ಸಿಎಂ ಸಿದ್ದು ಸರ್ಕಾರ ಶಕ್ತಿ ಯೋಜನೆಯಡಿಯಲ್ಲಿ ಬಸ್ ಪ್ರಯಾಣಕ್ಕೆ ಮಹಿಳೆಯರಿಗೆ ಮಾತ್ರ ಫ್ರೀ ಕೊಟ್ಟಿರೋದು.. ಅದು ಬಿಟ್ಟು ಬಸ್ ನಲ್ಲಿ ಪ್ರಾಣಿ-ಪಕ್ಷಿಗಳನ್ನು ಕೊಂಡೊಯ್ದರೆ ಆಗುತ್ತಾ..? ಹೌದು, ಬಸ್ ನಿರ್ವಾಹಕನೊಬ್ಬ ಬಸ್ ನಲ್ಲಿ ಪ್ರಯಾಣಿಸಿದ ಅಜ್ಜಿ ಮೊಮ್ಮಗಳಿಗೆ ಫ್ರೀ ಟಿಕೆಟ್ ಕೊಟ್ಟಿದ್ದು, ಅವರು ತೆಗೆದುಕೊಂಡು ಹೋದ ಪಕ್ಷಿಗಳಿಗೆ ಮಾತ್ರ ದುಡ್ಡು ಕೊಟ್ಟು ಪ್ರಯಾಣಿಸಿರುವ ರೋಚಕ ಘಟನೆ ಬಗ್ಗೆ ವರದಿಯಾಗಿದೆ.
ಒಂದು ಪಕ್ಷಿಗೆ 111 ರಂತೆ ಟಿಕೇಟ್ ಕೊಟ್ಟಿರೋದನ್ನು ನೋಡಿ ಅಜ್ಜಿಗೆ ಶಾಕ್ ಆಗಿದೆ. ಈ ಹಿಂದೆ ಕೋಳಿಗೆ ಟಿಕೆಟ್ ತೆಗೆದುಕೊಳ್ಳುವ ವಿಚಾರಕ್ಕೂ ಕೂಡ ಅನೇಕ ಕಡೆ ಬಸ್ ಕಂಡಕ್ಟರ್ ಹಾಗೂ ಜನರ ನಡುವೆ ಗಲಾಟೆಗಳಾಗಿವೆ. ಪ್ರಾಣಿ – ಪಕ್ಷಿಗಳಿಗೆ ಟಿಕೆಟ್ ನೀಡದ ನಿರ್ವಾಹಕರು ಪರಿಶೀಲನೆ ವೇಳೆ ಸಿಕ್ಕಾಕಿಕೊಂಡು ಅಮಾನತು ಆದ ಉದಾಹರಣೆಗಳು ಇವೆ. ಇದೀಗ ಈ ನಾಲ್ಕು ಪಕ್ಷಿಗಳಿಗೆ ಬರೋಬ್ಬರಿ 444 ರೂಪಾಯಿ ಕೊಟ್ಟು, ಇವರು ಫ್ರೀ ಟಿಕೆಟ್ ನಲ್ಲಿ ಪ್ರಯಾಣಿಸಿದ್ದಾರೆ.
ಮಾರ್ಚ್ 27ರಂದು ಈ ಘಟನೆ ನಡೆದಿದ್ದು,ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಬಸ್ ವೊಂದರಲ್ಲಿ. ಅಜ್ಜಿ -– ಮೊಮ್ಮಗಳಿಗೆ ಶಕ್ತಿ ಯೋಜನೆಯ ಫ್ರೀ ಟಿಕೆಟ್ ಕೊಟ್ಟಿದ್ದು, ಅವರು ತೆಗೆದುಕೊಂಡು ಹೋಗುತ್ತಿದ್ದ ನಾಲ್ಕು ಪಕ್ಷಿಗಳಿಗೆ ದುಬಾರಿ ಟಿಕೆಟ್ ನೀಡಿ ಪ್ರಯಾಣಿಸಿದ್ದಾರೆ.
ಕೆಎಸ್ ಆರ್ ಟಿಸಿ ಪ್ರಕಾರ ಪ್ರಯಾಣಿಕರು ತಮ್ಮೊಂದಿಗೆ ಕರೆತರುವ ಯಾವುದೇ ಪ್ರಾಣಿ, ಪಕ್ಷಿ, ನಾಯಿಮರಿಗಳಿಗೆ ಅರ್ಧ ಟಿಕೆಟ್ ಅನ್ನು ಖರೀದಿ ಮಾಡಲೇಬೇಕು ಎಂಬ ನಿಯಮವಿದೆ. ಹಾಗೇನಾದರೂ ಟಿಕೆಟ್ ಖರೀದಿ ಮಾಡದೇ ಇದ್ದಲ್ಲಿ, ಪ್ರಯಾಣಿಕನಿಗೆ ಟಿಕೆಟ್ ಬೆಲೆಯ ಶೇ.10ರಷ್ಟು ದಂಡ ಹಾಗೂ ನಿರ್ವಾಹಕನಿಗೆ ಅಮಾನತು ಶಿಕ್ಷೆ ನೀಡಲಾಗುತ್ತದೆ.
ಅದಲ್ಲದೇ ಕೆಎಸ್ ಆರ್ ಟಿಸಿಯ ಹಣ ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನು ಕೂಡ ನಿರ್ವಾಹಕನ ಮೇಲೆ ಹೂಡುವ ಅವಕಾಶವಿದೆ. ಹೀಗಾಗಿ ಬಸ್ ನಿರ್ವಾಹಕ ಕೂಡ ಏನೂ ಮಾಡಲಾಗದ ಪರಿಸ್ಥಿತಿ. ಟಿಕೆಟ್ ಕೊಡಲೇಬೇಕಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296