nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ: ಚಲನಚಿತ್ರ ನಟ ಹರೀಶ್ ಸ್ಥಳದಲ್ಲೇ ಸಾವು

    April 12, 2026

    ಬೆಳಗಾವಿ: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಹತ್ಯೆ ಮಾಡಿದ ಪತ್ನಿ; ಸಿನಿಮೀಯ ಮಾದರಿಯಲ್ಲಿ ಕೊಲೆ

    April 12, 2026
    Facebook Twitter Instagram
    ಟ್ರೆಂಡಿಂಗ್
    • ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ
    • ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ: ಚಲನಚಿತ್ರ ನಟ ಹರೀಶ್ ಸ್ಥಳದಲ್ಲೇ ಸಾವು
    • ಬೆಳಗಾವಿ: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಹತ್ಯೆ ಮಾಡಿದ ಪತ್ನಿ; ಸಿನಿಮೀಯ ಮಾದರಿಯಲ್ಲಿ ಕೊಲೆ
    • ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ
    • ತಿಪಟೂರಿನ ಟೈಮ್ ಕಾಲೇಜಿಗೆ ನೂರಕ್ಕೆ ನೂರು ಫಲಿತಾಂಶ: ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದ ವಿದ್ಯಾರ್ಥಿನಿ ರಶ್ಮಿಗೆ 1 ಲಕ್ಷ ರೂ. ಬಹುಮಾನ ಘೋಷಣೆ
    • ಊಹಾ ಪತ್ರಿಕೋದ್ಯಮ ಅತ್ಯಂತ ಅಪಾಯಕಾರಿ: ಸಿಎಂ ಸಿದ್ದರಾಮಯ್ಯ
    • ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಕಾರು, ಬೈಕ್ ಗಳು ಸುಟ್ಟು ಭಸ್ಮ
    • ಎನ್‌ ಎಸ್‌ ಎಸ್ ವಿದ್ಯಾರ್ಥಿಗಳು ನಾಯಕತ್ವ ಮನೋಭಾವ ಬೆಳೆಸಿಕೊಳ್ಳಿ: ಈರಪ್ಪ ನಾಯಕ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಈ ದಿನದ ಕಥೆಯ ಶೀರ್ಷಿಕೆ: ಹಲ್ಲಿ ಶಕುನ
    ಲೇಖನ August 20, 2024

    ಈ ದಿನದ ಕಥೆಯ ಶೀರ್ಷಿಕೆ: ಹಲ್ಲಿ ಶಕುನ

    By adminAugust 20, 2024No Comments3 Mins Read
    artical

    ಒಮ್ಮೆ ಸಿಂಹಳಪುರದ ಅರಸು ವೀರಬಲ್ಲಾಳನು ತನ್ನ ಸಕಲ ಸೈನ್ಯ ತೆಗೆದುಕೊಂಡು ಪಕ್ಕದ ರಾಜ್ಯ ವಿಕ್ರಮಪುರಿ ವಶಪಡಿಸಿಕೊಳ್ಳಲು ತಯಾರು ನಡೆಸಿದ. ಅದರಂತೆ ವಿಕ್ರಮಪುರದ ಗಡಿವರೆವಿಗೂ ಸೈನ್ಯ ತೆಗೆದುಕೊಂಡು ಹೋದ, ಆದರೆ ಇದಕ್ಕೆ ತಕ್ಕ ಉತ್ತರ ಕೊಡಲು ವಿಕ್ರಮಪುರ ಅರಸ ಚಂದ್ರಚೂಡನು ಸರಿಯಾಗಿ ತಯಾರು ಮಾಡಿಕೊಂಡಿದ್ದ. ಮತ್ತು ಅವರ ಆಕ್ರಮಣಕ್ಕಾಗಿ ಕಾಯುತ್ತಿದ್ದ ನಂತರ ವೀರಬಲ್ಲಾಳನು ನೋಡು ಚಂದ್ರಚೂಡ ನೀನಾಗಿಯೇ ಶರಣಾದರೆ ಸರಿ ಇಲ್ಲವಾದರೆ ಆಕ್ರಮಣ ನಡೆಸಬೇಕಾಗುತ್ತದೆ ಮತ್ತು ಗೆಲುವು ನಮ್ಮದಾಗುತ್ತದೆ ಎನ್ನುವಾಗ ಪಕ್ಕದ ಮರದ ಕೊಂಬೆಯಲ್ಲಿದ್ದ ಹಲ್ಲಿ ಲೊಚ್ ಲೊಚ್ ಎಂದು ಲೊಚಗುಟ್ಟಿತು, ಇದನ್ನು ಗಮನಿಸಿದ ರಾಜಪುರೋಹಿತ ಮಹಾರಾಜರೇ ಅವರ ಉತ್ತರಕ್ಕಾಗಿ ಕಾಯುವುದು ಬೇಡ ಹಲ್ಲಿ ಲೊಚಗುಟ್ಟಿದೆ, ಶುಭ ಸಂಕೇತ, ಗೆಲುವು ನಮ್ಮದೇ ಆಕ್ರಮಣ ನಡೆಸಿ ಎಂದಾಗ ಪಲ್ಲಿಯು ಮನದಲ್ಲಿ ಅಯ್ಯೋ ಮೂರ್ಖ ರಾಜಪುರೋಹಿತರೇ ನಾನು ಲೊಚಗುಟ್ಟಿದ್ದು ನನಗೆ ದಣಿವಾಗಿ ನೀರು ಬೇಕಿತ್ತು ಅಷ್ಟೇ ನಿಮಗೆ ಶುಭ ಸಂಕೇತ ನೀಡಲು ಅಲ್ಲ ಏಕೆ ಹೀಗೆ ಯೋಚಿಸಿದಿರಿ ಎನ್ನುವಾಗಲೇ ರಾಜ ವೀರಭಲ್ಲಾಳ ಹೌದ ರಾಜಪುರೋಹಿತರೆ ಹಾಗಾದರೆ ಆಕ್ರಮಣ ನಡೆಸಿ ವೀರ ಸೈನಿಕರೇ ಎನ್ನುವಾಗಲೇ ಸಮಯಕ್ಕಾಗಿ ಕಾಯುತ್ತಿದ್ದ ಚಂದ್ರಚೂಡನ ಸೈನ್ಯ ಎದುರಾಳಿ ಸೈನ್ಯ ದಾಳಿ ಮಾಡುವ ಮುನ್ನವೇ ವಿವಿಧ ತಂತ್ರಗಳಿಂದ ವೀರಬಲ್ಲಾಳನ ಸೈನ್ಯ ದಿಕ್ಕಾಪಾಲು ಆಗುವಂತೆ ಆಕ್ರಮಣ ನಡೆಸಿತು. ಇದರಿಂದ ವಿಚಲಿತರಾದ ವೀರಬಲ್ಲಾಳಣ ಸೈನ್ಯ ದಿಕ್ಕಾಪಾಲಾಗಿ ಓಡಿ ಪಲಾಯನಗೈದು ತನ್ನ ರಾಜ್ಯ ಸೇರಿಕೊಂಡಿತು.

    ಇದರಿಂದ ಸಾಕಷ್ಟು ಅವಮಾನಿತನಾದ ವೀರಬಲ್ಲಾಳ ಹಲವು ವರುಷ ಯಾವುದೇ ಯುದ್ಧ ಮಾಡದೇ ಸುಮ್ಮನಾದ. ನಂತರ ಹೇಗಾದರೂ ಮಾಡಿ ವಿಕ್ರಮಪುರಿ ವಷಪಡಿಸಿಕೊಳ್ಳಲೇ ಬೇಕು ಎಂದು ಸೈನಿಕರಿಗೆ ಸಾಕಷ್ಟು ವಿವಿಧ ಯುದ್ಧ ತರಭೇತಿ ನೀಡಿ, ದೈವ ನೆರವಿಗಾಗಿ ಹಲವು ಹೋಮ ಹವನಗಳನ್ನು ಮಾಡಿದ ಇದರಿಂದ ಸಂತುಷ್ಟನಾದ ದೇವನು ಒಂದು ದಿನ ವೀರಬಲ್ಲಾಳನ ಕನಸಲ್ಲಿ ಬಂದು, ನೋಡು ಈ ಬಾರಿ ನೀನು ಆಕ್ರಮಣ ನಡೆಸು ವಿಜಯ ನಿನ್ನದೇ ಆಗುತ್ತದೆ, ಆದರೆ ನೀನು ಹಲ್ಲಿ ಅಥವಾ ಇತರ ಯಾವುದೇ ಶಕುನದಿಂದ ವಿಚಲಿತನಾಗಬಾರದು ಎಂದು ಹೇಳಿ ಅದೃಶ್ಯನಾದ. ನಂತರ ದೇವನು ಈಗ ವೀರಭಲ್ಲಾಳನ ಅದೃಷ್ಟ ಪರೀಕ್ಷೆ ಮಾಡಲು ನಿರ್ಧರಿಸಿ ಆ ಹಲ್ಲಿಗೂ ಕನಸಲ್ಲಿ ಬಂದು ನೋಡು ವೀರಬಲ್ಲಾಳನು ಮತ್ತೆ ಯುದ್ಧಕ್ಕೆ ಬರುವವನಿದ್ದಾನೆ ಅವನಿಗೆ ವಿಜಯಿಯಾಗುವ ಅಭಯ ನೀಡಿದ್ದೇನೆ. ನೀನು ಅವನಿಗೆ ಶುಭಶಕುನ ನುಡಿಯಬೇಕು ಎಂದು ಹೇಳಿ ಅಂತರ್ಧಾನನಾದನು. ತದನಂತರ ಎಚ್ಚೆತ್ತ ರಾಜ ಇದು ಕನಸು ನಂಬುವುದು ಹೇಗೆ, ನಾನು ಯಾವಾಗಲೂ ಯುದ್ಧ ಗೆಲುವಿನ ಬಗ್ಗೆ ಯೋಚಿಸುತ್ತಿರುವದರಿಂದ ಹೀಗೆ ಕನಸು ಬಿದ್ದಿರಬಹುದು ಎಂದು ಸಮಾದಾನಗೊಂಡು ನಂತರ ಅದು ಏನೇ ಆಗಲಿ ಯುದ್ಧ ಮಾಡಿಯೇ ಬಿಡುವ ಎಂದು ತೀರ್ಮಾನಿಸಿ ಮತ್ತೆ ಸೈನ್ಯ ತೆಗೆದುಕೊಂಡು ವಿಕ್ರಮ ಪುರದ ಗಡಿಗೆ ನಿಲ್ಲಿಸಿಯೇ ಬಿಟ್ಟ. ನಂತರ ವೀರಬಲ್ಲಾಳನು ಜೋರಾಗಿ ಹೇ ಚಂದ್ರಚೂಡ ಈಗ ನಿನ್ನ ಯಾವುದೇ ಯುದ್ಧ ತಂತ್ರ ನನ್ನ ಮುಂದೆ ನಡೆಯದು, ನೋಡು ಈಗ ನಿನ್ನ ಸೈನ್ಯವನ್ನು ಹೇಗೆ ಧೂಳೀಪಟ ಮಾಡುತ್ತೇನೆ ಎನ್ನುವಾಗಲೇ ಅದೇ ಮರದಲ್ಲಿದ್ದ ಅದೇ ಹಲ್ಲಿಯು ತನ್ನ ಮನದಲ್ಲಿ, ಈ ಬಾರಿ ರಾಜನಿಗೆ ಕನಸಲ್ಲಿ ದೇವನ ಅನುಗ್ರಹವಾಗಿದೆ ಹಾಗಾಗಿ ದೇವನ ಆಜ್ಞೆಯಂತೆ ಅವನಿಗೆ ಶುಭಶಕುನ ನೀಡುವ ಎಂದು ಜೋರಾಗಿ ಲೊಚ್ ಲೊಚ್ ಎಂದು ಲೊಚಗುಟ್ಟಿತು ಇದನ್ನು ಗಮನಿಸಿದ ರಾಜ ಪುರೋಹಿತ ಮಹಾರಾಜರೇ ಹಲ್ಲಿಯು ಮತ್ತೆ ಅಪಶಕುನ ನೀಡುತ್ತಿದೆ ಕಳೆದ ಬಾರಿಯಂತೆ ಈ ಬಾರಿಯೂ ನಮಗೆ ಅಪಜಯವಾಗುತ್ತದೆ, ಇದನ್ನು ನಾವು ಶುಭಶಕುನವೆಂದು ಪರಿಗಣಿಸುವುದು ಬೇಡ ತಕ್ಷಣ ಹಿಂದಿರುಗುವ ಎಂದಾಗ ಪಲ್ಲಿಯು ತನ್ನ ಮನದಲ್ಲಿ ಅಯ್ಯೋ ಮೂರ್ಖ ಈ ಬಾರಿ ನಿಮಗೆ ಶುಭಶಕುನ ನೀಡುತ್ತಿದ್ದೇನೆ, ಮಹಾರಾಜರೇ, ನಿಮಗೆ ಕನಸಲ್ಲಿ ದೇವರ ಅನುಗ್ರಹವಾಗಿದೆ, ನಿಮಗೆ ಜಯ ಎಂದಿದ್ದಾರೆ ಆಕ್ರಮಣ ನಡೆಸಿ ಎಂದುಕೊಳ್ಳುತ್ತಿರುವಾಗಲೇ ರಾಜ ವೀರಭಲ್ಲಾಳ ಹೌದು ರಾಜಪುರೋಹಿತರೆ ನಾವು ಆಕ್ರಮಣ ನಡೆಸುವುದು ಬೇಡ ಪಲ್ಲಿ ಶಕುನದಂತೆ ನಾವು ಹಿಂತಿರುಗುವುದು ಕ್ಷೇಮ ಎಂದು ಸೈನಿಕರಿಗೆ ಹಿಂತಿರುಗಲು ಆದೇಶಿಸಿದ ಅದರಂತೆ ಎಲ್ಲರೂ ದಿಕ್ಕಾಪಾಲಾಗಿ ಹಿಂತಿರುಗುತ್ತಿರುವಾಗ ವಿಕ್ರಮಪುರಿ ಸೈನ್ಯ ಬೆಂಬೆಡದೆ ಬಂದು ಸಿಂಹಳಪುರವನ್ನು ಆಕ್ರಮಿಸಿಕೊಂಡಿತು.


    Provided by
    Provided by

    ನೀತಿ: ಶಕುನ ಅಥವಾ ಅಪಶಕುಕನಗಳು ಹೀಗೆಯೇ ಆಗುತ್ತವೆ ಎಂದು ಯಾರಿಂದಲೂ ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ನಮ್ಮ ಕನಸನ್ನು ಭ್ರಮೆ ಎಂದುಕೊಳ್ಳುತ್ತೇವೆ, ಯಾರಿಗೆ ಗೊತ್ತು ಭ್ರಮೆ ಇದ್ದರೂ ಇರಬಹುದು, ಇಲ್ಲದೆಯೂ ಇರಬಹುದು. ಪ್ರಯತ್ನ ಪಟ್ಟರೆ ಮುಂದೆ ಬರುವ ಅದೃಷ್ಟವನ್ನು ಪಡೆಯಬಹುದು. ನಾವು ಕೆಲವೊಮ್ಮೆ ಶುಭಶಕುನವನ್ನು ಅಪಶಕುನ ಎಂದುಕೊಳ್ಳುತ್ತೇವೆ, ಅಪಶಕುನವನ್ನು ಶುಭಶಕುನ ಎಂದೂ ತಿಳಿಯುತ್ತೇವೆ, ಆದರೆ ಕೊನೆಗೆ ನಡೆಯುವುದೆಲ್ಲಾ ನಮ್ಮ ಹಣೆಬರಹದಂತೆ.

    ರಚನೆ: ವೇಣುಗೋಪಾಲ್


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ಚಿತ್ರೀಕರಣ ಪೂರೈಸಿದ ‘ಶಿಲ್ಪಾ ಶ್ರೀನಿವಾಸ್’: ಫ್ಯಾಮಿಲಿ ಸ್ಟಾರ್ ಅಭಿಜಿತ್ ನೃತ್ಯದೊಂದಿಗೆ ಕ್ಲೈಮ್ಯಾಕ್ಸ್ ಪೂರ್ಣ!

    April 6, 2026

    ಭೀಮನಿಗೆ ಹುಚ್ಚು ನಾಯಿ ಕಡಿಯಿತು | ಹಾಸ್ಯ ಡ್ರಾಮ: ಅರಳಿ ಕಟ್ಟೆ ಮಿತ್ರರು. (ಪ್ರಸಂಗ 3)

    April 6, 2026

    ನಡೆಯುವ ದೇವರು, ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು

    April 1, 2026

    Comments are closed.

    Our Picks

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ನವದೆಹಲಿ: ಭಾರತದಲ್ಲಿ ಸಮಾನತೆಯನ್ನು ಹೋಗಲಾಡಿಸಿ, ಸಂವಿಧಾನವನ್ನು ನಾಶಪಡಿಸುವುದೇ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಮುಖ್ಯ ಉದ್ದೇಶವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್…

    ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ: ಚಲನಚಿತ್ರ ನಟ ಹರೀಶ್ ಸ್ಥಳದಲ್ಲೇ ಸಾವು

    April 12, 2026

    ಬೆಳಗಾವಿ: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಹತ್ಯೆ ಮಾಡಿದ ಪತ್ನಿ; ಸಿನಿಮೀಯ ಮಾದರಿಯಲ್ಲಿ ಕೊಲೆ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.