ತಿಪಟೂರು: ಜೆಡಿಎಸ್ ಮುಖಂಡ ಬಂಡೆ ರವಿ ತಿಪಟೂರು ತಾಲ್ಲೂಕಿನ ಯಾವ ಜೆಡಿಎಸ್ ಮುಖಂಡರಿಗೂ ಮಾಹಿತಿ ನೀಡದೆ ಜೆಡಿಎಸ್ ಮುಖಂಡ ಎಂದು ಪ್ಲೆಕ್ಸ್ ಹಾಗೂ ಬ್ಯಾನರ್ ಅಳವಡಿಸಿಕೊಂಡು ಪತ್ರಿಕಾಗೋಷ್ಠಿ ಕರೆದಿದ್ದು, ಇದನ್ನು ವಿರೋಧಿಸಿ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರ ನಡುವೆಯೇ ಪರಸ್ಪರ ಮಾತಿನ ಚಕಮಕಿ ನಡೆಯಿತು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಮಾಜಿ ಅಧ್ಯಕ್ಷ ತಡಸೂರು ಗುರುಮೂರ್ತಿ ಬಂಡೆರವಿ, ನಮ್ಮ ತಾಲ್ಲೂಕಿನ ವ್ಯಕ್ತಿಯಲ್ಲ, ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಿಲ್ಲ. ಆದರೂ ಸಹ ಜಿಲ್ಲಾ ಸಮಿತಿ ತಾಲ್ಲೂಕು ಸಮಿತಿಗಳ ಗಮನಕ್ಕೆ ಬಾರದೇ ಏಕಾಏಕಿಯಾಗಿ ಜೆಡಿಎಸ್ ಪಕ್ಷದ ಮುಖಂಡ ಎಂದು ಬ್ಯಾನರ್ ಅಳವಡಿಸಿರುವುದು ಖಂಡನೀಯ ಎಂದರು.
ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷ ಪ್ರಬಲವಾಗಿದೆ. ಸಾವಿರಾರು ಜನ ನಿಷ್ಠಾವಂತ ಕಾರ್ಯಕರ್ತರಿದ್ದಾರೆ ಆದರೇ ಬೆಂಗಳೂರು ಮೂಲದ ವ್ಯಕ್ತಿ ಜೆಡಿಎಸ್ ಮುಖಂಡ ಎಂದು ಬಂದಿರುವುದು ಪ್ರಾಮಾಣಿಕವಾಗಿ ಕೆಲಸ ಮಾಡಿರುವ ವ್ಯಕ್ತಿಗಳಿಗೆ ನೋವಾಗಬಾರದು. ಪಕ್ಷದ ವರಿಷ್ಠರು ತಾಲ್ಲೂಕು ಘಟಕದ ಅಭಿಪ್ರಾಯ ಪಡೆದು ಮುನ್ನಡೆಯ ಬೇಕು ಎಂದು ತಿಳಿಸಿದರು .
ಪತ್ರಿಕಾಗೋಷ್ಠಿ ನಡುವೆಯೇ ಕೆಲ ಮುಖಂಡರು ಆಕ್ಷೇಪ ವ್ಯಕ್ತಪಡಿಸಿ ಪರಸ್ಪರ ಜಗಳಕ್ಕಿಳಿದರು. ಶಾಂತವಾಗಿ ನಡೆಯುತ್ತಿದ್ದ ಪತ್ರಿಕಾಗೋಷ್ಠಿಯಲ್ಲಿ ಪರವಿರೋಧದ ಮಾತುಗಳು ಪ್ರಾರಂಭವಾಗಿ ಜಗಳ, ಏಕವಚನಗಳ ಬೈಗುಳ ಗಳು ಕೇಳಿ ಬಂದವು.
ಜಗಳದ ಮಧ್ಯಪ್ರವೇಶಿಸಿದ ಮುಖಂಡರಾದ ಅಂಚೆಕೊಪ್ಪಲು ರಾಮಕೃಷ್ಠಯ್ಯ.ತಡಸೂರು ಗುರುಮೂರ್ತಿ ಪರಿಸ್ಥಿತಿ ತಿಳಿಗೊಳಿಸಿದರು. ಜಗಳ ವಾಗ್ವಾದದ ನಡುವೆ ಪತ್ರಿಕಾ ಘೋಷ್ಠಿ ಮುಕ್ತಾಯಗೊಳಿಸಿ, ತಾಲ್ಲೂಕಿನಲ್ಲಿ ಹೊರಗಿನ ವ್ಯಕ್ತಿಗಳಿಗೆ ಮಣೆಹಾಕಬಾರದು, ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷದ ಹೆಸರು ಹೇಳಿಕೊಂಡು ಮೈಲಾರಪ್ಪ ಜಿ., ನಾರಾಯಣ್ , ಕೆ.ಟಿ ಶಾಂತಕುಮಾರ್ ಸೇರಿದಂತೆ ಅನೇಕ ವ್ಯಕ್ತಿಗಳು ಬಂದು ಹೋಗಿದ್ದಾರೆ . ಕೇವಲ ಲಾಭದ ಉದ್ದೇಶಕ್ಕೆ ಬರುವ ಮುಖಂಡರು ಚುನಾವಣೆನಂತರ ಕಣ್ಮರೆಯಾಗುತ್ತಾರೆ. ಜೆಡಿಎಸ್ ವರಿಷ್ಠರು ಕಾರ್ಯಕರ್ತರ ಪರವಾಗಿ ಪಕ್ಷನಿಷ್ಠೆಯಿಂದ ದುಡಿಯುವವರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಯಿತು.
ಪತ್ರಿಕಾ ಘೋಷ್ಠಿಯಲ್ಲಿ ಮುಖಂಡರಾದ ಮತ್ತಿಘಟ್ಟ ಶಿವಸ್ವಾಮಿ.ಶ್ರೀಮತಿ ರೇಖಾ ಅನೂಪ್, ಸುಂದರ್, ರಾಖೇಶ್ ಗೌಡ, ರೋಹಿತಗೌಡ, ಜಗದೀಶ್, ಪ್ರಕಾಶ್ ಹುಣಸೇಘಟ್ಟ, ಉಮಾಮಹೇಶ್ ಮುಂತಾದವರು ಉಪಸ್ಥಿತರಿದ್ದರು.
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5