ತುಮಕೂರು: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ವತಿಯಿಂದ ತುಮಕೂರು ತಾಲ್ಲೂಕು ಕೋರಾ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಫೆಬ್ರವರಿ 28ರಂದು “ತುಮಕೂರು ತಾಲ್ಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ”ವನ್ನು ಏರ್ಪಡಿಸಲಾಗಿದೆ.
ಸಮ್ಮೇಳನದ ಅಂಗವಾಗಿ ಅಂದು ಬೆಳಿಗ್ಗೆ 7:30 ಗಂಟೆಗೆ ಧ್ವಜಾರೋಹಣ, 8:30 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ, 10 ಗಂಟೆಗೆ ವೇದಿಕೆ ಕಾರ್ಯಕ್ರಮ ಉದ್ಘಾಟನೆ ಕಾರ್ಯಕ್ರಮ ನಡೆಯಲಿವೆ.
ಸಮ್ಮೇಳನದ ಪ್ರಯುಕ್ತ ಫೆಬ್ರವರಿ 28ರ ಮಧ್ಯಾಹ್ನ 12 ಗಂಟೆಗೆ ಸಮ್ಮೇಳನಾಧ್ಯಕ್ಷ ಎಂ.ನಂಜಯ್ಯ ಅವರ ಸಾಹಿತ್ಯಾವಲೋಕನ; 12:45 ಗಂಟೆಗೆ ಕೋರಾ–ಸ್ಥಳೀಯ ಸಾಂಸ್ಕೃತಿಕತೆ, ಶೈಕ್ಷಣಿಕ ನಗರಿಯಿಂದ–ಕೈಗಾರಿಕಾ ನಗರಿಯತ್ತ ತುಮಕೂರು, ಜಾನಪದ ಕಲೆ ಮತ್ತು ಸಾಹಿತ್ಯದ ಮೇಲೆ ನಗರೀಕರಣದ ಪ್ರಭಾವ; 2:30 ಗಂಟೆಗೆ ರಂಗಭೂಮಿ ಮತ್ತು ಸಂಗೀತ, 3:30 ಗಂಟೆಗೆ ಕವಿ ಸಮಯ ಗೋಷ್ಠಿಗಳು ನಡೆಯಲಿವೆ.
ಸಂಜೆ 4:45 ಗಂಟೆಗೆ ಆಜೀವ ಸದಸ್ಯರ ಬಹಿರಂಗ ಅಧಿವೇಶನ, 5 ಗಂಟೆಗೆ ಸನ್ಮಾನ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ ಎಂದು ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4