ದಿನಾಲೂ ಪಪ್ಪಾಯಿ ಜ್ಯೂಸ್ ಕುಡಿದರೆ ಈ ಎಲ್ಲಾ ಸಮಸ್ಯೆಗಳು ದೂರವಾಗುತ್ತೆ..!
ಪ್ರತಿದಿನ 30 ರಿಂದ 50 ಮಿಲಿಯಷ್ಟು ಈ ಪಪ್ಪಾಯಿ ರಸವನ್ನು ಸೇವಿಸಿದರೆ ಒಂದಿಷ್ಟು ಲಾಭಗಳಿರುತ್ತವೆ ಎನ್ನುತ್ತಾರೆ ತಜ್ಞರು. ಪಪ್ಪಾಯಿ ಹಣ್ಣಿನಲ್ಲಿ ನಾರಿನಂಶ ಅಧಿಕವಾಗಿದೆ. ಇದನ್ನು ಸೇವಿಸುವುದರಿಂದ ಹಸಿವನ್ನು ನಿಯಂತ್ರಿಸುತ್ತದೆ. ಇದರಿಂದ ತೂಕ ಕಡಿಮೆಯಾಗುತ್ತದೆ. ಇದು ಚಯಾಪಚಯವನ್ನು ಸಹ ಸುಧಾರಿಸುತ್ತದೆ. ಇದು ವಿಶೇಷವಾಗಿ ಮಕ್ಕಳಲ್ಲಿ ಹೊಟ್ಟೆಯ ಹುಳುಗಳನ್ನು ಕೊಲ್ಲುತ್ತದೆ. ಪಪ್ಪಾಯಿಯು ಗರ್ಭಾಶಯದಲ್ಲಿರುವ ತ್ಯಾಜ್ಯ ಮತ್ತು ವಿಷವನ್ನು ಹೊರಹಾಕುವ ಶಕ್ತಿ ಹೊಂದಿದೆ. ಇದು ಮುಟ್ಟಿನ ಸಮಯದಲ್ಲಿ ತ್ಯಾಜ್ಯವನ್ನು ಹೊರಹಾಕುತ್ತದೆ.
ಪೋಷಕಾಂಶಗಳ ಆಗರ ಹುರಿದ ಕಡಲೆಯನ್ನು ತಿಂದರೆ ಇಷ್ಟೆಲ್ಲಾ ಉಪಯೋಗ..!
ಹುರಿದ ಕಡಲೆ ಪೋಷಕಾಂಶಗಳ ಆಗರವೂ ಹೌದು. ಇದರಲ್ಲಿ ವಿಟಮಿನ್ ಎ, ಸಿ, ಬಿ6, ಫೋಲೇಟ್, ನಿಯಾಸಿನ್, ಥಯಾಮಿನ್, ರೈಬೋಫ್ಲಾವಿನ್, ಮ್ಯಾಂಗನೀಸ್, ಫಾಸ್ಪರಸ್, ಕಬ್ಬಿಣ, ತಾಮ್ರದಂತಹ ಖನಿಜಗಳಿವೆ. ಹುರಿದ ಕಡಲೆಯು ಫೈಬರ್ ಮತ್ತು ಪ್ರೋಟೀನ್ ನಲ್ಲಿ ಸಮೃದ್ಧವಾಗಿದೆ. ಈ ಕುರುಕಲು ಕಡಲೆಗಳಲ್ಲಿ, 100 ಗ್ರಾಂನಲ್ಲಿ ಸುಮಾರು 18 ಗ್ರಾಂ ಫೈಬರ್ ಮತ್ತು 20 ಗ್ರಾಂ ಪ್ರೋಟೀನ್ ಇರುತ್ತದೆ. ಹುರಿದ ಕಡಲೆಯಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದು ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಏಲಕ್ಕಿ ಬಾಳೆಹಣ್ಣು ತಿನ್ನುವುದರಿಂದ ಈ ಸಮಸ್ಯೆಗಳು ದೂರ..!
ಎಲ್ಲಾ ಹಣ್ಣುಗಳಂತೆ, ಬಾಳೆಹಣ್ಣಿನಲ್ಲೂ ಹಲವು ವಿಧಗಳಿವೆ. ಯಾಲಕಿ ಬಾಳೆಹಣ್ಣು ಸಾಮಾನ್ಯ ಬಾಳೆಹಣ್ಣುಗಳಿಗೆ ಹೋಲಿಸಿದರೆ ಚಿಕ್ಕದಾಗಿದ್ದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಹಣ್ಣಿನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದೆ. ಇದು ರಕ್ತದೊತ್ತಡವನ್ನು ಸರಿಯಾಗಿ ಇಡುತ್ತದೆ. ಈ ಹಣ್ಣುಗಳಲ್ಲಿ ವಿಟಮಿನ್ ಎ ಹೆಚ್ಚಿರುವುದರಿಂದ ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಯಾಲಕ್ಕಿ ಬಾಳೆಹಣ್ಣಿನಲ್ಲಿರುವ ಹೆಚ್ಚಿನ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ಕಡಿಮೆ ಮಾಡಿ ಹೃದಯದ ಸಮಸ್ಯೆ ನಿಯಂತ್ರಿಸುತ್ತದೆ. ಇದರಲ್ಲಿ ಹೆಚ್ಚಿನ ನಾರಿನಂಶವಿರುವುದರಿಂದ ಅಜೀರ್ಣವನ್ನು ತಡೆಯುತ್ತದೆ.