nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸಿರಾ: ಟಿ.ಬಿ. ಜಯಚಂದ್ರ ಅವರಿಗೆ ಸಚಿವ ಸ್ಥಾನಕ್ಕೆ ಯುವ ಕಾಂಗ್ರೆಸ್ ಒತ್ತಾಯ

    June 7, 2026

    ಬಿತ್ತನೆ ಬೀಜ:  ರೈತರು ಸದುಪಯೋಗ ಮಾಡಿಕೊಳ್ಳಿ: ಶಾಸಕ ಕೆ.ಎನ್.ರಾಜಣ್ಣ ಕರೆ

    June 7, 2026

    ಇತಿಹಾಸ ಪ್ರಸಿದ್ಧ ಬೋಡಬಂಡೇನಹಳ್ಳಿ ಶ್ರೀ ಚೌಡೇಶ್ವರಿ ಸನ್ನಿಧಾನಕ್ಕೆ ಬಿಜೆಪಿ ಮುಖಂಡ ಅನಿಲ್ ಕುಮಾರ್ ಭೇಟಿ

    June 7, 2026
    Facebook Twitter Instagram
    ಟ್ರೆಂಡಿಂಗ್
    • ಸಿರಾ: ಟಿ.ಬಿ. ಜಯಚಂದ್ರ ಅವರಿಗೆ ಸಚಿವ ಸ್ಥಾನಕ್ಕೆ ಯುವ ಕಾಂಗ್ರೆಸ್ ಒತ್ತಾಯ
    • ಬಿತ್ತನೆ ಬೀಜ:  ರೈತರು ಸದುಪಯೋಗ ಮಾಡಿಕೊಳ್ಳಿ: ಶಾಸಕ ಕೆ.ಎನ್.ರಾಜಣ್ಣ ಕರೆ
    • ಇತಿಹಾಸ ಪ್ರಸಿದ್ಧ ಬೋಡಬಂಡೇನಹಳ್ಳಿ ಶ್ರೀ ಚೌಡೇಶ್ವರಿ ಸನ್ನಿಧಾನಕ್ಕೆ ಬಿಜೆಪಿ ಮುಖಂಡ ಅನಿಲ್ ಕುಮಾರ್ ಭೇಟಿ
    • ಉಚಿತ ಕಂಪ್ಯೂಟರ್ ತರಬೇತಿ ಪಡೆಯ ಬೇಕೆ?: ಅರ್ಜಿ ಸಲ್ಲಿಸಿ
    • ತುರುವೇಕೆರೆಯ ಮಲ್ಲಾಘಟ್ಟ ಕೆರೆ: 35 ಕೋಟಿ ರೂ.ವೆಚ್ಚದ ಕಾಮಗಾರಿ: ಸಿಎಂ ಡಿ.ಕೆ.ಶಿವಕುಮಾರ್
    • ನೊಣವಿನಕೆರೆ ಅಜ್ಜಯ್ಯನ ದರ್ಶನ ಪಡೆದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್:  ಕುಣಿಗಲ್ ನಲ್ಲಿ ಅಭಿಮಾನಿಗಳಿಂದ ಸ್ವಾಗತ
    • 6 ವರ್ಷದ ಮಗುವಿನ ನಿಗೂಢ ಸಾವು: ತಾಯಿ, ಲಿವ್–ಇನ್ ಪಾರ್ಟ್ನರ್ ವಿರುದ್ಧ ಕೊಲೆ ಪ್ರಕರಣ ದಾಖಲು!
    • ಮಾಯಸಂದ್ರ: ಲಿಲೋ ಮಾರ್ಗ ನಿರ್ಮಾಣ: ಆಕ್ಷೇಪಣೆಗೆ ಅವಕಾಶ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಅಂತಾರಾಷ್ಟ್ರೀಯ ಬೌದ್ಧ ಧಮ್ಮ ಪಂಚಶೀಲ ಧ್ವಜ ದಿನದ ಶುಭಾಶಯಗಳು
    ಲೇಖನ January 9, 2022

    ಅಂತಾರಾಷ್ಟ್ರೀಯ ಬೌದ್ಧ ಧಮ್ಮ ಪಂಚಶೀಲ ಧ್ವಜ ದಿನದ ಶುಭಾಶಯಗಳು

    By adminJanuary 9, 2022No Comments2 Mins Read
    pancha sheela

    ಬುದ್ಧಗುರುವಿನ ಪಂಚಶೀಲ‌ ತತ್ವಗಳು ಬಸವಾದಿ ಪ್ರಮಥ ಶರಣರಲ್ಲೂ ರೂಪಧಾರಣೆ ಮಾಡಿಕೊಂಡಿರುವುದನ್ನು ಗಮನಿಸಬಹುದು. ಬಸವಣ್ಣನವರು ರೂಪಿಸಿದ ಶರಣ ಚಳವಳಿ ಧಮ್ಮ‌ ತತ್ವಾಧಾರಿತವಾದದ್ದು. ‘ಬಹುಜನ ಹಿತಾಯ, ಬಹುಜನ ಸುಖಾಯ’ ಎಂದ ಬುಧ್ಧ ಗುರುವು ಸಮಾಜದ ಎಲ್ಲಾ ವರ್ಗಗಗಳ ಜನರನ್ನು ಧಮ್ಮ‌ ರಕ್ಷಕರನ್ನಾಗಿ- ಸಂಘರಕ್ಷಕರನ್ನಾಗಿ ಪ್ರಜ್ಞೆ- ಶೀಲ- ಸಮಾಧಿಗಳ ವಿಗ್ಗ ಪಜ್ಞಾ ತತ್ವದಲ್ಲಿ ನಿಯಮಿಸುವಂತೆ, ಬಸವಣ್ಣನವರೂ ಸಹ ‘ಅನ್ನ ದಾಸೋಹ ಕಾಯಕ ದಾಸೋಹ- ಜ್ಞಾನ ದಾಸೋಹ’ ಎಂಬ ತ್ರಿವಿಧ ದಾಸೋಹ ಪರಿಕಲ್ಪನೆಯಲ್ಲಿ ಸಮಾಜದ ಎಲ್ಲಾ ವರ್ಗಗಳ ಜನರನ್ನು ಸಮಾನತೆ ಭಾವದಲ್ಲಿ ಲಿಂಗ ದೀಕ್ಷೆ ತತ್ವಾನುಸಾರ ಲಿಂಗಾಯತರನ್ನಾಗಿಸುತ್ತಾರೆ. ಬುದ್ಧ ಮತ್ತು ಬಸವಣ್ಣ ಇಬ್ಬರೂ ತಮ್ಮ ಜನರನ್ನು ದೈವಾರಾಧನೆ ಧಾರ್ಮಿಕ ಶ್ರದ್ದೆಯಿಂದ ನಿಸರ್ಗಾರಾಧನೆಯ ಜೀವ ಪ್ರೀತಿಯ ಮಾನವನ ಶ್ರದ್ಧೆಗೆ ಒಲಿಸಿ ದಯಾದರ್ಶನ ಮೌಲ್ಯಗಳನ್ನು ತಿಳಿಸಿಕೊಡುತ್ತಾರೆ.

    ಬುದ್ಧ ಗುರುವಿನ ಪ್ರಕಾರ ಯಾವುದು ಜೀವೋತ್ಪತ್ತಿಯೋ ಅದಕ್ಕೆ ಹುಟ್ಟು ಇರುವಂತೆ ಸಾವು ಇದೆಯೋ ಹಾಗೆ, ಬಸವಣ್ಣನವರ ಪ್ರಕಾರ ಯಾವುದು ಸ್ಥಾವರವೋ ಅದು ಅಳಿಯುತ್ತದೆ. ಅದರ ಉಬಯ ಭೇದಗಳನ್ನು ಅರಿಯಲೆಂದೇ ಸ್ಥಾವರ ಲಿಂಗ ಮತ್ತು ಚರ ಲಿಂಗಗಳ ಕಲ್ಪನೆಯನ್ನು ಮುಂದಿರಿಸುತ್ತಾರೆ ಬಸವಣ್ಣ.


    Provided by
    Provided by

    ಸಕಲಜೀವಿಗಳಿಗೂ ಲೇಸು ಬಯಸುವ ದಯಾದರ್ಶನ ಶೀಲಗಳನ್ನು ಬೋಧಿಸುತ್ತಾರೆ, “ಕಳ ಬೇಡ ಕೊಲ ಬೇಡ, ಹುಸಿಯ ನುಡಿಯಲು ಬೇಡ , ತನ್ನ ಬಣ್ಣಿಸಬೇಡ, ಇದಿರ ಅಳಿಯಲು ಬೇಡ, ಮುನಿಯ ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ದಿ” ಎಂಬ ವಚನ ವಾಕ್ಯಗಳಲ್ಲಿರುವ ಶುದ್ಧ ಶೀಲಚಾರಿತ್ರ್ಯದ ತತ್ವಗಳು ಮೂಲದಲ್ಲಿ ಬುದ್ಧ ಗುರುವು ಬೋಧಿಸಿದ ಪಂಚಶೀಲ ತತ್ವಗಳು ಆಗಿವೆ. ಮೂಲ ಪಾಲಿ ಭಾಷೆಯ ಪಂಚಶೀಲ ತತ್ವಗಳು ಹೀಗಿವೆ…

     

    ಪಾಣಾತಿ ಪಾತ ವೇರಮಣಿ ಸಿಕ್ಕಾ ಪದಂ ಸಮಾಧಿಯಾಮಿ

    ಆದಿನ್ನದಾನಾ ವೇರಮಣಿ ಸಿಕ್ಕಾಪದಂ ಸಮಾಧಿಯಾಮಿ

    ಕಾಮೇಷು ಮಿಚ್ಛಾಚಾರಾ ವೇರಮಣಿ ಸಿಕ್ಕಾಪದಂ ಸಮಾಧಿಯಾಮಿ

    ಮುಸಾವಾದಾ ವೇರಮಣಿ ಸಿಕ್ಕಾ ಪದಂ ಸಮಾಧಿಯಾಮಿ

    ಸುರಾ~ ಮೇರಯ- ಮಜ್ಜಾ ಪಮದಟ್ಟಾನ ವೇರಮಣಿ ಸಿಕ್ಕಾಪದಂ ಸಮಾಧಿಯಾಮಿ

     

    ಇದರ ಕನ್ನಡ ಅನುವಾದ

    ನಾನು ಪ್ರಾಣಿ ಹತ್ಯೆ ಮಾಡುವುದರಿಂದ

    ದೂರವಾಗುವ ಶಿಕ್ಷಾಪದವನ್ನು ಕೈಗೊಳ್ಳುತ್ತೇನೆ.

    ನಾನು ಕಳವು ಮಾಡುವುದರಿಂದ

    ದೂರವಾಗುವ ಶಿಕ್ಷಾ ಪದವನ್ನು ಕೈಗೊಳ್ಳುತ್ತೇನೆ.

    ನಾನು ವ್ಯಭಿಚಾರ ಮಾಡುವುದರಿಂದ

    ದೂರವಾಗುವ ಶಿಕ್ಷಾ ಪದವನ್ನು ಕೈಗೊಳ್ಳುತ್ತೇನೆ.

    ನಾನು ಸುಳ್ಳು ಹೇಳುವುದರಿಂದ ದೂರವಾಗುವ ಶಿಕ್ಷಾ ಪದವನ್ನು ಕೈಗೊಳ್ಳುತ್ತೇನೆ.

    ನಾನು ಸದಾ ಹೆಂಡ, ಸರಾಯಿ ಮುಂತಾದ ಮತ್ತನ್ನುಂಟುಮಾಡಿ ಎಚ್ಚರ ತಪ್ಪಿಸುವ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ದೂರವಾಗುವ ಶಿಕ್ಷಾ ಪದವನ್ನು ಕೈಗೊಳ್ಳುತ್ತೇನೆ.

    ಇವು ಬುದ್ಧಗುರುವು ಬೋಧಿಸಿದ ಪಂಚಶೀಲ ತತ್ವಗಳು. ಇದೇ ತತ್ವಗಳು ಬಸವಣ್ಣನವರ ವಚನದಲ್ಲಿ ವ್ಯಕ್ತವಾಗಿರುವುದನ್ನು ನೋಡಿದರೆ ಬುದ್ಧನ ಕಾಲದ ಜೀವನಾದರ್ಶ ತತ್ವಗಳು ಬಸವಣ್ಣನವರ ಜೀವನಾದರ್ಶ ತತ್ವಗಳಲ್ಲಿ ಅರ್ಥಪೂರ್ಣವಾಗಿ ಅನುಸಂಧಾನ ಗೊಂಡಿರುವುದು ವ್ಯಕ್ತವಾಗುತ್ತದೆ.

    ಧಮ್ಮ ಚಳವಳಿಯ ಚಿಂತನೆಗಳು

    ನೇರವಾದ ಪಡಿನೆಳಲಿನಂತೆ ಬಸವಾದಿ ಶರಣರ ವಚನ ಚಳವಳಿಯ ಸಾಂಸ್ಕೃತಿಕ ಚಹರೆಗಳಾಗಿ ಪ್ರತಿಫಲನಗೊಂಡಿವೆ. ಇಷ್ಟು ಮಾತ್ರವಲ್ಲದೆ ಬುದ್ದ ಗುರುವಿನ ‘ಶರಣ’ ಮೂಲದಿಂದಲೇ ‘ಶರಣ’ ಚಳವಳಿಯ ಜೀವಧಾತುಗಳು ಸಾಗಿ ಬಂದಿವೆ ಎಂಬುದನ್ನು ಕನ್ನಡ ಮತ್ತು ಪಾಳಿ ಭಾಷೆಗಳು ಪರಸ್ಪರ ಅನುಸಂಧಾನ ಗೊಂಡಿರುವ ಬಗೆಯನ್ನು ಸಂಸ್ಕೃತಭೂಯಿಷ್ಠ ಪಾಳಿಗನ್ನಡ ಭಾಷಿಕ ಬಿಂಬಗಳ ಶೋಧನೆಯಿಂದ ತಿಳಿಯಲು ಸಾಧ್ಯವಿದೆ. ಧಮ್ಮ ಮತ್ತು ಶರಣ ಚಳವಳಿಗಳು ತಮ್ಮ ನುಡಿಗಟ್ಟುಗಳಲ್ಲಿ ಹೇಗೆ ಸಾರೂಪ್ಯ ಸಾಮ್ಯ ಸಂಬಂಧಗಳನ್ನು ಕಲ್ಪಿಸಬಹುದೆಂಬುದನ್ನು ಇಲ್ಲಿ ಪರಿಶೀಲಿಸಿ ನೋಡಬಹುದು.

    ಈಗಾಗಲೇ ನುಡಿದಂತೆ ‘ಶರಣ’ ಶಬ್ದವು ‘ಶರಣ’ ಆಗಿರುವಂತೆ, ವಜ್ಜನ-

    ವಚನ, ಸಚ್ಚಾ- ಸತ್ಯ, ಸಚ್ಚವಜ್ಜೇನ- ಸತ್ಯ ವಚನ, ಅನತ್ತ- ಅನಾತ್ಮ, ಭಿಕ್ಕೆ-ಭಿಕ್ಷೆ.

    ಭಿಕ್ಕು- ಭಿಕ್ಷು, ಸೀಲ- ಶೀಲ, ಕಮಾಪನ- ಕ್ಷಮಾಪಣೆ, ತಮಧಂ- ತಮಂಧ

    ಹೀಗೆ ಧಮ್ಮ ಮೂಲದ ಅನೇಕ ನುಡಿಗಟ್ಟುಗಳು ಶರಣ ಚಳವಳಿಯಲ್ಲಿ

    ಹಾಸುಹೊಕ್ಕಾಗಿವೆ. ಇದು ಬುದ್ಧನ ಕಾಲದಿಂದಲೂ ಬಸವಣ್ಣನವರೆಗೆ ಹರಿದುಬಂದಿವೆ.

     

    ಡಾ.ವಡ್ಡಗೆರೆ ‌ನಾಗರಾಜಯ್ಯ

    8722724174

    admin
    • Website

    Related Posts

    ಮೂರ್ಖರು ಯಾರು? | ರಚನೆ: ವೇಣುಗೋಪಾಲ್, ತುಮಕೂರು

    May 27, 2026

    ದಿಢೀರ್ ಹವಾಮಾನ ಬದಲಾವಣೆಗೆ AI ಡೇಟಾ ಸೆಂಟರ್‌ ಕಾರಣ ಆಗ್ತಾ ಇದೆಯೇ?

    May 25, 2026

    “ರಕ್ಕಿ” ಚಿತ್ರದ ಮೊದಲ ಹಾಡು “ರಗಡೋ ರಕ್ಕಿ” ಬಿಡುಗಡೆ | ನಾಯಕನ ಹೆಸರೆ ಸಿನಿಮಾ ಶೀರ್ಷಿಕೆಯಾಗಿರುವುದು ವಿಶೇಷ

    May 19, 2026

    Leave A Reply Cancel Reply

    Our Picks

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026

    ಥಿಯೇಟರ್‌ ಗಳಲ್ಲಿ ಹೊಸ ತಮಿಳು ಸಿನಿಮಾಗಳಿಗೆ ದಿನಕ್ಕೆ 5 ಶೋ ಪ್ರದರ್ಶನ: ಸಿಎಂ ವಿಜಯ್ ಮಹತ್ವದ ಆದೇಶ

    May 26, 2026

    ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ: 14 ದಿನಗಳ ಕಾರ್ಯಾಚರಣೆ ಬಳಿಕ ಸ್ಥಳೀಯರು ನಿಟ್ಟುಸಿರು

    May 25, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಸಿರಾ

    ಸಿರಾ: ಟಿ.ಬಿ. ಜಯಚಂದ್ರ ಅವರಿಗೆ ಸಚಿವ ಸ್ಥಾನಕ್ಕೆ ಯುವ ಕಾಂಗ್ರೆಸ್ ಒತ್ತಾಯ

    June 7, 2026

    ಸಿರಾ: ಸಿರಾ ಕ್ಷೇತ್ರದ ಶಾಸಕರಾದ ಟಿ.ಬಿ. ಜಯಚಂದ್ರ ಅವರು ನುರಿತ ರಾಜಕೀಯ ಮುತ್ಸದ್ದಿಯಷ್ಟೇ ಅಲ್ಲದೆ ಕಳೆದ 50 ವರ್ಷಗಳ ರಾಜಕೀಯ…

    ಬಿತ್ತನೆ ಬೀಜ:  ರೈತರು ಸದುಪಯೋಗ ಮಾಡಿಕೊಳ್ಳಿ: ಶಾಸಕ ಕೆ.ಎನ್.ರಾಜಣ್ಣ ಕರೆ

    June 7, 2026

    ಇತಿಹಾಸ ಪ್ರಸಿದ್ಧ ಬೋಡಬಂಡೇನಹಳ್ಳಿ ಶ್ರೀ ಚೌಡೇಶ್ವರಿ ಸನ್ನಿಧಾನಕ್ಕೆ ಬಿಜೆಪಿ ಮುಖಂಡ ಅನಿಲ್ ಕುಮಾರ್ ಭೇಟಿ

    June 7, 2026

    ಉಚಿತ ಕಂಪ್ಯೂಟರ್ ತರಬೇತಿ ಪಡೆಯ ಬೇಕೆ?: ಅರ್ಜಿ ಸಲ್ಲಿಸಿ

    June 7, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.