ಕೊರಟಗೆರೆ : 2022ರ ಜನವರಿ 20 ರಂದು ಪಟ್ಟಣದಲ್ಲಿ ನಡೆದ ಹಲ್ಲೆ ಮತ್ತು ಬೆದರಿಕೆಯ ಪ್ರಕರಣದಲ್ಲಿ ಮಧುಗಿರಿ 4ನೇ ಜಿಲ್ಲಾ ಸತ್ರ ನ್ಯಾಯಾಲಯವು ತೀರ್ಪು ನೀಡಿದ್ದು, ಮೊದಲನೇ ಆರೋಪಿ ಕೆ.ಟಿ.ವೆಂಕಟೇಶ್ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 1,000 ಸಾವಿರ ದಂಡ ವಿಧಿಸಿ, ಇತರ ಇಬ್ಬರು ಆರೋಪಿಗಳಾದ ಅವರ ಪುತ್ರರಾದ ರೋಹಿತ್ ಮತ್ತು ಕಿಶೋರ್ ಅವರಿಗೆ ತಲಾ 1000 ಸಾವಿರ ದಂಡ ವಿಧಿಸಿದೆ.
ಪಟ್ಟಣದ ಹನುಮಂತಪುರದ ನಿವಾಸಿಗಳಾದ ವೆಂಕಟೇಶ್ ಕೆ.ಟಿ., ರೋಹಿತ್ ಮತ್ತು ಕಿಶೋರ್ ಎಂಬವರು, ಕರ್ನಾಟಕ ಎಟಿಎಂ ಎದುರಿನ ಖಾಲಿ ಜಾಗದಲ್ಲಿ ಶೆಡ್ ನಿರ್ಮಿಸುತ್ತಿದ್ದ ಉಮಾಶಂಕರ್, ಅವರ ತಂದೆ ಕುಮಾರಸ್ವಾಮಿ ಹಾಗೂ ನವೀನ್ ಎಂಬುವರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ್ದರು. ಆರೋಪಿಗಳು ಆ ಜಾಗವು ತಮಗೆ ಸೇರಿದ್ದೆಂದು ತಿಳಿಸಿ ಶೆಡ್ ನಿರ್ಮಾಣಕ್ಕೆ ತಡೆ ನೀಡಲು ಯತ್ನಿಸಿದ್ದರು.
ಈ ಪ್ರಕರಣದಲ್ಲಿ ಅಭಿಯೋಜನೆಯ ಪರವಾಗಿ ವಕೀಲರಾದ ಬಿ.ಎಂ. ನಿರಂಜನಮೂರ್ತಿ ಅವರು ವಾದ ಮಂಡಿಸಿದ್ದರು. ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ ನ್ಯಾಯಾಧೀಶರು ಆರೋಪಿಗಳಿಗೆ ಸೂಕ್ತ ಶಿಕ್ಷೆ ವಿಧಿಸಿದ್ದು, ನ್ಯಾಯದ ಪಾಲನೆಗೆ ಮಹತ್ವದ ಉದಾಹರಣೆ ರೂಪವಾಗಿದೆ.
ಸ್ಥಳೀಯ ಜನರಲ್ಲಿ ಈ ತೀರ್ಪು ಕುರಿತು ವಿಶಿಷ್ಟ ಚರ್ಚೆ ನಡೆಯುತ್ತಿದ್ದು, ಈ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತಿಲ್ಲದ ವರ್ತನೆ ಹಾಗೂ ಗೊಂದಲ ಸೃಷ್ಟಿಸುವವರ ವಿರುದ್ಧ ಕಾನೂನು ಕ್ರಮವು ಹೇಗೆ ಕೈಗೊಳ್ಳಲಾಗುತ್ತಿದೆ ಎಂಬುದರ ಅರಿವು ಹೆಚ್ಚಾಗಿದೆ.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW