ತೀರ್ಥಹಳ್ಳಿ: ಮರ ಏರಿ ಕುಳಿತಿದ್ದ ಹೆಬ್ಬಾವನ್ನು ಸ್ಥಳೀಯರು ಹಿಡಿದು ಕಾಡಿಗೆ ಬಿಟ್ಟಿರುವ ಘಟನೆ ಗುರುವಾರ ಸಂಜೆ ತೀರ್ಥಹಳ್ಳಿಯ ಮೇಳಿಗೆ ಎಂಬಲ್ಲಿ ನಡೆದಿದೆ.
ತಾಲೂಕಿನ ಮೇಳಿಗೆಯ ಕೆರೆದಂಡೆ ಬಳಿ ಇರುವ ಅಡಿಗೆ ಕಂಟ್ರಾಕ್ಟರ್ ಮಹೇಶ್ ಎಂಬುವರ ಮನೆ ಪಕ್ಕದ ಮರದಲ್ಲಿ 12 ರಿಂದ 13 ಅಡಿ ಉದ್ದದ ಅಂದಾಜು 30 ಕೆಜಿ ತೂಕದ ಹೆಬ್ಬಾವೊಂದು ಮರವನ್ನು ಏರಿ ಕುಳಿತಿತ್ತು.
ಈ ವಿಷಯ ತಿಳಿದು ಕಂತುಗದ್ದೆ ಪ್ರವೀಣ್ ಎಂಬುವರು ಸ್ಥಳಕ್ಕೆ ಆಗಮಿಸಿದ್ದು, ಹೆಬ್ಬಾವನ್ನು ಯಶಸ್ವಿಯಾಗಿ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.
ಈ ಹೆಬ್ಬಾವು ಹೇಗೆ ಮರದ ಮೇಲೆ ಏರಿತು, ಎಲ್ಲಿಂದ ಬಂತು ಎನ್ನುವ ಮಾಹಿತಿ ತಿಳಿದು ಬಂದಿಲ್ಲ, ಹೆಬ್ಬಾವು ಬೇಟೆಗಾಗಿ ಹೊಂಚು ಹಾಕುತ್ತಿತ್ತೇ ಎಂದು ಅನುಮಾನದಿಂದ ಸ್ಥಳೀಯರು ಗಾಬರಿಯಾಗಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q