nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸರಗೂರು: ಮೂರನೇ ಆಷಾಢ ಶುಕ್ರವಾರ -– ವಾಹನ ಚಾಲಕರ ಸಂಘದಿಂದ ವಿಶೇಷ ಪೂಜೆ ಹಾಗೂ ಖಾಕಿ ಸಮವಸ್ತ್ರ ವಿತರಣೆ

    August 1, 2026

    ಔರಾದ್: ಜೈ ಕಿಸಾನ್ ಶಾಲೆ ಶಿಕ್ಷಕ, ಬಿಎಲ್ ಒ ಮಲ್ಲಿಕಾರ್ಜುನ ಪಿಟ್ರೆ ನಿಧನ

    August 1, 2026

    ಕಾವೇರಿ ನೀರು ಹಂಚಿಕೆ ವಿವಾದ: ತಮಿಳುನಾಡು ಸಿಎಂ ಕರ್ನಾಟಕ ಭೇಟಿ ಮುಂದೂಡಿಕೆ

    July 31, 2026
    Facebook Twitter Instagram
    ಟ್ರೆಂಡಿಂಗ್
    • ಸರಗೂರು: ಮೂರನೇ ಆಷಾಢ ಶುಕ್ರವಾರ -– ವಾಹನ ಚಾಲಕರ ಸಂಘದಿಂದ ವಿಶೇಷ ಪೂಜೆ ಹಾಗೂ ಖಾಕಿ ಸಮವಸ್ತ್ರ ವಿತರಣೆ
    • ಔರಾದ್: ಜೈ ಕಿಸಾನ್ ಶಾಲೆ ಶಿಕ್ಷಕ, ಬಿಎಲ್ ಒ ಮಲ್ಲಿಕಾರ್ಜುನ ಪಿಟ್ರೆ ನಿಧನ
    • ಕಾವೇರಿ ನೀರು ಹಂಚಿಕೆ ವಿವಾದ: ತಮಿಳುನಾಡು ಸಿಎಂ ಕರ್ನಾಟಕ ಭೇಟಿ ಮುಂದೂಡಿಕೆ
    • ಬೀದರ್: ಬಸವಕಲ್ಯಾಣದಲ್ಲಿ ಕೆರೆಯಂತಾದ ರಸ್ತೆಗಳು; ಗುಂಡಿಗಳಲ್ಲಿ ಈಜಾಡಿದ ಮಕ್ಕಳು!
    • ಸರಗೂರು: ತಾಯಿ ಚಿಕ್ಕದೇವಮ್ಮ ಬೆಟ್ಟದಲ್ಲಿ ಮೂರನೇ ಆಷಾಢ ಶುಕ್ರವಾರದ ಸಂಭ್ರಮ; ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ
    • ಸರಗೂರು: ಮಾನವ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ: ಅಹಮದ್ ಖಾನ್ ಸೆರ್
    • ತಿಪಟೂರು: ಆ.12ರಿಂದ ಭೀಮನ ಅಮಾವಾಸ್ಯೆ ಮಹೋತ್ಸವ
    • ಆ.3 ರಿಂದ ಕೋಟೆ ಗ್ರಾಮ ದೇವತೆ ಅಮ್ಮನವರ ಜಾತ್ರಾ ಮಹೋತ್ಸವ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಈ ದಿನದ ಕಥೆಯ ಶೀರ್ಷಿಕೆ: ಹಲ್ಲಿ ಶಕುನ
    ಲೇಖನ August 20, 2024

    ಈ ದಿನದ ಕಥೆಯ ಶೀರ್ಷಿಕೆ: ಹಲ್ಲಿ ಶಕುನ

    By adminAugust 20, 2024No Comments3 Mins Read
    artical

    ಒಮ್ಮೆ ಸಿಂಹಳಪುರದ ಅರಸು ವೀರಬಲ್ಲಾಳನು ತನ್ನ ಸಕಲ ಸೈನ್ಯ ತೆಗೆದುಕೊಂಡು ಪಕ್ಕದ ರಾಜ್ಯ ವಿಕ್ರಮಪುರಿ ವಶಪಡಿಸಿಕೊಳ್ಳಲು ತಯಾರು ನಡೆಸಿದ. ಅದರಂತೆ ವಿಕ್ರಮಪುರದ ಗಡಿವರೆವಿಗೂ ಸೈನ್ಯ ತೆಗೆದುಕೊಂಡು ಹೋದ, ಆದರೆ ಇದಕ್ಕೆ ತಕ್ಕ ಉತ್ತರ ಕೊಡಲು ವಿಕ್ರಮಪುರ ಅರಸ ಚಂದ್ರಚೂಡನು ಸರಿಯಾಗಿ ತಯಾರು ಮಾಡಿಕೊಂಡಿದ್ದ. ಮತ್ತು ಅವರ ಆಕ್ರಮಣಕ್ಕಾಗಿ ಕಾಯುತ್ತಿದ್ದ ನಂತರ ವೀರಬಲ್ಲಾಳನು ನೋಡು ಚಂದ್ರಚೂಡ ನೀನಾಗಿಯೇ ಶರಣಾದರೆ ಸರಿ ಇಲ್ಲವಾದರೆ ಆಕ್ರಮಣ ನಡೆಸಬೇಕಾಗುತ್ತದೆ ಮತ್ತು ಗೆಲುವು ನಮ್ಮದಾಗುತ್ತದೆ ಎನ್ನುವಾಗ ಪಕ್ಕದ ಮರದ ಕೊಂಬೆಯಲ್ಲಿದ್ದ ಹಲ್ಲಿ ಲೊಚ್ ಲೊಚ್ ಎಂದು ಲೊಚಗುಟ್ಟಿತು, ಇದನ್ನು ಗಮನಿಸಿದ ರಾಜಪುರೋಹಿತ ಮಹಾರಾಜರೇ ಅವರ ಉತ್ತರಕ್ಕಾಗಿ ಕಾಯುವುದು ಬೇಡ ಹಲ್ಲಿ ಲೊಚಗುಟ್ಟಿದೆ, ಶುಭ ಸಂಕೇತ, ಗೆಲುವು ನಮ್ಮದೇ ಆಕ್ರಮಣ ನಡೆಸಿ ಎಂದಾಗ ಪಲ್ಲಿಯು ಮನದಲ್ಲಿ ಅಯ್ಯೋ ಮೂರ್ಖ ರಾಜಪುರೋಹಿತರೇ ನಾನು ಲೊಚಗುಟ್ಟಿದ್ದು ನನಗೆ ದಣಿವಾಗಿ ನೀರು ಬೇಕಿತ್ತು ಅಷ್ಟೇ ನಿಮಗೆ ಶುಭ ಸಂಕೇತ ನೀಡಲು ಅಲ್ಲ ಏಕೆ ಹೀಗೆ ಯೋಚಿಸಿದಿರಿ ಎನ್ನುವಾಗಲೇ ರಾಜ ವೀರಭಲ್ಲಾಳ ಹೌದ ರಾಜಪುರೋಹಿತರೆ ಹಾಗಾದರೆ ಆಕ್ರಮಣ ನಡೆಸಿ ವೀರ ಸೈನಿಕರೇ ಎನ್ನುವಾಗಲೇ ಸಮಯಕ್ಕಾಗಿ ಕಾಯುತ್ತಿದ್ದ ಚಂದ್ರಚೂಡನ ಸೈನ್ಯ ಎದುರಾಳಿ ಸೈನ್ಯ ದಾಳಿ ಮಾಡುವ ಮುನ್ನವೇ ವಿವಿಧ ತಂತ್ರಗಳಿಂದ ವೀರಬಲ್ಲಾಳನ ಸೈನ್ಯ ದಿಕ್ಕಾಪಾಲು ಆಗುವಂತೆ ಆಕ್ರಮಣ ನಡೆಸಿತು. ಇದರಿಂದ ವಿಚಲಿತರಾದ ವೀರಬಲ್ಲಾಳಣ ಸೈನ್ಯ ದಿಕ್ಕಾಪಾಲಾಗಿ ಓಡಿ ಪಲಾಯನಗೈದು ತನ್ನ ರಾಜ್ಯ ಸೇರಿಕೊಂಡಿತು.

    ಇದರಿಂದ ಸಾಕಷ್ಟು ಅವಮಾನಿತನಾದ ವೀರಬಲ್ಲಾಳ ಹಲವು ವರುಷ ಯಾವುದೇ ಯುದ್ಧ ಮಾಡದೇ ಸುಮ್ಮನಾದ. ನಂತರ ಹೇಗಾದರೂ ಮಾಡಿ ವಿಕ್ರಮಪುರಿ ವಷಪಡಿಸಿಕೊಳ್ಳಲೇ ಬೇಕು ಎಂದು ಸೈನಿಕರಿಗೆ ಸಾಕಷ್ಟು ವಿವಿಧ ಯುದ್ಧ ತರಭೇತಿ ನೀಡಿ, ದೈವ ನೆರವಿಗಾಗಿ ಹಲವು ಹೋಮ ಹವನಗಳನ್ನು ಮಾಡಿದ ಇದರಿಂದ ಸಂತುಷ್ಟನಾದ ದೇವನು ಒಂದು ದಿನ ವೀರಬಲ್ಲಾಳನ ಕನಸಲ್ಲಿ ಬಂದು, ನೋಡು ಈ ಬಾರಿ ನೀನು ಆಕ್ರಮಣ ನಡೆಸು ವಿಜಯ ನಿನ್ನದೇ ಆಗುತ್ತದೆ, ಆದರೆ ನೀನು ಹಲ್ಲಿ ಅಥವಾ ಇತರ ಯಾವುದೇ ಶಕುನದಿಂದ ವಿಚಲಿತನಾಗಬಾರದು ಎಂದು ಹೇಳಿ ಅದೃಶ್ಯನಾದ. ನಂತರ ದೇವನು ಈಗ ವೀರಭಲ್ಲಾಳನ ಅದೃಷ್ಟ ಪರೀಕ್ಷೆ ಮಾಡಲು ನಿರ್ಧರಿಸಿ ಆ ಹಲ್ಲಿಗೂ ಕನಸಲ್ಲಿ ಬಂದು ನೋಡು ವೀರಬಲ್ಲಾಳನು ಮತ್ತೆ ಯುದ್ಧಕ್ಕೆ ಬರುವವನಿದ್ದಾನೆ ಅವನಿಗೆ ವಿಜಯಿಯಾಗುವ ಅಭಯ ನೀಡಿದ್ದೇನೆ. ನೀನು ಅವನಿಗೆ ಶುಭಶಕುನ ನುಡಿಯಬೇಕು ಎಂದು ಹೇಳಿ ಅಂತರ್ಧಾನನಾದನು. ತದನಂತರ ಎಚ್ಚೆತ್ತ ರಾಜ ಇದು ಕನಸು ನಂಬುವುದು ಹೇಗೆ, ನಾನು ಯಾವಾಗಲೂ ಯುದ್ಧ ಗೆಲುವಿನ ಬಗ್ಗೆ ಯೋಚಿಸುತ್ತಿರುವದರಿಂದ ಹೀಗೆ ಕನಸು ಬಿದ್ದಿರಬಹುದು ಎಂದು ಸಮಾದಾನಗೊಂಡು ನಂತರ ಅದು ಏನೇ ಆಗಲಿ ಯುದ್ಧ ಮಾಡಿಯೇ ಬಿಡುವ ಎಂದು ತೀರ್ಮಾನಿಸಿ ಮತ್ತೆ ಸೈನ್ಯ ತೆಗೆದುಕೊಂಡು ವಿಕ್ರಮ ಪುರದ ಗಡಿಗೆ ನಿಲ್ಲಿಸಿಯೇ ಬಿಟ್ಟ. ನಂತರ ವೀರಬಲ್ಲಾಳನು ಜೋರಾಗಿ ಹೇ ಚಂದ್ರಚೂಡ ಈಗ ನಿನ್ನ ಯಾವುದೇ ಯುದ್ಧ ತಂತ್ರ ನನ್ನ ಮುಂದೆ ನಡೆಯದು, ನೋಡು ಈಗ ನಿನ್ನ ಸೈನ್ಯವನ್ನು ಹೇಗೆ ಧೂಳೀಪಟ ಮಾಡುತ್ತೇನೆ ಎನ್ನುವಾಗಲೇ ಅದೇ ಮರದಲ್ಲಿದ್ದ ಅದೇ ಹಲ್ಲಿಯು ತನ್ನ ಮನದಲ್ಲಿ, ಈ ಬಾರಿ ರಾಜನಿಗೆ ಕನಸಲ್ಲಿ ದೇವನ ಅನುಗ್ರಹವಾಗಿದೆ ಹಾಗಾಗಿ ದೇವನ ಆಜ್ಞೆಯಂತೆ ಅವನಿಗೆ ಶುಭಶಕುನ ನೀಡುವ ಎಂದು ಜೋರಾಗಿ ಲೊಚ್ ಲೊಚ್ ಎಂದು ಲೊಚಗುಟ್ಟಿತು ಇದನ್ನು ಗಮನಿಸಿದ ರಾಜ ಪುರೋಹಿತ ಮಹಾರಾಜರೇ ಹಲ್ಲಿಯು ಮತ್ತೆ ಅಪಶಕುನ ನೀಡುತ್ತಿದೆ ಕಳೆದ ಬಾರಿಯಂತೆ ಈ ಬಾರಿಯೂ ನಮಗೆ ಅಪಜಯವಾಗುತ್ತದೆ, ಇದನ್ನು ನಾವು ಶುಭಶಕುನವೆಂದು ಪರಿಗಣಿಸುವುದು ಬೇಡ ತಕ್ಷಣ ಹಿಂದಿರುಗುವ ಎಂದಾಗ ಪಲ್ಲಿಯು ತನ್ನ ಮನದಲ್ಲಿ ಅಯ್ಯೋ ಮೂರ್ಖ ಈ ಬಾರಿ ನಿಮಗೆ ಶುಭಶಕುನ ನೀಡುತ್ತಿದ್ದೇನೆ, ಮಹಾರಾಜರೇ, ನಿಮಗೆ ಕನಸಲ್ಲಿ ದೇವರ ಅನುಗ್ರಹವಾಗಿದೆ, ನಿಮಗೆ ಜಯ ಎಂದಿದ್ದಾರೆ ಆಕ್ರಮಣ ನಡೆಸಿ ಎಂದುಕೊಳ್ಳುತ್ತಿರುವಾಗಲೇ ರಾಜ ವೀರಭಲ್ಲಾಳ ಹೌದು ರಾಜಪುರೋಹಿತರೆ ನಾವು ಆಕ್ರಮಣ ನಡೆಸುವುದು ಬೇಡ ಪಲ್ಲಿ ಶಕುನದಂತೆ ನಾವು ಹಿಂತಿರುಗುವುದು ಕ್ಷೇಮ ಎಂದು ಸೈನಿಕರಿಗೆ ಹಿಂತಿರುಗಲು ಆದೇಶಿಸಿದ ಅದರಂತೆ ಎಲ್ಲರೂ ದಿಕ್ಕಾಪಾಲಾಗಿ ಹಿಂತಿರುಗುತ್ತಿರುವಾಗ ವಿಕ್ರಮಪುರಿ ಸೈನ್ಯ ಬೆಂಬೆಡದೆ ಬಂದು ಸಿಂಹಳಪುರವನ್ನು ಆಕ್ರಮಿಸಿಕೊಂಡಿತು.

    ನೀತಿ: ಶಕುನ ಅಥವಾ ಅಪಶಕುಕನಗಳು ಹೀಗೆಯೇ ಆಗುತ್ತವೆ ಎಂದು ಯಾರಿಂದಲೂ ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ನಮ್ಮ ಕನಸನ್ನು ಭ್ರಮೆ ಎಂದುಕೊಳ್ಳುತ್ತೇವೆ, ಯಾರಿಗೆ ಗೊತ್ತು ಭ್ರಮೆ ಇದ್ದರೂ ಇರಬಹುದು, ಇಲ್ಲದೆಯೂ ಇರಬಹುದು. ಪ್ರಯತ್ನ ಪಟ್ಟರೆ ಮುಂದೆ ಬರುವ ಅದೃಷ್ಟವನ್ನು ಪಡೆಯಬಹುದು. ನಾವು ಕೆಲವೊಮ್ಮೆ ಶುಭಶಕುನವನ್ನು ಅಪಶಕುನ ಎಂದುಕೊಳ್ಳುತ್ತೇವೆ, ಅಪಶಕುನವನ್ನು ಶುಭಶಕುನ ಎಂದೂ ತಿಳಿಯುತ್ತೇವೆ, ಆದರೆ ಕೊನೆಗೆ ನಡೆಯುವುದೆಲ್ಲಾ ನಮ್ಮ ಹಣೆಬರಹದಂತೆ.

    ರಚನೆ: ವೇಣುಗೋಪಾಲ್


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ತ್ಯಾಜ್ಯವಲ್ಲ ಕರಟ, ರೈತರಿಗೆ ಬಂಪರ್ ಹಣ! ಕೊಬ್ಬರಿ ಚಿಪ್ಪಿನ ಬೆಲೆ ಗಗನಕ್ಕೇರಿಕೆ, ಬೆಳೆಗಾರರ ಮೊಗದಲ್ಲಿ ಮಂದಹಾಸ

    July 19, 2026

    ಸುಧಾಮೂರ್ತಿ ಹಾಗೂ ರಮೇಶ್ ಅರವಿಂದ್ ಅವರಿಂದ ಕೆ.ಎನ್ ಗಣೇಶಯ್ಯ ಅವರ “ಪುಣ್ಯಕೋಟಿ ಶತಕರುಣಿ” ದೃಶ್ಯಕಾವ್ಯದ ಲೋಕಾರ್ಪಣೆ

    July 17, 2026

    ಮನೆಗೆ ಮರು ಪೇಂಟಿಂಗ್ ಮಾಡಿಸುವಾಗ ಈ ತಪ್ಪುಗಳನ್ನು ಮರೆತೂ ಮಾಡಬೇಡಿ!

    July 13, 2026

    Comments are closed.

    Our Picks

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಸರಗೂರು: ಮೂರನೇ ಆಷಾಢ ಶುಕ್ರವಾರ -– ವಾಹನ ಚಾಲಕರ ಸಂಘದಿಂದ ವಿಶೇಷ ಪೂಜೆ ಹಾಗೂ ಖಾಕಿ ಸಮವಸ್ತ್ರ ವಿತರಣೆ

    August 1, 2026

    ಸರಗೂರು:  ಪಟ್ಟಣದಲ್ಲಿ ಮೂರನೇ ಆಷಾಢ ಶುಕ್ರವಾರದ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮದ ಅಂಗವಾಗಿ ವಾಹನ ಚಾಲಕರ ಸಂಘದ ವತಿಯಿಂದ ತಾಯಿ…

    ಔರಾದ್: ಜೈ ಕಿಸಾನ್ ಶಾಲೆ ಶಿಕ್ಷಕ, ಬಿಎಲ್ ಒ ಮಲ್ಲಿಕಾರ್ಜುನ ಪಿಟ್ರೆ ನಿಧನ

    August 1, 2026

    ಕಾವೇರಿ ನೀರು ಹಂಚಿಕೆ ವಿವಾದ: ತಮಿಳುನಾಡು ಸಿಎಂ ಕರ್ನಾಟಕ ಭೇಟಿ ಮುಂದೂಡಿಕೆ

    July 31, 2026

    ಬೀದರ್: ಬಸವಕಲ್ಯಾಣದಲ್ಲಿ ಕೆರೆಯಂತಾದ ರಸ್ತೆಗಳು; ಗುಂಡಿಗಳಲ್ಲಿ ಈಜಾಡಿದ ಮಕ್ಕಳು!

    July 31, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.