈಗೊಳ್ಳದೇ ಇದ್ದಲ್ಲಿ ಮುಂದಿನ ದಿನಗಳು ದೇಶಾದ್ಯಂತ ಉಗ್ರ ಹೋರಾಟಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂಬ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಲಕ್ಷಣ್ ಲಂಕೆ, ಮಲ್ಲೇಶ್ ಚನ್ನಿಪುರ, ಹೋರಾಟ ಗಾರ ಕೃಷ್ಣ ಸರಗೂರು, ಶ್ರೀನಿವಾಸ ಲಂಕೆ, ಗ್ರಾಮೀಣ ಮಹೇಶ್, ಶಂಕರ್ ಸಾಗರೆ, ದಸಂಸ (ಅಂಬೇಡ್ಕರ್ ವಾದ) ಕೂಡಗಿ ಗೊವಿಂದರಾಜು, ಚಂದ್ರ ಹಾದನೂರು, ಮಹೇಶ್ ಆಗತ್ತೂರು, ಅಕ್ಬರ್ ಅರಳಹಳ್ಳಿ, ಪರಶಿವ ಸರಗೂರು, ಗೊವಿಂದ ಹುನಗಹಳ್ಳಿ, ಮಹೇಶ್ ದೇವಲಾಪುರ, ಪ್ರಗತಿಪರ ಸಂಘಟನೆಗಳು ಕಾರ್ಯಕರ್ತರು ಪ್ರತಿಭಟನೆ ಯಲ್ಲಿ ಭಾಗಿಯಾಗಿದ್ದರು.
ವರದಿ: ಚಂದ್ರ ಹಾದನೂರು