ಹೆಚ್.ಡಿ.ಕೋಟೆ: ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ಸಂಸ್ಥೆಯಿಂದ ತಾಲೂಕಿನ ಹಿರೇಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಹಿರೇಹಳ್ಳಿ ಹಾಡಿ ಎ. ಕಾಲೋನಿಯಲ್ಲಿ ಶ್ರಮದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ಸಂಸ್ಥೆಯ ಸಿಬ್ಬಂದಿಗಳ ಜೊತೆ ಹಿರೇಹಳ್ಳಿ ಹಾಡಿಯ ಮುಖಂಡರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು. ಹಿರೇಹಳ್ಳಿ ಹಾಡಿಯ ಚಿಕ್ಕ ಮಕ್ಕಳು ಕೂಡ ಶ್ರಮದಾನದಲ್ಲಿ ಪಾಲ್ಗೊಂಡರು.
ಹಿರೇಹಳ್ಳಿ ಹಾಡಿಯ ಮನೆಯ ಮುಂಭಾಗ ಬೆಳೆದಿರುವಂತಹ ಗಿಡಗಂಟಿಗಳನ್ನು ಕಡಿದು. ಒಂದು ಕಡೆ ಶೇಖರಣೆ ಮಾಡಿ ಬೆಂಕಿ ಹಚ್ಚಲಾಯಿತು. ಹಿರೇಹಳ್ಳಿ ಹಾಡಿಯ ಪ್ರಮುಖ ಎರಡು ಬೀದಿಗಳಲ್ಲಿರುವ ಕಳೆಗಳನ್ನು ಸ್ವಚ್ಛಗೊಳಿಸಲಾಯಿತು.
ಚರಂಡಿಯಲ್ಲಿರುವ ತ್ಯಾಜ್ಯ ವಸ್ತುಗಳನ್ನು ಬೇರ್ಪಡಿಸಿ, ಕಸಗಳನ್ನು ಹೊರೆತೆಗೆದು ಚರಂಡಿ ನೀರನ್ನು ಹಾಡಿಯಿಂದ ಹೊರಗಡೆ ಹೋಗುವಂತೆ ಸ್ವಚ್ಛತೆ ಮಾಡಿದರು. ಇದೇ ವೇಳೆ ಚರಂಡಿ ನೀರಿನ ಬಗ್ಗೆ ಹಾಗೂ ಮನೆಯ ಮುಂಭಾಗ ಬೆಳೆದಿರುವಂತಹ ಗಿಡಗಂಟಿಗಳಿಂದ ಬರುವಂತಹ ರೋಗಗಳ ಬಗ್ಗೆ ಹಾಡಿ ಜನತೆಗೆ ಅರಿವು ಮೂಡಿಸಿದರು.
ಬಳಿಕ ಹಿರೇಹಳ್ಳಿ ಹಾಡಿಯ ಮುಖಂಡ ಬಸವರಾಜ ಅವರು ಮಾತನಾಡಿ, ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ಸಂಸ್ಥೆಯು ಹಲವಾರು ವರ್ಷಗಳಿಂದಲೂ ಹಾಡಿ ಜನತೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದು ಬಹಳ ಸಂತಸದ ವಿಚಾರ. ಗ್ರಾಮ ಪಂಚಾಯ್ತಿಗಳು ಮಾಡಬೇಕಾದ ಕೆಲಸವನ್ನು ಎಸ್.ವಿ.ವೈ.ಎಮ್. ಮಾಡುತ್ತಿರುವುದು ಬಹಳ ಶ್ಲಾಘನೀಯ. ಹಾಡಿ ಜನತೆಗೆ ಯಾವುದೇ ರೋಗಗಳು ಬಂದರು ಎಸ್.ವಿ.ವೈ.ಎಮ್ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ನಮ್ಮನ್ನು ಮುಖ್ಯವಾಹಿನಿಗೆ ತರಲು ಸರ್ಕಾರವು ಇನ್ನೂ ಹೆಚ್ಚಿನ ಯೋಜನೆಗಳನ್ನು ರೂಪಿಸುವಲ್ಲಿ ಮುಂದಾಗಬೇಕು ಎಂದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB