ಸರಗೂರು: ನಾಗರಿಕರು ಸಲಹೆ ಸೂಚನೆ ನೀಡುವುದರ ಜೊತೆಗೆ ಪೊಲೀಸರಿಗೆ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ಪೋಲಿಸ್ ಇಲಾಖೆಗೆ ಸಹಕಾರ ನೀಡಬೇಕು ಎಂದು ಸಿಪಿಐ ಎನ್ ಆನಂದ್ ಕೋರಿದರು.
ಪಟ್ಟಣದ ಪೋಲಿಸ್ ಠಾಣೆಯ ಅವರಣದಲ್ಲಿ ಹಮ್ಮಿಕೊಂಡಿದ್ದ ನಾಗರಿಕ ಸಲಹಾ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿ, ಸಾರ್ವಜನಿಕರಿಂದ ಸಲಹೆ ಸೂಚನೆ ಪಡೆಯಲು ನಾಗರಿಕ ಸಲಹಾ ಸಮಿತಿ ನಡೆಸಲಾಗುತ್ತದೆ. ಸಾರ್ವಜನಿಕರು ತಮ್ಮ ಸಲಹೆಗಳನ್ನು ನೀಡಬಹುದು ಎಂದು ತಿಳಿಸಿದರು.
ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಮಾತನಾಡಿ, ಶಾಲಾ ಕಾಲೇಜು ಮಕ್ಕಳು ಶುರುವಾಗ ಹಾಗೂ ಬಿಡುವ ಸಮಯದಲ್ಲಿ ಅಡ್ಡಾದಿಡ್ಡಿಯಾಗಿ ಬಾರಿ ಶಬ್ದ ಮಾಡುವ ಪುಂಡರ ಬೈಕ್ ಗಳಿಗೆ ಕಡಿವಾಣ ಹಾಕಿ ಸಾರ್ವಜನಿಕರಿಗೆ ಹಾಗೂ ಶಾಲಾ ವಿರ್ಧ್ಯಾಥಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ಎಸ್ ಎಲ್ ರಾಜಣ್ಣ ಮಾತನಾಡಿ ಏಪ್ರಿಲ್ ತಿಂಗಳಲ್ಲಿ ಹೆಚ್ಚು ಜಾತ್ರೆಗಳು ಹಬ್ಬಗಳು ಮತ್ತುಮಹಾನಾಯಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಆಚರಣೆ ಮಾಡುವ ಕಾರಣ ಪಟ್ಟಣ ಮತ್ತು ಗ್ರಾಮೀಣ ಭಾಗಗಳಲ್ಲಿ ಜನರು ಒಗ್ಗಟ್ಟಿನಲ್ಲಿ ಹಬ್ಬ ಮತ್ತು ಜಯಂತಿಗಳನ್ನು ಮಾಡುತ್ತಾರೆ ಎಂದರು.
ಕೆಲವು ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಬಿಡದಂತೆ ಕಾನೂನು ಚೌಕಟ್ಟಿನಲ್ಲಿ ನಾವೇಲ್ಲರೂ ಸೇರಿ ಸ್ನೇಹ ಪ್ರೀತಿ ವಿಶ್ವಾಸ ದಿಂದ ಇರೋಣ ಎಂದರು.
ಸರಗೂರು ತಾಲ್ಲೂಕು ಅಭಿವೃದ್ಧಿ ಹೋರಾಟಗಾರ ಸಮಿತಿ ಸಂಚಾಲಕರು ಸರಗೂರು ಕೃಷ್ಣ ಮಾತನಾಡಿ, ಸರಗೂರು ತಾಲ್ಲೂಕು ಘೋಷಣೆಯಾಗಿ ವರ್ಷಗಳೇ ಕಳೆದಿದ್ದರೂ ಪಟ್ಟಣದಲ್ಲಿ ವೃತ್ತ ನಿರೀಕ್ಷಕರ ಕಚೇರಿ ತೆರೆದಿಲ್ಲ . ತಕ್ಷಣದ ಸಮಸ್ಯೆ ಗಳಿಗೆ ಹೆಚ್ ಡಿ ಕೋಟೆಗೆ ಹೋಗುವ ಪರಿಸ್ಥಿತಿ ಎದುರಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ವೃತ್ತ ನಿರೀಕ್ಷಕರ ಕಛೇರಿ ತೆರೆಯಬೇಕು ಎಂದರು.
ಗ್ರಾ.ಪಂ. ಸದಸ್ಯ ಹಾದನೂರು ಪ್ರಕಾಶ್ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಾರೆ ಅದರೆ ಇಲಾಖೆ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು ಎಂದರು.
ಮೂಳ್ಳೂರು ಗ್ರಾಪಂ ಅಧ್ಯಕ್ಷ ಗೊವಿಂದಚಾರಿ ಮಾತನಾಡಿ, ಪೋಲಿಸ್ ಇಲಾಖೆಯ ಗ್ರಾಮಗಳಿಗೆ ಭಾಗಕ್ಕೆ ಬಿಟ್ ಪೋಲಿಸ್ ಕಾನ್ಸ್ಟೇಬಲ್ ಸಂಜೆ ವೇಳೆ 6 ರಿಂದ ರಾತ್ರಿ 9 ಘಂಟೆ ವರೆಗೆ ಹಳ್ಳಿಗಳಲ್ಲಿ ಮದ್ಯಪಾನ ಮಾರಾಟ ಮಾಡುತ್ತಿರುವ ಅಂಗಡಿ ಗಳಲ್ಲಿ ಕಡಿಮೆಯಾಗುತ್ತದೆ. ಮೂಳ್ಳೂರು ಭಾಗದಲ್ಲಿ ಹೆಚ್ಚಿನ ರೀತಿಯಲ್ಲಿ ಮದ್ಯಪಾನ ಮಾರಾಟ ಮಾಡುತ್ತಾರೆ ಇದರ ಬಗ್ಗೆ ಗಮನ ಹರಿಸಬೇಕು ತಿಳಿಸಿದರು.
ಇನ್ನೂ ಮುಖಂಡರು ಇಟ್ನರಾಜಣ್ಣ. ಪಪಂ ಉಪಾಧ್ಯಕ್ಷ ವಿನಾಯಕ ಪ್ರಸಾದ್ ಮಲ್ಲೇಶ್. ಗ್ರಾಮ ಗಳಿಂದ ಬಂದಿದ್ದ ಮುಖಂಡರು ಹಳ್ಳಿಯ ಸಮಸ್ಯೆ ಗಳನ್ನು ತಿಳಿಸಿದರು.
ತಾಲ್ಲೂಕು ವೃತ್ತ ನಿರೀಕ್ಷಕ ರಾದ ಎನ್ ಆನಂದ್ ಮಾತನಾಡಿ, ಸಭೆಯಲ್ಲಿ ಪಟ್ಟಣದಲ್ಲಿ ಪ್ರತಿದಿನವು ರಾತ್ರಿ ವೇಳೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದು ವೈನ್ ಸ್ಟೋರ್ ಪೆಟ್ರೋಲ್ ಬಂಕ್ ಮತ್ತು ಚಿನ್ನದ ಅಂಗಡಿ ಪ್ರಮುಖ ರಸ್ತೆಗಳಲ್ಲಿರುವ ಖಾಸಗಿ ಹೋಟೆಲ್ ವಸತಿ ಗೃಹಗಳಲ್ಲಿ ಬಸ್ ನಿಲ್ದಾಣದಲ್ಲಿ ಸಿ ಸಿ ಕ್ಯಾಮೆರಾ ಅಳವಡಿಸಬೇಕು ಮತ್ತು ಹಳ್ಳಿಗಳಲ್ಲಿ ಮಧ್ಯ ಪಾನ ಮಾರಾಟ ಮಾಡುತ್ತಿರುವ ಬಗ್ಗೆ ಅಂಗಡಿ ಮಾಲೀಕರು ಮೇಲೆ ಕೈಗೊಳ್ಳುತ್ತಿವಿ ಎಂದು ಹೇಳಿದರು.
ಸಭೆಯಲ್ಲಿ ಪಿಎಸ್ ಐ ಶ್ರಾವಣದಾಸ ರೆಡ್ಡಿ, ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಉಪಾಧ್ಯಕ್ಷ ವಿನಾಯಕ ಪ್ರಸಾದ್, ಪಪಂ ಸದಸ್ಯರು ರಾಜಣ್ಣ, ಚೈತ್ರ ಸ್ವಾಮಿ, ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಶಿವಣ್ಣ, ಸರಗೂರು ಅಭಿವೃದ್ಧಿ ಹೊರಾಟಗಾರ ಸಮಿತಿ ಸಂಚಾಲಕ ಸರಗೂರು ಕೃಷ್ಣ, ಗ್ರಾಮೀಣ ಮಹೇಶ್, ಮೂಳ್ಳೂರು ಗ್ರಾ.ಪಂ. ಅಧ್ಯಕ್ಷ ಗೊವಿಂದಚಾರಿ, ಹಾದನೂರು ಗ್ರಾಪಂ ಸದಸ್ಯರು ಪ್ರಕಾಶ್ , ಶಿವರಾಜ್ ಅರಸು, ಭಾಗ್ಯಕೇಂಪಸಿದ್ದ, ರಾಜೇಶ್ ಮುಖಂಡರು ಮಲ್ಲೇಶ್, ಸುನಂದರಾಜು, ಇಟ್ನರಾಜಣ್ಣ, ಚಿನ್ನಯ್ಯ, ವೆಂಕಟಪ್ಪ, ವರ್ತಕರ ಸಂಘದ ಅಧ್ಯಕ್ಷ ಶ್ರೀನಿವಾಸನ್, ಮಾ ಪಪಂ ಸದಸ್ಯ ನಾಗಯ್ಯ, ಬಿಡುಗಲು ಶಿವಣ್ಣ ಹಾಗೂ ಗ್ರಾಮದ ಮುಖಂಡರು ಭಾಗಿಯಾಗಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5