ಸರಗೂರು: ತಾಲ್ಲೂಕಿನ ಕುರ್ಣೇಗಾಲ ಗ್ರಾಮದ ಯುವ ಸಮೂಹದವರು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ.ಪುಣ್ಯ ಸ್ಮರಣೆ ಕಾರ್ಯಕ್ರಮವ ಆಯೋಜನೆ ಮಾಡಿದ್ದು, ಗ್ರಾಮ ಪಂಚಾಯಿತಿಯ ಸ್ಥಾಯಿ ಸಮಿತಿ ಅಧ್ಯಕ್ಷ ಬೆಟ್ಟಸ್ವಾಮಿ ಭಾಗವಹಿಸಿದ್ದರು.
ತಾಲ್ಲೂಕಿನ ಬಿ.ಮಟಕೇರಿ ಗ್ರಾಪಂನ ಕುರ್ಣೇಗಾಲ ಗ್ರಾಮದಲ್ಲಿ ಪ್ರಮುಖ ಬೀದಿಗಳಲ್ಲಿ ಮೂಂಬತ್ತಿ ಹಿಡಿದುಕೊಂಡು ಯುವ ಸಮೂಹ ಯುವಕರು ಮೆರವಣಿಗೆ ಮೂಲಕ ಮಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ, ಮೌನಾಚರಣೆ ಮಾಡುವ ಮೂಲಕ ಗ್ರಾಮಸ್ಥರು ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ನಮ್ಮ ಊರಿನ ಕುಟುಂಬದ ಒಬ್ಬ ಸದಸ್ಯರನ್ನು ಕಳೆದುಕೊಂಡಂತೆ ಬಹಳ ನೋವಾಗುತ್ತಿದೆ. ಮುಂದಿನ ದಿನಗಳಲ್ಲಿ ಪುನೀತ್ ರಾಜ್ಕುಮಾರ್ ಅವರ, ಪುಣ್ಯ ಸ್ಮರಣಾರ್ಥವಾಗಿ ತಾಲೂಕಿನಲ್ಲಿ ಕುರ್ಣೇಗಾಲ ಗ್ರಾಮದಲ್ಲಿ ಅರ್ಥಪೂರ್ಣವಾಗಿ ಪುನೀತ್ ಅವರು ಮಾಡುತ್ತಿದ್ದ ಸೇವೆಯಂತೆ ನೊಂದ ಬಡಜನರಿಗೆ ನೆರವಾಗುವ ನಿರ್ಧಾರವನ್ನು ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಕೈಗೊಂಡರು.
ಬೆಟ್ಟಸ್ವಾಮಿ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾಯಿ ಸಮಿತಿ ಅಧ್ಯಕ್ಷ , ಹಾದನೂರು ಗ್ರಾಮ ಪಂಚಾಯಿತಿ ಸದಸ್ಯ ರಾಜೇಶ್. ಶಂಕರ. ಎರಡು ಬೀದಿಯ ಯಜಮಾನರುಗಳಾದ ಪುಟ್ಟದಾಸಯ್ಯ. ಬುಂಡಯ್ಯ. ಚಾಮರಾಜು. ಕೃಷ್ಣ. ಸಿದ್ಧರಾಜು, ಸಿದ್ದಯ್ಯ, ಶಿವಕುಮಾರ್, ಮಹೇಶ್ , ಮೂರ್ತಿ, ಮಹದೇವಯ್ಯ, ಕುಮಾರ, ಉದಯ, ಆನಂದ , ಆನಂದ ಪಿ. ಸಂಜು , ಕೃಷ್ಣ .ವಕಿಲಾರದ ಮಣಿರಾಜ್, ಸುರೇಶ್, ಶಶಿ, ಹನು, ಅಭಿ, ಗ್ರಾಮಸ್ಥರು ಭಾಗವಹಿಸಿದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700