nammatumakuru

    Subscribe to Updates

    Get the latest creative news from FooBar about art, design and business.

    What's Hot

    ಆಟವಾಡುತ್ತಿದ್ದ ಬಾಲಕಿಯನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯ: ಇಬ್ಬರು ಅಪ್ರಾಪ್ತ ಬಾಲಕರು ವಶಕ್ಕೆ 

    June 24, 2025

    ಬಡವರ ಹಣ ಪಡೆದ್ರೆ ನಮ್ಮ ಮಕ್ಕಳಿಗೆ ಒಳ್ಳೆದಾಗುತ್ತಾ?: ಸಚಿವ ಜಮೀರ್ ಅಹ್ಮದ್ ಹೇಳಿದ್ದೇನು?

    June 24, 2025

    ಏಳು ಪ್ರಮುಖ ಮಸೂದೆಗಳಿಗೆ ಅನುಮೋದನೆ ನೀಡಲು ರಾಷ್ಟ್ರಪತಿಗೆ ಸಿಎಂ ಸಿದ್ದರಾಮಯ್ಯ ಮನವಿ

    June 24, 2025
    Facebook Twitter Instagram
    ಟ್ರೆಂಡಿಂಗ್
    • ಆಟವಾಡುತ್ತಿದ್ದ ಬಾಲಕಿಯನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯ: ಇಬ್ಬರು ಅಪ್ರಾಪ್ತ ಬಾಲಕರು ವಶಕ್ಕೆ 
    • ಬಡವರ ಹಣ ಪಡೆದ್ರೆ ನಮ್ಮ ಮಕ್ಕಳಿಗೆ ಒಳ್ಳೆದಾಗುತ್ತಾ?: ಸಚಿವ ಜಮೀರ್ ಅಹ್ಮದ್ ಹೇಳಿದ್ದೇನು?
    • ಏಳು ಪ್ರಮುಖ ಮಸೂದೆಗಳಿಗೆ ಅನುಮೋದನೆ ನೀಡಲು ರಾಷ್ಟ್ರಪತಿಗೆ ಸಿಎಂ ಸಿದ್ದರಾಮಯ್ಯ ಮನವಿ
    • ದುಡ್ಡಿಲ್ಲ ಅಂತ ಯಾರು ಹೇಳಿದ್ದು?, ನಾನು ತಮಾಷೆಗೆ ಹೇಳಿದ್ದೇನೆ: ಸಚಿವ ಪರಮೇಶ್ವರ್
    • ಒಂದು ಇಲಾಖೆಯಲ್ಲಿನ ತಪ್ಪಿಗೆ ಇಡೀ ಸರ್ಕಾರವನ್ನು ದೂಷಿಸುವುದು ಸರಿಯಲ್ಲ: ಸಚಿವ ಪರಮೇಶ್ವರ್
    • 24 ಬಾಲಕಿಯರಿಗೆ ಲೈಂಗಿಕ ಕಿರುಕುಳ: ಶಿಕ್ಷಕನ ಬಂಧನ
    • ರಾಜ್ಯಾದ್ಯಂತ 50 ಲಕ್ಷ ಸದಸ್ಯತ್ವ ನೋಂದಣಿ ಗುರಿ: ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್
    • ಭಾರತವನ್ನು ಬೆಂಬಲಿಸಿದ್ದ ಇರಾನ್: ಇರಾನ್ ರಾಷ್ಟ್ರವನ್ನು ಭಾರತ ಬೆಂಬಲಿಸಬೇಕು: ಮಲ್ಲಿಕಾರ್ಜುನ ಖರ್ಗೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಅಂತಾರಾಷ್ಟ್ರೀಯ ಬೌದ್ಧ ಧಮ್ಮ ಪಂಚಶೀಲ ಧ್ವಜ ದಿನದ ಶುಭಾಶಯಗಳು
    ಲೇಖನ January 9, 2022

    ಅಂತಾರಾಷ್ಟ್ರೀಯ ಬೌದ್ಧ ಧಮ್ಮ ಪಂಚಶೀಲ ಧ್ವಜ ದಿನದ ಶುಭಾಶಯಗಳು

    By adminJanuary 9, 2022No Comments2 Mins Read
    pancha sheela

    ಬುದ್ಧಗುರುವಿನ ಪಂಚಶೀಲ‌ ತತ್ವಗಳು ಬಸವಾದಿ ಪ್ರಮಥ ಶರಣರಲ್ಲೂ ರೂಪಧಾರಣೆ ಮಾಡಿಕೊಂಡಿರುವುದನ್ನು ಗಮನಿಸಬಹುದು. ಬಸವಣ್ಣನವರು ರೂಪಿಸಿದ ಶರಣ ಚಳವಳಿ ಧಮ್ಮ‌ ತತ್ವಾಧಾರಿತವಾದದ್ದು. ‘ಬಹುಜನ ಹಿತಾಯ, ಬಹುಜನ ಸುಖಾಯ’ ಎಂದ ಬುಧ್ಧ ಗುರುವು ಸಮಾಜದ ಎಲ್ಲಾ ವರ್ಗಗಗಳ ಜನರನ್ನು ಧಮ್ಮ‌ ರಕ್ಷಕರನ್ನಾಗಿ- ಸಂಘರಕ್ಷಕರನ್ನಾಗಿ ಪ್ರಜ್ಞೆ- ಶೀಲ- ಸಮಾಧಿಗಳ ವಿಗ್ಗ ಪಜ್ಞಾ ತತ್ವದಲ್ಲಿ ನಿಯಮಿಸುವಂತೆ, ಬಸವಣ್ಣನವರೂ ಸಹ ‘ಅನ್ನ ದಾಸೋಹ ಕಾಯಕ ದಾಸೋಹ- ಜ್ಞಾನ ದಾಸೋಹ’ ಎಂಬ ತ್ರಿವಿಧ ದಾಸೋಹ ಪರಿಕಲ್ಪನೆಯಲ್ಲಿ ಸಮಾಜದ ಎಲ್ಲಾ ವರ್ಗಗಳ ಜನರನ್ನು ಸಮಾನತೆ ಭಾವದಲ್ಲಿ ಲಿಂಗ ದೀಕ್ಷೆ ತತ್ವಾನುಸಾರ ಲಿಂಗಾಯತರನ್ನಾಗಿಸುತ್ತಾರೆ. ಬುದ್ಧ ಮತ್ತು ಬಸವಣ್ಣ ಇಬ್ಬರೂ ತಮ್ಮ ಜನರನ್ನು ದೈವಾರಾಧನೆ ಧಾರ್ಮಿಕ ಶ್ರದ್ದೆಯಿಂದ ನಿಸರ್ಗಾರಾಧನೆಯ ಜೀವ ಪ್ರೀತಿಯ ಮಾನವನ ಶ್ರದ್ಧೆಗೆ ಒಲಿಸಿ ದಯಾದರ್ಶನ ಮೌಲ್ಯಗಳನ್ನು ತಿಳಿಸಿಕೊಡುತ್ತಾರೆ.

    ಬುದ್ಧ ಗುರುವಿನ ಪ್ರಕಾರ ಯಾವುದು ಜೀವೋತ್ಪತ್ತಿಯೋ ಅದಕ್ಕೆ ಹುಟ್ಟು ಇರುವಂತೆ ಸಾವು ಇದೆಯೋ ಹಾಗೆ, ಬಸವಣ್ಣನವರ ಪ್ರಕಾರ ಯಾವುದು ಸ್ಥಾವರವೋ ಅದು ಅಳಿಯುತ್ತದೆ. ಅದರ ಉಬಯ ಭೇದಗಳನ್ನು ಅರಿಯಲೆಂದೇ ಸ್ಥಾವರ ಲಿಂಗ ಮತ್ತು ಚರ ಲಿಂಗಗಳ ಕಲ್ಪನೆಯನ್ನು ಮುಂದಿರಿಸುತ್ತಾರೆ ಬಸವಣ್ಣ.


    Provided by

    ಸಕಲಜೀವಿಗಳಿಗೂ ಲೇಸು ಬಯಸುವ ದಯಾದರ್ಶನ ಶೀಲಗಳನ್ನು ಬೋಧಿಸುತ್ತಾರೆ, “ಕಳ ಬೇಡ ಕೊಲ ಬೇಡ, ಹುಸಿಯ ನುಡಿಯಲು ಬೇಡ , ತನ್ನ ಬಣ್ಣಿಸಬೇಡ, ಇದಿರ ಅಳಿಯಲು ಬೇಡ, ಮುನಿಯ ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ದಿ” ಎಂಬ ವಚನ ವಾಕ್ಯಗಳಲ್ಲಿರುವ ಶುದ್ಧ ಶೀಲಚಾರಿತ್ರ್ಯದ ತತ್ವಗಳು ಮೂಲದಲ್ಲಿ ಬುದ್ಧ ಗುರುವು ಬೋಧಿಸಿದ ಪಂಚಶೀಲ ತತ್ವಗಳು ಆಗಿವೆ. ಮೂಲ ಪಾಲಿ ಭಾಷೆಯ ಪಂಚಶೀಲ ತತ್ವಗಳು ಹೀಗಿವೆ…

     

    ಪಾಣಾತಿ ಪಾತ ವೇರಮಣಿ ಸಿಕ್ಕಾ ಪದಂ ಸಮಾಧಿಯಾಮಿ

    ಆದಿನ್ನದಾನಾ ವೇರಮಣಿ ಸಿಕ್ಕಾಪದಂ ಸಮಾಧಿಯಾಮಿ

    ಕಾಮೇಷು ಮಿಚ್ಛಾಚಾರಾ ವೇರಮಣಿ ಸಿಕ್ಕಾಪದಂ ಸಮಾಧಿಯಾಮಿ

    ಮುಸಾವಾದಾ ವೇರಮಣಿ ಸಿಕ್ಕಾ ಪದಂ ಸಮಾಧಿಯಾಮಿ

    ಸುರಾ~ ಮೇರಯ- ಮಜ್ಜಾ ಪಮದಟ್ಟಾನ ವೇರಮಣಿ ಸಿಕ್ಕಾಪದಂ ಸಮಾಧಿಯಾಮಿ

     

    ಇದರ ಕನ್ನಡ ಅನುವಾದ

    ನಾನು ಪ್ರಾಣಿ ಹತ್ಯೆ ಮಾಡುವುದರಿಂದ

    ದೂರವಾಗುವ ಶಿಕ್ಷಾಪದವನ್ನು ಕೈಗೊಳ್ಳುತ್ತೇನೆ.

    ನಾನು ಕಳವು ಮಾಡುವುದರಿಂದ

    ದೂರವಾಗುವ ಶಿಕ್ಷಾ ಪದವನ್ನು ಕೈಗೊಳ್ಳುತ್ತೇನೆ.

    ನಾನು ವ್ಯಭಿಚಾರ ಮಾಡುವುದರಿಂದ

    ದೂರವಾಗುವ ಶಿಕ್ಷಾ ಪದವನ್ನು ಕೈಗೊಳ್ಳುತ್ತೇನೆ.

    ನಾನು ಸುಳ್ಳು ಹೇಳುವುದರಿಂದ ದೂರವಾಗುವ ಶಿಕ್ಷಾ ಪದವನ್ನು ಕೈಗೊಳ್ಳುತ್ತೇನೆ.

    ನಾನು ಸದಾ ಹೆಂಡ, ಸರಾಯಿ ಮುಂತಾದ ಮತ್ತನ್ನುಂಟುಮಾಡಿ ಎಚ್ಚರ ತಪ್ಪಿಸುವ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ದೂರವಾಗುವ ಶಿಕ್ಷಾ ಪದವನ್ನು ಕೈಗೊಳ್ಳುತ್ತೇನೆ.

    ಇವು ಬುದ್ಧಗುರುವು ಬೋಧಿಸಿದ ಪಂಚಶೀಲ ತತ್ವಗಳು. ಇದೇ ತತ್ವಗಳು ಬಸವಣ್ಣನವರ ವಚನದಲ್ಲಿ ವ್ಯಕ್ತವಾಗಿರುವುದನ್ನು ನೋಡಿದರೆ ಬುದ್ಧನ ಕಾಲದ ಜೀವನಾದರ್ಶ ತತ್ವಗಳು ಬಸವಣ್ಣನವರ ಜೀವನಾದರ್ಶ ತತ್ವಗಳಲ್ಲಿ ಅರ್ಥಪೂರ್ಣವಾಗಿ ಅನುಸಂಧಾನ ಗೊಂಡಿರುವುದು ವ್ಯಕ್ತವಾಗುತ್ತದೆ.

    ಧಮ್ಮ ಚಳವಳಿಯ ಚಿಂತನೆಗಳು

    ನೇರವಾದ ಪಡಿನೆಳಲಿನಂತೆ ಬಸವಾದಿ ಶರಣರ ವಚನ ಚಳವಳಿಯ ಸಾಂಸ್ಕೃತಿಕ ಚಹರೆಗಳಾಗಿ ಪ್ರತಿಫಲನಗೊಂಡಿವೆ. ಇಷ್ಟು ಮಾತ್ರವಲ್ಲದೆ ಬುದ್ದ ಗುರುವಿನ ‘ಶರಣ’ ಮೂಲದಿಂದಲೇ ‘ಶರಣ’ ಚಳವಳಿಯ ಜೀವಧಾತುಗಳು ಸಾಗಿ ಬಂದಿವೆ ಎಂಬುದನ್ನು ಕನ್ನಡ ಮತ್ತು ಪಾಳಿ ಭಾಷೆಗಳು ಪರಸ್ಪರ ಅನುಸಂಧಾನ ಗೊಂಡಿರುವ ಬಗೆಯನ್ನು ಸಂಸ್ಕೃತಭೂಯಿಷ್ಠ ಪಾಳಿಗನ್ನಡ ಭಾಷಿಕ ಬಿಂಬಗಳ ಶೋಧನೆಯಿಂದ ತಿಳಿಯಲು ಸಾಧ್ಯವಿದೆ. ಧಮ್ಮ ಮತ್ತು ಶರಣ ಚಳವಳಿಗಳು ತಮ್ಮ ನುಡಿಗಟ್ಟುಗಳಲ್ಲಿ ಹೇಗೆ ಸಾರೂಪ್ಯ ಸಾಮ್ಯ ಸಂಬಂಧಗಳನ್ನು ಕಲ್ಪಿಸಬಹುದೆಂಬುದನ್ನು ಇಲ್ಲಿ ಪರಿಶೀಲಿಸಿ ನೋಡಬಹುದು.

    ಈಗಾಗಲೇ ನುಡಿದಂತೆ ‘ಶರಣ’ ಶಬ್ದವು ‘ಶರಣ’ ಆಗಿರುವಂತೆ, ವಜ್ಜನ-

    ವಚನ, ಸಚ್ಚಾ- ಸತ್ಯ, ಸಚ್ಚವಜ್ಜೇನ- ಸತ್ಯ ವಚನ, ಅನತ್ತ- ಅನಾತ್ಮ, ಭಿಕ್ಕೆ-ಭಿಕ್ಷೆ.

    ಭಿಕ್ಕು- ಭಿಕ್ಷು, ಸೀಲ- ಶೀಲ, ಕಮಾಪನ- ಕ್ಷಮಾಪಣೆ, ತಮಧಂ- ತಮಂಧ

    ಹೀಗೆ ಧಮ್ಮ ಮೂಲದ ಅನೇಕ ನುಡಿಗಟ್ಟುಗಳು ಶರಣ ಚಳವಳಿಯಲ್ಲಿ

    ಹಾಸುಹೊಕ್ಕಾಗಿವೆ. ಇದು ಬುದ್ಧನ ಕಾಲದಿಂದಲೂ ಬಸವಣ್ಣನವರೆಗೆ ಹರಿದುಬಂದಿವೆ.

     

    ಡಾ.ವಡ್ಡಗೆರೆ ‌ನಾಗರಾಜಯ್ಯ

    8722724174

    admin
    • Website

    Related Posts

    ನಿಜವಾದ ದಾನಿ

    April 4, 2025

    ರಾಜನ ಹಿಂದಿನ ಜನುಮ

    April 2, 2025

    ಏಪ್ರಿಲ್ 1: ಪ್ರತಿ ನಿತ್ಯವೂ ನಾವು ಫೂಲ್ ಗಳಾಗುತ್ತೇವೆ

    April 1, 2025
    Our Picks

    ಏಳು ಪ್ರಮುಖ ಮಸೂದೆಗಳಿಗೆ ಅನುಮೋದನೆ ನೀಡಲು ರಾಷ್ಟ್ರಪತಿಗೆ ಸಿಎಂ ಸಿದ್ದರಾಮಯ್ಯ ಮನವಿ

    June 24, 2025

    24 ಬಾಲಕಿಯರಿಗೆ ಲೈಂಗಿಕ ಕಿರುಕುಳ: ಶಿಕ್ಷಕನ ಬಂಧನ

    June 24, 2025

    ಇಸ್ರೇಲ್– ಇರಾನ್ ಯುದ್ಧಕ್ಕೆ ಅಮೆರಿಕ ಎಂಟ್ರಿ: ಇರಾನ್ ಅನುಸ್ಥಾವರಗಳ ಮೇಲೆ ಅಮೆರಿಕ ದಾಳಿ

    June 22, 2025

    ಬೆಂಗಳೂರಿಗೆ ಆಗಮಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ

    June 20, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಆಟವಾಡುತ್ತಿದ್ದ ಬಾಲಕಿಯನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯ: ಇಬ್ಬರು ಅಪ್ರಾಪ್ತ ಬಾಲಕರು ವಶಕ್ಕೆ 

    June 24, 2025

    ದಾವಣಗೆರೆ: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ದಾವಣಗೆರೆ ತಾಲೂಕಿನ ಗ್ರಾಮವೊಂದರಲ್ಲಿ ಭಾನುವಾರ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು…

    ಬಡವರ ಹಣ ಪಡೆದ್ರೆ ನಮ್ಮ ಮಕ್ಕಳಿಗೆ ಒಳ್ಳೆದಾಗುತ್ತಾ?: ಸಚಿವ ಜಮೀರ್ ಅಹ್ಮದ್ ಹೇಳಿದ್ದೇನು?

    June 24, 2025

    ಏಳು ಪ್ರಮುಖ ಮಸೂದೆಗಳಿಗೆ ಅನುಮೋದನೆ ನೀಡಲು ರಾಷ್ಟ್ರಪತಿಗೆ ಸಿಎಂ ಸಿದ್ದರಾಮಯ್ಯ ಮನವಿ

    June 24, 2025

    ದುಡ್ಡಿಲ್ಲ ಅಂತ ಯಾರು ಹೇಳಿದ್ದು?, ನಾನು ತಮಾಷೆಗೆ ಹೇಳಿದ್ದೇನೆ: ಸಚಿವ ಪರಮೇಶ್ವರ್

    June 24, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.