nammatumakuru

    Subscribe to Updates

    Get the latest creative news from FooBar about art, design and business.

    What's Hot

    ನಕಾಶೆ ರಸ್ತೆ ತೆರವುಗೊಳಿಸಲು ವಿಳಂಬ: ಹಸಿರು ಸೇನೆಯಿಂದ ಪ್ರತಿಭಟನೆ

    December 19, 2025

    ಡಿ.21ರಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮ: ತಪ್ಪದೇ ಲಸಿಕೆ ಹಾಕಿಸಿ: ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್

    December 19, 2025

    ನಾಟಕ, ಬದುಕನ್ನು ಕಟ್ಟಿಕೊಡುವ ಜೊತೆಗೆ ಸಾಮರಸ್ಯ ಬೆಳೆಸುತ್ತದೆ: ವೈ.ಎಂ.ಪುಟ್ಟಣ್ಣಯ್ಯ

    December 19, 2025
    Facebook Twitter Instagram
    ಟ್ರೆಂಡಿಂಗ್
    • ನಕಾಶೆ ರಸ್ತೆ ತೆರವುಗೊಳಿಸಲು ವಿಳಂಬ: ಹಸಿರು ಸೇನೆಯಿಂದ ಪ್ರತಿಭಟನೆ
    • ಡಿ.21ರಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮ: ತಪ್ಪದೇ ಲಸಿಕೆ ಹಾಕಿಸಿ: ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್
    • ನಾಟಕ, ಬದುಕನ್ನು ಕಟ್ಟಿಕೊಡುವ ಜೊತೆಗೆ ಸಾಮರಸ್ಯ ಬೆಳೆಸುತ್ತದೆ: ವೈ.ಎಂ.ಪುಟ್ಟಣ್ಣಯ್ಯ
    • ಲೇಖಕಿಯರ ಸಂಘದ ದತ್ತಿ ಬಹುಮಾನಗಳಿಗೆ ಕಥೆ—ಕವನಗಳ ಆಹ್ವಾನ
    • ಡಿ.24ರಂದು ಮಧುಗಿರಿ ತಾಲ್ಲೂಕು ಸಾಹಿತ್ಯ ಸಮ್ಮೇಳನ: ಅಧ್ಯಕ್ಷರಾಗಿ ಕೆ.ಪಿ. ನಟರಾಜು ಆಯ್ಕೆ
    • ಶಿರಾ | ಜಮೀನು ವಿಚಾರಕ್ಕೆ ಜಗಳ: ಒಬ್ಬನ ಕೊಲೆಯಲ್ಲಿ ಅಂತ್ಯ
    • ಉತ್ತರ ಕರ್ನಾಟಕಕ್ಕೆ ₹3,450 ಕೋಟಿ ಬಂಪರ್ ಅನುದಾನ: ಸಚಿವ ಸಂಪುಟ ಸಭೆಯ ಮಹತ್ವದ ತೀರ್ಮಾನಗಳು
    • ಮುಳ್ಳೂರು ಆಸ್ಪತ್ರೆಗೆ ಎರಡು ಬಾರಿ ಉತ್ತಮ ಆಸ್ಪತ್ರೆ  ಪ್ರಶಸ್ತಿ: ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮಹಿಳಾ ಹಾಸ್ಟೆಲ್ ನಲ್ಲಿ ಐಟಂ ಸಾಂಗ್ ಗೆ ಡಾನ್ಸ್: ಜಿಲ್ಲಾಧಿಕಾರಿ, ಇತರ ಅಧಿಕಾರಿಗಳ ಅಮಾನತಿಗೆ  ನೈಜ ಹೋರಾಟಗಾರರ ವೇದಿಕೆ ಸರ್ಕಾರಕ್ಕೆ ದೂರು
    ತುಮಕೂರು December 2, 2023

    ಮಹಿಳಾ ಹಾಸ್ಟೆಲ್ ನಲ್ಲಿ ಐಟಂ ಸಾಂಗ್ ಗೆ ಡಾನ್ಸ್: ಜಿಲ್ಲಾಧಿಕಾರಿ, ಇತರ ಅಧಿಕಾರಿಗಳ ಅಮಾನತಿಗೆ  ನೈಜ ಹೋರಾಟಗಾರರ ವೇದಿಕೆ ಸರ್ಕಾರಕ್ಕೆ ದೂರು

    By adminDecember 2, 2023No Comments3 Mins Read
    hostel

    ತುಮಕೂರಿನಲ್ಲಿ ಜಿಲ್ಲಾ ಮಟ್ಟದ ಕೆಲವು ಅಧಿಕಾರಿಗಳು ಮಹಿಳಾ ಹಾಸ್ಟೆಲ್ ನಲ್ಲಿ ತಡರಾತ್ರಿ ಅಶ್ಲೀಲ ಸಾಹಿತ್ಯದ ಹಾಡಿಗೆ ಡಾನ್ಸ್ ಮಾಡಿ, ವಿದ್ಯಾರ್ಥಿನಿಯರ ಮೈ, ಕೈ ಮುಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಜಿಲ್ಲೆಯಲ್ಲಿ  ಎಸ್ ಸಿ– ಎಸ್ ಟಿ ಹಾಸ್ಟೆಲ್ ಗಳು ಎಷ್ಟೊಂದು ಸುರಕ್ಷಿತ ಎನ್ನುವ  ಪ್ರಶ್ನೆಗಳು ವ್ಯಾಪಕವಾಗಿ ಕೇಳಿ ಬಂದಿದೆ.

    ತಡ ರಾತ್ರಿ ಹಾಸ್ಟೆಲ್ ಗಳಿಗೆ ಪ್ರವೇಶಿಸಿ ದೀಪಾವಳಿ ನೆಪದಲ್ಲಿ  ಸ್ವತಃ ಜಿಲ್ಲಾಧಿಕಾರಿಗಳು ಸೇರಿದಂತೆ ಇತರ ಜವಾಬ್ದಾರಿಯುತ ಅಧಿಕಾರಿಗಳೇ ವಿದ್ಯಾರ್ಥಿನಿಯರ ಕೈ ಹಿಡಿದುಕೊಂಡು, ಡಾನ್ಸ್ ಮಾಡೋದು, ಅಧಿಕಾರಿಗಳನ್ನು ಹೆಣ್ಣು ಮಕ್ಕಳಿಂದ ಎತ್ತಿ ಹಿಡಿಸಿ  ಕುಣಿಸುವಂತೆ ಮಾಡಿಸಿರುವುದು  ಹೆಣ್ಣು ಹೆತ್ತವರನ್ನು ಆತಂಕಕ್ಕೆ ದೂಡಿದೆ.


    Provided by
    Provided by

    ತುಮಕೂರು ಜಿಲ್ಲಾಧಿಕಾರಿಗಳಾದ ಶ್ರೀನಿವಾಸ ಕೆ., ತಹಶೀಲ್ದಾರ್ ಸಿದ್ದಪ್ಪ, ಜಂಟಿ ನಿರ್ದೇಶಕ ಕೃಷ್ಣಪ್ಪ ಸೇರಿದಂತೆ  ಜಿಲ್ಲೆಯ ಇತರ ಅಧಿಕಾರಿಗಳ ದುರ್ವರ್ತನೆ, ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಗಾದೆಯನ್ನು ಜಿಲ್ಲೆಯ ಜನರು ನೆನಪಿಸಿಕೊಳ್ಳುವಂತೆ ಮಾಡಿದೆ.

    ಇತ್ತೀಚೆಗೆ ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿನಿಯೋರ್ವಳು ರಾತ್ರಿ 11 ಗಂಟೆಗೆ ಹಾಸ್ಟೆಲ್ ನ ಕಾಂಪೌಂಡ್ ಗೋಡೆ ಹಾರಿ, ಕಾರಿನಲ್ಲಿ ಹೋಗಿ ಬಳಿಕ ಬೆಳಗ್ಗಿನ ಜಾವ 5 ಗಂಟೆಗೆ ಹಾಸ್ಟೆಲ್ ಗೆ ಮರಳಿದ ಘಟನೆ ಮಾಸುವ ಮುನ್ನವೇ, ಇದೀಗ ಮತ್ತೊಂದು ಹಾಸ್ಟೆಲ್ ನಲ್ಲಿ, ಇಡೀ ಜಿಲ್ಲೆಯ ಜವಾಬ್ದಾರಿಯನ್ನು ಹೊತ್ತಿರುವ ಒಬ್ಬ ಜವಾಬ್ದಾರಿಯುತ ಜಿಲ್ಲಾಧಿಕಾರಿಗಳು ತಡ ರಾತ್ರಿ  ತಮ್ಮ ಪಟಾಲಂ ಜೊತೆಗೆ ಎಸ್ ಸಿ—ಎಸ್ ಟಿ ಮಹಿಳಾ ಹಾಸ್ಟೆಲ್ ಗೆ ತೆರಳಿ ಕಾರ್ಯಕ್ರಮದ ನೆಪದಲ್ಲಿ ಅಸಭ್ಯ, ಅಶ್ಲೀಲ ಸಾಹಿತ್ಯದ ಹಾಡುಗಳಿಗೆ ಹೆಣ್ಣು ಮಕ್ಕಳಿಂದ ಡಾನ್ಸ್ ಮಾಡಿಸಿರೋದೇ ಅಲ್ಲದೇ , ಹೆಣ್ಣು ಮಕ್ಕಳ ಕೈ ಹಿಡಿದುಕೊಂಡು ಕುಣಿದು ಕುಪ್ಪಳಿಸಿರೋದು ಆತಂಕ ಸೃಷ್ಟಿಸಿದೆ. ಅಧಿಕಾರಿಗಳು ಎಸ್ ಸಿ—ಎಸ್ ಟಿ ಮಹಿಳಾ ಹಾಸ್ಟೆಲ್ ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳಿಗೆ ಇದು ಕಾರಣವಾಗಿದೆ.

    ಈ ಘಟನೆಗೆ ಸಂಬಂಧಿಸಿದಂತೆ,  ತುಮಕೂರು ಜಿಲ್ಲಾಧಿಕಾರಿ ಶ್ರೀನಿವಾಸ್ ಕೆ, ತಹಶೀಲ್ದಾರ್ ಸಿದ್ದೇಶ್, ಜಂಟಿ ನಿರ್ದೇಶಕ ಕೃಷ್ಣಪ್ಪ ಸೇರಿದಂತೆ ಇತರ ಅಧಿಕಾರಿಗಳ ಈ ಕೃತ್ಯವನ್ನು ನೈಜ ಹೋರಾಟಗಾರರ ವೇದಿಕೆ, ಬೆಂಗಳೂರು ಕಟು ವಾಕ್ಯಗಳಿಂದ ಖಂಡಿಸಿದೆ, ಜಿಲ್ಲಾಧಿಕಾರಿಗಳಾಗಿ ಶ್ರೀನಿವಾಸ್ ಕೆ.  ಅವರು ಸರ್ಕಾರದಲ್ಲಿರುವ  ಸಾರ್ವಜನಿಕರ ತೆರಿಗೆ ಹಣದಿಂದ  ಮಂಜೂರಾಗಿರುವ ಹಲವು ಸೌಲಭ್ಯಗಳಲ್ಲಿ   ಶುದ್ಧ ಕುಡಿಯುವ ನೀರು, ಹಾಸಿಗೆ, ದಿಂಬು, ಊಟದ ವ್ಯವಸ್ಥೆಗಳನ್ನು ಪರಿಶೀಲಿಸಲು ಮತ್ತು ಕಿರಿಯ  ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಿಸಿದ್ದಾರೋ ಇಲ್ಲವೋ? ಎಂಬುದನ್ನು ವಿದ್ಯಾರ್ಥಿನಿಯರ ನಿಲಯಕ್ಕೆ  ಸಂಜೆ 6 ಗಂಟೆಯ ಒಳಗೆ ಪರಿಶೀಲಿಸಬೇಕೆ ಹೊರತು, ತಡ ರಾತ್ರಿ ಸಮಯದಲ್ಲಿ  ಹಾಸ್ಟೆಲಿಗೆ ಭೇಟಿ ನೀಡಿ, ಜವಾಬ್ದಾರಿಯನ್ನು ಮರೆತು  ಸಿನಿಮಾ ಹಾಡುಗಳು ಹಾಕಿ  ಕುಣಿದಿರುವುದು ನೋಡಿದರೆ ಇವರನ್ನು ಯಾರಿಗೆ ಹೋಲಿಸಬೇಕು ಎಂಬುದೇ ನಮಗೆ ಸಂಶಯವಾಗಿದೆ ಎಂದಿದೆ.

    ಈ ಹಾಸ್ಟೆಲ್ ನಲ್ಲಿ ವಾಸಿಸುವ ವಿದ್ಯಾರ್ಥಿನಿಯರು ಮತ್ತು ಅವರ ಪೋಷಕರು ಬಡತನದಿಂದ ಬೆಂದು, ಅಸ್ಪೃಶ್ಯತೆಯಿಂದ ನೊಂದಿರುತ್ತಾರೆ. ನಮ್ಮ ಮಕ್ಕಳಾದರೂ ಒಳ್ಳೆಯ ವಿದ್ಯಾಭ್ಯಾಸ ಮಾಡಲಿ ಎಂದು ಸರ್ಕಾರವೇ ನಡೆಸುತ್ತಿರುವ  ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ವರ್ಗದ ಹಾಸ್ಟೆಲ್ಲಿಗೆ ಸೇರಿಸಿರುತ್ತಾರೆ. ನಾವು ಅಧಿಕಾರಿಗಳು ಏನು  ಮಾಡಿದರು ನಡೆಯುತ್ತದೆ ಆನೆ ನಡೆದಿದ್ದೇ ಹಾದಿಯೆಂಬ ಧೋರಣೆಯಿಂದ ಹೊರಗೆ ಬರಬೇಕಾಗಿದೆ,  ಕರ್ನಾಟಕ ರಾಜ್ಯದಲ್ಲಿ ಅಥವಾ ದೇಶದಲ್ಲಿ ಯಾವುದೇ ವಿದ್ಯಾರ್ಥಿನಿಯರ ನಿಲಯಕ್ಕೆ ಸಂಜೆ ಆರು ಗಂಟೆಯ  ನಂತರ ಮಹಿಳಾ ಅಧಿಕಾರಿಗಳನ್ನು ಹೊರತುಪಡಿಸಿ ಬೇರೆ ಯಾರು ಹೋಗುವುದಕ್ಕೆ ಅವಕಾಶವಿರುವುದಿಲ್ಲ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗದ ವಿದ್ಯಾರ್ಥಿನಿಯರ ನಿಲಯಕ್ಕೆ ತಡರಾತ್ರಿ ಹೋಗಿ ಡ್ಯಾನ್ಸ್ ಮಾಡಿರುವುದು ಅಕ್ಷಮ್ಯ ಅಪರಾಧವಾಗಿರುತ್ತದೆ ಎಂದು ನೈಜ ಹೋರಾಟಗಾರರ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.

    ಈ ವಿದ್ಯಾರ್ಥಿ ನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ಶ್ರೀಮಂತರು, ಬಲಾಢ್ಯರು, ಮೇಲ್ವರ್ಗದವರ ಕುಟುಂಬದಿಂದ ಬಂದವರಲ್ಲ ತುಳಿತಕ್ಕೊಳಗಾದ ಕುಟುಂಬದಿಂದ, ಅಸ್ಪೃಶ್ಯತೆಯಿಂದ ಬೆಂದಿರುವ ಕುಟುಂಬದಿಂದ ಬಂದಿರುವ   ಅವರಿಗೆ  ಇಷ್ಟವಿಲ್ಲದಿದ್ದರೂ ಸಹ ಜಿಲ್ಲಾಧಿಕಾರಿ, ತಹಶೀಲ್ದಾರ್  ಎಂಬ ಭಯದಿಂದ ಮತ್ತು ಪ್ರಶ್ನೆ ಮಾಡಿದರೆ ಎಲ್ಲಿ ನಮ್ಮನ್ನು ಹಾಸ್ಟೆಲ್ ನಿಂದ ಹೊರಗೆ ಕಳುಹಿಸುತ್ತಾರೆ  ಎಂಬ ಕಾರಣದಿಂದ  ಅವರೊಂದಿಗೆ ಡ್ಯಾನ್ಸ್ ಮಾಡಲು  ಸಹಕರಿಸಿರುವುದು ಮೇಲ್ನೋಟಕ್ಕೆ ವ್ಯಕ್ತವಾಗುತ್ತಿದೆ. ಜಿಲ್ಲೆಯ ಆಡಳಿತ ಚುಕ್ಕಾಣಿ ಹಿಡಿದಿರುವ ಜಿಲ್ಲಾಧಿಕಾರಿಗಳು   ಹುದ್ದೆಗೆ ತಕ್ಕಂತೆ ಘನತೆ ಮತ್ತು ಗಾಂಭೀರ್ಯತೆಯನ್ನು ಕಾಪಾಡುವಲ್ಲಿ, ವಿದ್ಯಾರ್ಥಿನಿಯರೊಂದಿಗೆ ಹೇಗೆ ವರ್ತಿಸಬೇಕೆಂಬ ಸಾಮಾನ್ಯ ಜ್ಞಾನವಿಲ್ಲದೆ ಮತ್ತು ಜಿಲ್ಲೆಯ ಅವರ ಕೈ ಕೆಳಗಿನ ಇತರ ಅಧಿಕಾರಿಗಳಿಗೂ ಹೆಣ್ಣು ಮಕ್ಕಳೊಂದಿಗೆ ಕುಣಿಯಲು ಪ್ರೋತ್ಸಾಹಿಸಿರುತ್ತಾರೆ ಎಂದು ಆರೋಪಿಸಿದೆ.

    ಜಿಲ್ಲೆಯ ಅಧಿಕಾರಿಗಳು ಮತ್ತು ಇನ್ನಿತರ ನಾಗರಿಕರು ಜಿಲ್ಲಾಧಿಕಾರಿಗಳೇ ಈ ರೀತಿ ವರ್ತಿಸಿರುವುದರಿಂದ   ಅವರನ್ನು ಹಿಂಬಾಲಿಸಿದರೆ ವಿದ್ಯಾರ್ಥಿನಿಯರ ಉನ್ನತ ಮಟ್ಟದ ವ್ಯಾಸಂಗಕ್ಕೂ, ವೈಯಕ್ತಿಕ ಜೀವನಕ್ಕೂ ಹಾನಿ ಆಗಬಹುದು. ಇಂತಹ ಅಶಿಸ್ತಿನ ಮತ್ತು ಬಹಿರಂಗವಾಗಿ ಹೆಣ್ಣು ಮಕ್ಕಳೊಂದಿಗೆ ವರ್ತಿಸಿದ ರೀತಿ, ಡ್ಯಾನ್ಸ್ ಮಾಡುವ ರೀತಿ  ಗಮನಿಸಿದರೆ ಇವರು ಜಿಲ್ಲಾಧಿಕಾರಿಗಳಾಗಿ ಮುಂದುವರಿಯಲ್ಲೂ ಅರ್ಹತೆಯನ್ನೇ ಕಳೆದುಕೊಂಡಿರುತ್ತಾರೆ. ಆದುದರಿಂದ ತಕ್ಷಣ ಜಿಲ್ಲಾಧಿಕಾರಿಯದ ಶ್ರೀನಿವಾಸ್ ಕೆ, ತಹಶೀಲ್ದಾರ್ ಸಿದ್ದಪ್ಪ, ಜಂಟಿ ನಿರ್ದೇಶಕ ಕೃಷ್ಣಪ್ಪ ಅವರನ್ನು ಅಮಾನತ್ತಿನಲ್ಲಿಟ್ಟು ಇಲಾಖೆ ತನಿಖೆ ನಡೆಸಿ ಅವರ ಮೇಲೆ ಶಿಸ್ತು ಕ್ರಮಗಳನ್ನು ಜರುಗಿಸಬೇಕೆಂದು ನೈಜ ಹೋರಾಟಗಾರರ ವೇದಿಕೆ  ಕರ್ನಾಟಕ ಸರ್ಕಾರದ  ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಆಗ್ರಹಿಸಿದೆ.

     

    ಮಾನ್ಯ ಜಿಲ್ಲಾಧಿಕಾರಿಗಳು, ಬಾಲಕಿಯರ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಗಳಲ್ಲಿ ನಡೆದುಕೊಂಡಿರುವ ರೀತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ಇದು ದುರಾದೃಷ್ಟಕರ ಮತ್ತು ಖಂಡನೀಯವಾಗಿದೆ. ತುಮಕೂರು ಜಿಲ್ಲೆಯಲ್ಲಿ ಮೂಲಭೂತ ಸಮಸ್ಯೆಗಳು ಸೇರಿದಂತೆ ಬಹಳಷ್ಟು ಸಮಸ್ಯೆಗಳಿವೆ. ಇಂತಹ ಸಂದರ್ಭದಲ್ಲಿ ಮಹಿಳಾ ಹಾಸ್ಟೆಲ್ ಗಳಿಗೆ ರಾತ್ರಿ ವೇಳೆ ಹೋಗಿ ನೃತ್ಯ ಪ್ರದರ್ಶನ ಮಾಡುವ ಮನಸ್ಥಿತಿ ಒಳ್ಳೆಯದಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳ ವಿರುದ್ಧ ನೈಜ ಹೋರಾಟಗಾರರ ವೇದಿಕೆ ದೂರನ್ನು ದಾಖಲಿಸಿದೆ. ನಮ್ಮ ದೂರಿಗೆ ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ನಡೆಯನ್ನು ನೋಡಿ ನಾವು ಮುಂದಿನ ಹೋರಾಟವನ್ನು ರೂಪುಗೊಳಿಸುತ್ತೇವೆ.

    – ಕುಣಿಗಲ್ ನರಸಿಂಹಮೂರ್ತಿ, ನೈಜ ಹೋರಾಟಗಾರರ ವೇದಿಕೆ

     

    admin
    • Website

    Related Posts

    ಲೇಖಕಿಯರ ಸಂಘದ ದತ್ತಿ ಬಹುಮಾನಗಳಿಗೆ ಕಥೆ—ಕವನಗಳ ಆಹ್ವಾನ

    December 19, 2025

    ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದು ಅಪರಾಧ: ಪೊಲೀಸ್ ಅಧಿಕಾರಿ ಎಸ್.ಜಿ.ಶ್ರೀನಿವಾಸ ಪ್ರಸಾದ್

    December 19, 2025

    ತುಮಕೂರು | ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ

    December 18, 2025

    Comments are closed.

    Our Picks

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಪಾವಗಡ

    ನಕಾಶೆ ರಸ್ತೆ ತೆರವುಗೊಳಿಸಲು ವಿಳಂಬ: ಹಸಿರು ಸೇನೆಯಿಂದ ಪ್ರತಿಭಟನೆ

    December 19, 2025

    ಪಾವಗಡ: ತಾಲ್ಲೂಕಿನ ನಾಗಲಮಡಿಕೆ ಹೋಬಳಿಯ ತಿಮ್ಮಮ್ಮನಹಳ್ಳಿಯಲ್ಲಿ ರೈತರು ತಮ್ಮ ಜಮೀನುಗಳಿಗೆ ಹೋಗಲು ರಸ್ತೆಯ ಸಮಸ್ಯೆಯಿದ್ದು ಅಧಿಕಾರಿಗಳು ಶೀಘ್ರವೇ ಬಗೆಹರಿಸಬೇಕೆಂದು ಒತ್ತಾಯಿಸಿದರು.…

    ಡಿ.21ರಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮ: ತಪ್ಪದೇ ಲಸಿಕೆ ಹಾಕಿಸಿ: ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್

    December 19, 2025

    ನಾಟಕ, ಬದುಕನ್ನು ಕಟ್ಟಿಕೊಡುವ ಜೊತೆಗೆ ಸಾಮರಸ್ಯ ಬೆಳೆಸುತ್ತದೆ: ವೈ.ಎಂ.ಪುಟ್ಟಣ್ಣಯ್ಯ

    December 19, 2025

    ಲೇಖಕಿಯರ ಸಂಘದ ದತ್ತಿ ಬಹುಮಾನಗಳಿಗೆ ಕಥೆ—ಕವನಗಳ ಆಹ್ವಾನ

    December 19, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.