ಬಹುದಿನಗಳ ಕಾಲ ಚಂದನವನದಲ್ಲಿ ಮಿಂಚಿದ ಚೆಲುವೆ ರಾಧಿಕಾ ಪಂಡಿತ್, ರಾಕಿಂಗ್ ಸ್ಟಾರ್ ಯಶ್ ಅವರನ್ನು ಮದುವೆಯಾದ ಬಳಿಕ ಹೆಚ್ಚೇನು ಸಿನಿಮಾ ಮಾಡಿಲ್ಲ. ಮಕ್ಕಳು ಸಂಸಾರ ಎಂದು ಕುಟುಂಬಕ್ಕೆ ಸಮಯ ಕೊಟ್ಟಿದ್ದಾರೆ. ಮನೆ, ಸಂಸಾರ ಎಂದು ಮಕ್ಕಳ ಜೊತೆ ಫುಲ್ ಟೈಮ್ ಬ್ಯುಸಿಯಾಗಿರುವ ರಾಧಿಕಾ ಪಂಡಿತ್, ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾರೆ.
ಮೊಗ್ಗಿನ ಮನಸ್ಸು ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಗೆ ನಟಿ ರಾಧಿಕಾ ಪಂಡಿತ್ ಎಂಟ್ರಿ ಕೊಟ್ಟಿದ್ದು, ಅನೇಕ ಸಿನಿಮಾಗಳಲ್ಲಿ ನಟಿ ಸೈ ಎನಿಸಿಕೊಂಡಿದ್ದು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ರಾಧಿಕಾ ಅವರಿಗೆ ಈಗಲೂ ಸಾಕಷ್ಟು ಸಿನಿಮಾ ಆಫರ್ ಗಳು ಬರ್ತಿವೆಯಂತೆ. ಆದರೆ ರಾಧಿಕಾ ಅವರೇ ಆ ಆಫರ್ ಗಳನ್ನು ತಿರಸ್ಕರಿಸುತ್ತಿದ್ದಾರಂತೆ. ಹಾಗೆ ಅವರು ತಿರಸ್ಕರಿಸಿದ ಪಾತ್ರದ ಮತ್ತು ಸಿನಿಮಾ ಸುದ್ದಿ ಆಗುತ್ತಿದೆ.
ಕನ್ನಡದ ಸಿನಿಮಾ ‘ಕೃಷ್ಣನ್ ಲವ್ ಸ್ಟೋರಿ’ ತಂಡ ರಾಧಿಕಾ ಪಂಡಿತ್ ಅವರನ್ನು ಅರಸಿ ಬಂದಿತ್ತು. ಈ ಚಿತ್ರದಲ್ಲಿ ನಾಯಕಿಯದ್ದು ತುಸು ನೆಗೆಟಿವ್ ಶೇಡ್ ಇದ್ದ ಕಾರಣ ಒಪ್ಪಿಕೊಳ್ಳಲು ಬಹಳ ಯೋಚಿಸಿ ಬೇಡ ಎಂದಿದ್ದರಂತೆ ಆದರೆ ಈ ಕಥೆ ರಾಧಿಕಾ ಪಂಡಿತ್ ಅವರಿಗೆ ತುಂಬಾನೆ ಇಷ್ಟ ಆಗಿತ್ತಂತೆ. ಆದರೆ ಪ್ರೀತಿಸಿದ ಹುಡುಗನಿಗೆ ಕೈ ಕೊಡುವ, ಹಣದ ಆಸೆಗೆ ಬೇರೊಬ್ಬ ಹುಡುಗನನ್ನು ಪ್ರೀತಿಸುವ, ಹುಚ್ಚಿಯಂತೆ ಆಡುವ ಯುವತಿಯ ಪಾತ್ರದಲ್ಲಿ ನಟಿಸುವುದಿಲ್ಲ ಎಂದು ರಾಧಿಕಾ ಪಂಡಿತ್ ಅವರು ಹೇಳಿದರು ಎನ್ನುವುದು ಬಹಿರಂಗ ಆಗಿದೆ.
ನಿರ್ದೇಶಕ ಶಶಾಂಕ್, ”ಇದು ಅಭಿನಯ ಪ್ರಧಾನ್ಯತೆ ಇರುವ ಸಿನಿಮಾ. ನಿಮ್ಮ ಅಭಿನಯ ಕಲೆಯನ್ನು ತೋರಿಸಬಹುದಾದ ಪಾತ್ರ. ಈ ಸಿನಿಮಾವನ್ನು ಒಪ್ಪಿಕೊಳ್ಳಿ, ಈ ಸಿನಿಮಾದಲ್ಲಿ ನಿಮ್ಮ ಪಾತ್ರವೇ ಹೆಚ್ಚು ಜನರಿಗೆ ಇಷ್ಟ ಆಗುತ್ತದೆ ನಂಬಿಕೆ ಇಡಿ” ಎಂದು ಹೇಳಿ ಒಪ್ಪಿಸಿದರಂತೆ.
‘ಕೃಷ್ಣನ್ ಲವ್ ಸ್ಟೋರಿ’ ಸಿನಿಮಾ 2010ರಲ್ಲಿ ತೆರೆಕಂಡಿತ್ತು. ಶಶಾಂಕ್ ಈ ಚಿತ್ರದ ಕಥೆ-ಚಿತ್ರಕತೇ ಬರೆದು ನಿರ್ದೇಶನ ಮಾಡಿದ್ದರು. 2018ರಲ್ಲಿ ಬಂಗಾಳಿ ಭಾಷೆಯಲ್ಲಿ ಈ ಚಿತ್ರವನ್ನು ಮಾಡಲಾಗಿತ್ತು. ಈ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಆ ಸಿನಿಮಾದಲ್ಲಿ ತೆಪ್ಪದ ಮೂಲಕ ಫಾಲ್ಸ್ನಿಂದ ಕೆಳಗಡೆ ಬೀಳಬೇಕಿತ್ತು. ರಾಧಿಕಾ ಪಂಡಿತ್ ತೆಪ್ಪ ಓಡಿಸೋದನ್ನು ಕಲಿಯಬೇಕಿತ್ತು. ಹೀಗಾಗಿ ಅವರು ಮೂರು ನಾಲ್ಕು ದಿನಗಳ ಕಾಲ ಅವರು ತೆಪ್ಪ ಓಡಿಸೋದನ್ನು ಕಲಿತರು.
‘ಕೃಷ್ಣನ್ ಲವ್ ಸ್ಟೋರಿ’ ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಪಡೆದು ಕರ್ನಾಟಕದಲ್ಲಿ 150 ದಿನಗಳನ್ನು ಪೂರೈಸಿ ಸಿನಿಮಾ ಅಪಾರ ಅಭಿಮಾನಿ ಬಳಗ ಹೊಂದಿರುವ ರಾಧಿಕಾ ಪಂಡಿತ್ ಅವರನ್ನು ಮತ್ತೆ ತೆರೆ ಮೇಲೆ ನೋಡಲು ಫ್ಯಾನ್ಸ್ ಕಾತುರದಿಂದ ಕಾಯ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q