ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿಂದರೆ ಏನಾಗುತ್ತೆ.?:
ಹೊಟ್ಟೆಯ ಆರೋಗ್ಯವನ್ನು ಕಾಪಾಡುವಲ್ಲಿ ಬೆಳ್ಳುಳ್ಳಿ ಪ್ರಮುಖ ಪಾತ್ರ ವಹಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಯಕೃತ್ತು ಮತ್ತು ಮೂತ್ರಕೋಶದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ಅತಿಸಾರವನ್ನು ನಿವಾರಿಸುವುದು ಮಾತ್ರವಲ್ಲದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜೊತೆಗೆ ಹಸಿವನ್ನು ಹೆಚ್ಚಿಸುತ್ತದೆ. ಬೆಳ್ಳುಳ್ಳಿ ಒತ್ತಡವನ್ನು ನಿಯಂತ್ರಿಸಲು ಉಪಯುಕ್ತ ಆಹಾರಗಳಲ್ಲಿ ಒಂದಾಗಿದೆ.
ತರಕಾರಿಗಳು, ಹಣ್ಣುಗಳ ಸಿಪ್ಪೆಯನ್ನು ಹೀಗೆ ಬಳಸಿ:
ನಾವು ಅಡುಗೆ ಮಾಡುವಾಗ ಹೆಚ್ಚಿನ ತರಕಾರಿ & ಹಣ್ಣಿನ ಸಿಪ್ಪೆಗಳನ್ನು ಎಸೆಯುತ್ತೇವೆ. ಆದರೆ ಅವುಗಳನ್ನು ಎಸೆಯುವ ಬದಲು, ಕೆಲವು ರೀತಿಯಲ್ಲಿ ಬಳಸಬಹುದು. ಬೀಗ್ರೂಟ್ ಮತ್ತು ಇತರ ತರಕಾರಿಗಳನ್ನು ಸಿಪ್ಪೆ ಮಾಡುತ್ತೇವೆ. ನಾವು ಅವುಗಳನ್ನು ಉತ್ತಮವಾದ ಸೂಪ್ ಮಾಡಬಹುದು. ಅಡುಗೆ ಮನೆಯ ತ್ಯಾಜ್ಯವನ್ನು ಮಣ್ಣಿನಲ್ಲಿ ಹಾಕಿ ಗೊಬ್ಬರವನ್ನಾಗಿ ಮಾಡಿ ಗೊಬ್ಬರವಾಗಿ ಬಳಸಬಹುದು. ನಿಂಬೆಹಣ್ಣು & ಕಿತ್ತಳೆ ಸಿಪ್ಪೆಗಳಿಂದ ಪ್ಲೇಟ್ ಗಳನ್ನು ಸ್ವಚ್ಛಗೊಳಿಸಲು ಬಳಸಬಹುದು. ಇದರಲ್ಲಿನ ಆಮ್ಲಯ ಗುಣಗಳು ಜಿಡ್ಡನ್ನು ತೆಗೆದುಹಾಕುತ್ತದೆ.
ಶುಂಠಿಯ ಆರೋಗ್ಯ ಪ್ರಯೋಜನಗಳು ನಿಮಗೆ ತಿಳಿದಿದೆಯೇ?:
ಶುಂಠಿಯಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳಿವೆ ಎಂದು ತಜ್ಞರು ಹೇಳುತ್ತಾರೆ. ಶುಂಠಿಯನ್ನು ನಮ್ಮ ಆಹಾರದ ಭಾಗವನ್ನಾಗಿ ಮಾಡಿಕೊಂಡರೆ ಹೊಟ್ಟೆಯುಬ್ಬರವನ್ನು ಕಡಿಮೆ ಮಾಡಬಹುದು. ಶುಂಠಿಯು ಕರುಳಿನಲ್ಲಿರುವ ರೋಗಕಾರಕ ಬ್ಯಾಕ್ಟಿರಿಯಾಗಳನ್ನು ನಾಶಪಡಿಸುವುದು ಮಾತ್ರವಲ್ಲದೆ ಯಕೃತ್ತನ್ನು ಶುದ್ಧಗೊಳಿಸುತ್ತದೆ. ತೂಕ ನಷ್ಟಕ್ಕೂ ಇದು ಉಪಯುಕ್ತವಾಗಿದೆ. ಗಂಟಲು ನೋವನ್ನು ನಿವಾರಿಸುತ್ತದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗಳು ಮಾನಸಿಕ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ.