ಮಧುಗಿರಿ: 2021- 22ನೇ ಸಾಲಿನ ರಾಷ್ಟ್ರೀಯ ವಿಕಾಸ ಯೋಜನೆಯಡಿ ರಸಮೇವು ಘಟಕ ಸ್ಥಾಪಿಸಲು ತಾಲೂಕಿನ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ರೈತರು ಮೇ 10ರೊಳಗೆ ತಮ್ಮ ಹತ್ತಿರದ ಪಶು ಆಸ್ಪತ್ರೆಗಳಿಂದ ಅರ್ಜಿ ಪಡೆದು ನಿಗದಿತ ದಾಖಲಾತಿಯೊಂದಿಗೆ ಹತ್ತಿರದ ಪಶು ಆಸ್ಪತ್ರೆಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಮಧುಗಿರಿ ತಾಲೂಕಿನ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಜಿ.ಗಿರೀಶ್ ಬಾಬು ರೆಡ್ಡಿ ತಿಳಿಸಿದ್ದಾರೆ.
ಮಧುಗಿರಿ ತಾಲೂಕಿನಿಂದ 47 ಸಾಮನ್ಯ ವರ್ಗ, 18 ಪರಿಶಿಷ್ಟ ಜಾತಿ, 9 ಪರಿಶಿಷ್ಟ ಪಂಗಡದ ಫಲಾನುಭವಿಗಳನ್ನು ಶಾಸಕರ ಅಧ್ಯಕ್ಷತೆಯಲ್ಲಿನ ಆಯ್ಕೆ ಸಮಿತಿಯಿಂದ ಆಯ್ಕೆ ಮಾಡಲಾಗುವುದು.
ಆಯ್ಕೆ ಮಾಡಲಾದ ಪ್ರತಿ ಫಲಾನುಭವಿಗಳಿಗೆ 5 ಕೆ.ಜಿ. ಆಫ್ರಿಕನ್ ಟಾಲ್ ಮೇವಿನ ಬೀಜ, ಒಂದು ಪ್ಲಾಸ್ಟಿಕ್ ಶೀಟ್, 100 ಕೆ.ಜಿ.ಸಾಮರ್ಥ್ಯದ 20 ಸೈಲೋ ಬ್ಯಾಗ್ ಗಳು ಅಥವಾ 500 ಕೆಜಿ ಸಾಮರ್ಥ್ಯದ 4 ಸೈಲೋ ಬ್ಯಾಕ್ ಗಳನ್ನು ಉಚಿತವಾಗಿ ನೀಡಲಾಗುವುದು.
ಅರ್ಜಿದಾರರು ಮೇವು ಬೆಳೆಯಲು ಭೂಮಿ ಹೊಂದಿರಬೇಕು. Fruits ID ಹೊಂದಿರಬೇಕು. ಕಡ್ಡಾಯವಾಗಿ 2 ಜಾನುವಾರುಗಳನ್ನು ಹೊಂದಿರಬೇಕು. ಇಲಾಖೆಯಿಂದ ನೀಡಿರುವ ಅಥವಾ ಸ್ವಂತ ಮೇವು ಕತ್ತರಿಸುವ ಯಂತ್ರವನ್ನು ಹೊಂದಿರುವವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5