ಮಧುಗಿರಿ: ತಾಲೂಕಿನ ಐ. ಡಿ ಹಳ್ಳಿ ಹೋಬಳಿಯಲ್ಲಿ ನೂತನ ರೈತ ಸಂಪರ್ಕ ಕಟ್ಟಡಕ್ಕೆ ಜನಪ್ರಿಯ ಶಾಸಕರಾದ ಎಂ.ವಿ ವೀರಭದ್ರಯ್ಯ ನವರು ಭೂಮಿ ಪೂಜೆ ಸಲ್ಲಿಸಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ನಾನು ಐಡಿಹಳ್ಳಿ ಹೋಬಳಿಗೆ ಮುಂದುವರೆದು ಹೆಚ್ಚಿನ ಅನುದಾನ ಕೊಟ್ಟು ಅಭಿವೃದ್ಧಿ ಪಡಿಸಿದ್ದೇನೆ. ಈ ಅಭಿವೃದ್ಧಿ ವಿಚಾರಕ್ಕೆ ಬಂದರೆ ಸಿಸಿ ರಸ್ತೆ, ಶಾಲೆಗಳಿಗೆ ಕಾಂಪೌಂಡ್, ಸ್ಕೂಲ್ ರಂಗಮಂದಿರ , ಬಸ್ ಸ್ಟಾಂಡ್ ಮುಂಭಾಗ 30 ಲಕ್ಷ ರೂಪಾಯಿ ಸಿಸಿ ರಸ್ತೆ ಕಾಮಗಾರಿ, ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ಕೊಟ್ಟಿದ್ದು, ಮತ್ತು ಶೀಘ್ರದಲ್ಲಿಯೇ ಬಸ್ ಸ್ಟಾಂಡ್ ನಲ್ಲಿ ಶೌಚಾಲಯ ನಿರ್ಮಾಣ ಮಾಡುವುದಾಗಿ ತಿಳಿಸಿದರು.
ಮುಖಂಡರುಗಳಾದ ವೆಂಕಟರಂಗಾರೆಡ್ಡಿ ಆರ್. ಕೆ ರೆಡ್ಡಿ, ರಿಯಾಜ್ ಅಹಮದ್, ಲಿಂಗಪ್ಪ ಎಲ್. ಐ. ಸಿ. ಮಂಜುನಾಥ್, ಜಿಲಾನ್ , ವಕೀಲರಾದ ನರಸಿಂಹಮೂರ್ತಿ , ವಜೀರ್ ಬಾಷಾ , ಕೃಷಿಕ ಸಮಾಜದ ಅಧ್ಯಕ್ಷರಾದ, ಚನ್ನ ಲಿಂಗಪ್ಪ ಸದಸ್ಯರಾದ ಸಿದ್ಧಾರೆಡ್ಡಿ , ಉಮೇಶ್ ಕೃಷಿ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ, ಕೃಷಿ ಅಧಿಕಾರಿ ಮದನ್ ಕುಮಾರ್ ಕೆ.ಪಿ ., ತಾಡಿ ನರಸಿಂಹಯ್ಯ , ಶ್ರೀರಾಮಯ್ಯ, ಕುರರ್ಲ ಬೋವಿ, ನಾಗರಾಜು ಹಾಜರಿದ್ದರು
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5