ಜಿಲ್ಲಾಡಳಿತವು ನಿಷೇಧಿತ ಜಾಗ ಎಂದು ಘೋಷಿಸಿದ್ದ ಜಲಪಾತವೊಂದರಲ್ಲಿ ಮೋಜು ಮಸ್ತಿ ಮಾಡಲೆಂದು ಹೋಗಿದ್ದ ಯುವಕರನ್ನು ಪೊಲೀಸರು ಕೇವಲ ಚಡ್ಡಿಯಲ್ಲೇ ಓಡಿಸಿದ ಘಟನೆಯೊಂದು ನಡೆದಿದೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಫಾಲ್ಸ್ ಬಳಿ ಈ ಘಟನೆ ನಡೆದಿದೆ.
ಈ ಜಾಗದಲ್ಲಿ ನೀರು ಇಳಿಯುತ್ತಿರುವಲ್ಲಿ ಬಂಡೆ ಹತ್ತಿ ಹುಚ್ಚಾಟ ಮೆರೆಯುತ್ತಿದ್ದ ಪ್ರವಾಸಿಗರಿಗೆ ಬಿಸಿ ಮುಟ್ಟಿಸಿದ ಬಣಕಲ್ ಗಸ್ತು ಪೊಲೀಸರು. ಯುವಕರ ಬಟ್ಟೆಗಳನ್ನು ತಂದಿದ್ದು, ವಾಹನಕ್ಕೆ ತುಂಬಿದ ಪೊಲೀಸರು ಅವರ ಹಿಂದೆನೇ ಚಡ್ಡಿಯಲ್ಲೇ ಓಡಿ ಬಂದ ಯುವಕರು ಪ್ಲೀಸ್ ಸರ್, ಇನ್ನೊಂದು ಸಲ ಈ ರೀತಿ ಮಾಡುವುದಿಲ್ಲ, ದಯವಿಟ್ಟು ಬಟ್ಟೆ ಕೊಡಿ ಎಂದು ಓಡೋಡಿ ಬಂದಿದ್ದಾರೆ.
ನಂತರ ಪೊಲೀಸರೊಂದಿಗೆ ಪ್ರವಾಸಿ ಯುವಕರು ತಮ್ಮ ಬಟ್ಟೆ ಕೊಡುವಂತೆ ವಾಗ್ವಾದಕ್ಕಿಳಿದಿದ್ದಾರೆ. ನಂತರ ಪೊಲೀಸರು ಯುವಕರಿಗೆ ಎಚ್ಚರಿಕೆ ಕೊಟ್ಟಿದ್ದು, ಅವರ ಮಾತನ್ನು ಒಪ್ಪಿದ ಯುವಕರು ತಮ್ಮ ಬಟ್ಟೆಗಳನ್ನು ಪಡೆದು ಹೋಗಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


