ತುಮಕೂರು: ಡಿನ್ನರ್ ಪಾರ್ಟಿ ಕ್ಯಾನ್ಸಲ್ ಆಗಿಲ್ಲ ಮುಂದೂಡಿದ್ದೀವಿ ಅಷ್ಟೇ. ಈಗಾಗ್ಲೆ ಈ ಬಗ್ಗೆ ಸನ್ಮಾನ್ಯ ಪರಮೇಶ್ವರ್ ಹೇಳಿದ್ದಾರೆ. ಕಾಂಗ್ರೆಸ್ ಹೈ ಕಮಾಂಡ್ ಹೇಳಿದಂತೆ ಗೊಂದಲ ಆಗೋದು ಬೇಡ. ಅದನ್ನ ಮುಂದೂಡಬೇಕು ಅಂತ ಹೇಳಿದೆ, ಅದ್ಕೆ ಮುಂದೂಡಿದ್ದೇವೆ ಎಂದು ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಬೇಜಾರ್ ಆಗೋಕ್ಕೆ ಅವ್ರ ಆಸ್ತಿನಾ ಏನಾದ್ರೂ ಬರೆಸಿಕೊಂಡಿದ್ದೀರಾ. ಪ್ರೀ ಯೂನಿರ್ವಸಿಗಳಲ್ಲಿ ಎಸ್ಪಿ, ಎಸ್ಟಿ ಮಕ್ಕಳಿಗೆ ಹಾಸ್ಟೆಲ್, ಸೀಟು ಸಿಗ್ತಿಲ್ಲ. ಇಂತಹ ವಿಚಾರಗಳ ಬಗ್ಗೆ ನಾವು ಚರ್ಚೆ ಮಾಡಲು ಮಿಟಿಂಗ್ ಕರೆದರೆ, ನೀವು ಮಾಡ್ಬೇಡಿ ಅಂದ್ರೆ ಎಂದು ಹೇಳಿದರು.
ಇವರೆಲ್ಲಾ ಎಸ್ಸಿ ಎಸ್ಟಿಗಳ ವಿರೋಧಿಗಳಾ? ಇವೆಲ್ಲಾ ಬಹಳಷ್ಟು ದಿನ ನಡೆಯೋದಿಲ್ಲ. ಹಾಸ್ಟೆಲ್ ಸೀಟ್ ಸಿಗಲ್ಲ, ಸಣ್ಣಪುಟ್ಟ ಸಾಲ ಮಾಡಿ ಮ್ಯಾನೇಜ್ಮೆಂಟ್ ಕೋಟಾದಲ್ಲಿ ಸೀಟು ತಗೊಂಡವನಿಗೆ ಸ್ಕಾಲರ್ಶಿಪ್ ಇಲ್ಲ. ಇದು ಎಸ್.ಸಿ — ಎಸ್ಟಿ ಮಕ್ಕಳ ಜ್ವಲಂತ ಸಮಸ್ಯೆ. ಇಂತಹ ಹತ್ತು ಹಲವಾರು ಸಮಸ್ಯೆಗಳಿವೆ. ಇಂತಹವುಗಳ ಬಗ್ಗ ಚರ್ಚೆ ಮಾಡಲು ಮೀಟಿಂಗ್ ಕರೆದರೆ. ಇದಕ್ಕೆ ರಾಜಕೀಯ ಬಣ್ಣ ಕೊಟ್ಟು ಬಿಟ್ಟು, ಮಾಡ್ಬೇಡಿ ಅಂತ ಹೇಳೋದು ಎಂದರು.
ಎಸ್.ಸಿ ಎಸ್ಟಿ ಸಮಾಜಕ್ಕೆ ಮಾಡೋ ಅನ್ಯಾಯವಿದು. ಮುಂದೆ ಮಿಟಿಂಗ್ ಡೇಟ್ ತಿಳಿಸುತ್ತೇವೆ ಎಂದರು. ಮುಂದಿನ ತಿಂಗಳ 14ನೇ ತಾರೀಕು ಎಂ.ಎಂ ಹಿಲ್ಸ್ ನಲ್ಲಿ ಕ್ಯಾಬಿನೆಟ್ ನಡೆಯುತ್ತೆ. ಚಾಮರಾಜನಗರ ಜಿಲ್ಲೆ ಹೋದ್ರೆ ಮುಖ್ಯಮಂತ್ರಿ, ಸಚಿವ ಸ್ಥಾನ ಹೋಗ್ತದೆ ಅಂತ ಹೇಳ್ತಿದ್ದಾರೆ. ಅಷ್ಟರೊಳಗೆ ಸಭೆ ಮಾಡ್ತೀವಿ, ಇಲ್ಲ ಅಂದ್ರೆ ಕ್ಯಾಬಿನೆಟ್ ಮಿಟಿಂಗ್ ಬಳಿಕ ಸಭೆ ಮಾಡ್ತೀವಿ, ತಿಳಿಸುತ್ತೇವೆ ಎಂದರು.
ಕ್ಯಾಬಿನೆಟ್ ವಿಸ್ತರಣೆ ಯಾವುದು ಇಲ್ಲ. ಯಾವುದೇ ರಾಜಕೀಯ ತೀರ್ಮಾನಗಳಿಲ್ಲ. ಲೋಕೇಶ್ವರ್ ಅವರು ಸಿಎಂ ಬಳಿ ತಿಪಟೂರು ಶಾಸಕ ಷಡಾಕ್ಷರಿ ಅವರ ಬಗ್ಗೆ ಕಂಪ್ಲೇಟ್ ವಿಚಾರ. ಅವ್ರೇನು ನಮ್ಮ ಪಾರ್ಟಿನಾ , ವಿರೋಧ ಪಕ್ಷದವ್ರು ಇರೋದೆ ರೂಲಿಂಗ್ ಪಾರ್ಟಿ ಮೇಲೆ ಕಂಪ್ಲೇಂಟ್ ಮಾಡಲು. ರೂಲಿಂಗ್ ಪಾರ್ಟಿಯವ್ರು, ವಿರೋಧ ಪಕ್ಷದವ್ರನಾ ಬೈಯೊಕ್ಕೆ ಇರೋದು.ಅದು ರಾಜಕೀಯ ಪ್ರಹಸನ ಅಷ್ಟೇ, ಅದಕ್ಕೆ ಹೆಚ್ಚಿನ ಮಹತ್ವ ಕೊಡುವ ಅವಶ್ಯಕತೆ ಇಲ್ಲ ಅಂತ ನಾನು ಭಾವಿಸುತ್ತೇನೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx