ಮಧುಗಿರಿ: ನೀವು ನನಗೆ ನೀಡಿರುವ ಅಧಿಕಾರವನ್ನು ನಿಮ್ಮ ಅಭಿವೃದ್ಧಿಗೆ ಬಳಸುತ್ತಿದ್ದೇನೆ, ಎಲ್ಲ ಸಮುದಾಯದಲ್ಲೂ ಬಡವರಿದ್ದು, ಅವರಗಳು ಸಹ ಅಭಿವೃದ್ಧಿಯಾಗಬೇಕು ಎಂದು ಕೆ.ಎನ್.ರಾಜಣ್ಣ ತಿಳಿಸಿದರು.
ಅವರು ಪಟ್ಟಣದ 8ನೇ ವಾರ್ಡ್ನ ಬೆಂಕಿಪುರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಸಿ.ಸಿ ರಸ್ತೆ ಉದ್ಘಾಟಿಸಿ ಮಾತನಾಡಿದರು.
8ನೇ ವಾರ್ಡ್ನಲ್ಲಿ ಹೆಚ್ಚು ಶ್ರಮಜೀವಿಗಳಿದ್ದಾರೆ. ಈ ಹಿಂದೆ ಇಲ್ಲಿನ ಜನರಿಗೆ ಓಡಾಡಲು ಸರಿಯಾದ ರಸ್ತೆ ಇರಲಿಲ್ಲ. ಆದರೆ ಈಗ ನೂತನವಾಗಿ ಸಿ.ಸಿ.ರಸ್ತೆಯನ್ನು ನಿರ್ಮಿಸಲಾಗಿದೆ. ವಾರ್ಡ್ನ ಅಭಿವೃದ್ಧಿಗೆ ಮತ್ತು ಜನರ ಅಗತ್ಯ ಸೌಲಭ್ಯಗಳನ್ನು ಸಂಬಂಧಪಟ್ಟ ಇಲಾಖೆಗಳಿಂದ ಕಲ್ಪಿಸಿಕೊಡಲಾಗುವುದು ಎಂದರು.
ನಿಮ್ಮ ಕಷ್ಟ ಕಾರ್ಪಣ್ಯಗಳು ನಿಮ್ಮ ತಲೆಮಾರಿಗೆ ಅಂತ್ಯವಾಗಬೇಕು. ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಬೇಕು. ನಮ್ಮ ಸರ್ಕಾರ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ನಿಮ್ಮ ಮಕ್ಕಳು ವಿದ್ಯಾವಂತರಾದಾಗ ಮಾತ್ರ ನಿಮ್ಮ ಕಷ್ಟಗಳು ನಿವಾರಣೆಯಾಗುತ್ತವೆ. ವಿದ್ಯೆಗೆ ಸರ್ವಸ್ವವನ್ನು ಗಳಿಸಿಕೊಡುವ ಶಕ್ತಿ ಇದೆ. ನಾನು ಸದಾ ಜನಪರವಾಗಿರುವಂತಹ ಯೋಜನೆಗಳನ್ನು ಜಾರಿ ಮಾಡಿದ್ದು, ನಿಮ್ಮ ಗಳ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಬದ್ಧನಾಗಿದ್ದೇನೆ.
— ಕೆ.ಎನ್.ರಾಜಣ್ಣ, ಶಾಸಕರು.
ಎಂ.ಎಸ್.ಮಲ್ಲಿಕಾರ್ಜುನ್ ಸ್ವಾಮಿ, ಪುರಸಭೆಯ ಮಾಜಿ ಅಧ್ಯಕ್ಷರಾದ ಡಿ.ಜಿ.ಶಂಕರ ನಾರಾಯಣಶೆಟ್ಟಿ, ಎಂ.ಕೆ.ನಂಜುಂಡರಾಜು, ಮಹಮದ್ ಆಯೂಬ್, ಲಾಲಾ ಪೇಟೆ ಮಂಜುನಾಥ್, ಜುಬೇದ ಬಾನು, ಮುಖಂಡರುಗಾದ ಗೋಪಾಲಯ್ಯ, ಲಕ್ಷ್ಮೀನಾರಾಯಣ್, ಕಿಶೋರ್, ನರಸಿಂಹಮೂರ್ತಿ, ಆಚಾರ್ ಮಂಜುನಾಥ್, ಅಲೀಂ, ಶಫೀಕ್ ಅಹಮದ್, ಬಾಲಾಜಿ ಬಾಬು, ಮಿಲ್ ರಾಜಣ್ಣ ಬಾಬು, ಶಿವಪ್ಪ, ಮಾರುತಿ, ಎಸ್ಬಿಟಿ ರಾಮು, ಮುತ್ತರಾಜು, ಚಂದ್ರು, ಒಬಳೇಶ್, ಗೋವಿಂದ, ಶಿವು ಹಾಗೂ ಇತರರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
