ಸರಗೂರು: ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಪಟ್ಟಣ ಪಂಚಾಯಿತಿಯ 2022-2023 ನೇ ಸಾಲಿನ ಬಜೆಟ್ 1,145.26 ಲಕ್ಷಗಳು ಮಂಡನೆಯಲ್ಲಿ, ಉಳಿತಾಯ 7.77 ಲಕ್ಷಗಳು ಅಯವ್ಯಯ ಮಂಡನೆಯನ್ನು ಪ.ಪಂ. ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಮಾಡಿದ್ದರು.
ಸರಗೂರು ಪಟ್ಟಣವನ್ನು ಅಭಿವೃದ್ಧಿ ಮಾಡಲು 2022 2023 ರ ಸಾಲಿನ ಉಳಿತಾಯ 7.77 ಲಕ್ಷವನ್ನು ಬಿಡುಗಡೆ ಮಾಡಿದ್ದಿವಿ. ಅನುದಾನವನ್ನು ಸರ್ಕಾರ ನೀಡಿದೆ ಪಟ್ಟಣವನ್ನು ಅಭಿವೃದ್ಧಿ ಪಡಿಸಲು ಇನ್ನೂ ಹೆಚ್ಚು ಅನುದಾನ ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸರಗೂರುಅಭಿವೃದ್ಧಿಗೆ ಮಾತುಕತೆ ನಡೆಸಿದ್ದೇವೆ ಎಂದು ಅಧ್ಯಕ್ಷೆ ರಾಧಿಕಾ ಶ್ರೀನಾಥ್ ತಿಳಿಸಿದರು.
ನಂತರ ಪ.ಪಂ. ಸದಸ್ಯ ಶ್ರೀ ನಿವಾಸ್ ಮಾತನಾಡಿ, ಸರಗೂರು ಪಟ್ಟಣವನ್ನು ಅಭಿವೃದ್ಧಿ ಹೊಂದಲು ಶಾಸಕರು ಅನೀಲ್ ಚಿಕ್ಕಮಾದು ಕೈಜೋಡಿಸಿದ್ದಾರೆ. ಎಲ್ಲಾ ಸಚಿವರು ಹಾಗೂ ಮಂತ್ರಿಗಳು ಭೇಟಿ ಮಾಡಿ ಪಟ್ಟಣವನ್ನು ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಸರಗೂರು ತುಂಬುಸೋಗೆ ಗ್ರಾಮದ ಸರಗೂರಿಗೆ ಬರುವ ಸೇತುವೆ ಬಳಿ ಹಾಗೂ ಎರಡು ಕಡೆ ಕಮನ್ ಗೇಟ್ ಯನ್ನು ಅಳವಡಿಸಿದ್ದೇವೆ ಎಂದು ಹೇಳಿದರು.
ಮುಖ್ಯಾಧಿಕಾರಿ ಬಿ.ಜಿ.ಸತೀಶ್ ಮಾತನಾಡಿ, ಟೈಲರಿಂಗ್ ಯಂತ್ರ ಖರೀದಿಸಿ ವಿತರಿಸಲು ರೂ 5 ಲಕ್ಷ, ಪತ್ರಕರ್ತರ ಕಲ್ಯಾಣ ನಿಧಿಗೆ ರೂ 1 ಲಕ್ಷ, ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿ ಶಸ್ತ್ರಚಿಕಿತ್ಸೆ ಹಾಗೂ ಅಂತ್ಯಸಂಸ್ಕಾರ ಸಹಾಯಧನ ರೂ 4.ಲಕ್ಷ, ಮನೆ ದುರಸ್ಥಿ ಸಹಾಯಧನ 2 ಲಕ್ಷ, ಕಪಿಲಾ ನದಿ ಸ್ವಚ್ಛತೆಗೆ 5 ಲಕ್ಷ, ಸ್ವ ಉದ್ಯೋಗಿಗಳ ತರಬೇತಿಗೆ 5 ಲಕ್ಷ, ಕ್ರೀಡಾಂಗಣ ಅಭಿವೃದ್ಧಿ ಹಾಗೂ ಕ್ರೀಡೆಗೆ ಸಹಾಯಧನ 3 ಲಕ್ಷ, ಶವಸಾಗಿಸುವ ವಾಹನ ಖರೀದಿಗೆ ರೂ. 8 ಲಕ್ಷ, ಸಾರ್ವಜನಿಕ ಹಾಗೂ ಸಮುದಾಯ ಶೌಚಾಲಯ ನಿರ್ಮಾಣಕ್ಕಾಗಿ 10 ಲಕ್ಷ, ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕಾಗಿ 15 ಲಕ್ಷ ಯೋಜನೆಗಳನ್ನು ರೂಪಿಸಲಾಗಿದೆ. ಸರ್ಕಾರದಿಂದ ಅನುದಾನ ನೀಡಿದರೆ ಸರಗೂರು ಪಟ್ಟಣವನ್ನು ಇನ್ನಷ್ಟು ಅಭಿವೃದ್ಧಿ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷೆ ರಾಧಿಕಾ ಶ್ರೀನಾಥ್. ಉಪಾಧ್ಯಕ್ಷ ವಿನಾಯಕ ಪ್ರಸಾದ್. ಮುಖ್ಯಾಧಿಕಾರಿ ಬಿ.ಜಿ.ಸತೀಶ್. ಎಸ್.ಎಲ್.ರಾಜಣ್ಣ. ಶ್ರೀನಿವಾಸ, ಶಿವಕುಮಾರ್, ಚಲುವಕೃಷ್ಣ, ಚೈತ್ರ ಸ್ವಾಮಿ, ಸಣ್ಣತಾಯಮ್, ಉಮಾರಾಮಚಂದ್ರ ಹೇಮಾವತಿ ರಮೇಶ್, ದಿವ್ಯ ನವೀನ್ ಕುಮಾರ್, ನಾಮನಿರ್ದೇಶಕರು ಸತೀಶ್ ಹಾಗೂ ಮುಖಂಡರು ಗ್ಯಾಸ್ ಪ್ರಕಾಶ್, ರಮೇಶ್, ಶ್ರೀನಾಥ್ ಹಾಗೂ ಸಿಬ್ಬಂದಿ ವರ್ಗದವರು ಸಭೆಯಲ್ಲಿ ಹಾಜರಿದ್ದರು
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy