ವಾರದಲ್ಲಿ 2 ಬಾರಿ ಬೀಟ್ ರೂಟ್ ಸೇವಿಸಿ:
ಬೀಟ್ ರೂಟ್ ನಲ್ಲಿ ವಿಟಮಿನ್ ಎ, ಸಿ ಕ್ಯಾಲ್ ಶಿಯಮ್, ಪೊಟ್ಯಾಷಿಯಂ ಅಂಶವು ಅಧಿಕ ಪ್ರಮಾಣದಲ್ಲಿ ಇರುತ್ತದೆ. ಬೀಟ್ ರೂಟ್ ನಲ್ಲಿರುವ ಉತ್ತಮ ಪೋಷಕಾಂಶಗಳು ದೇಹವನ್ನು ಸದಾ ಸದೃಢವಾಗಿರಿಸುತ್ತದೆ. ಹಾಗಾಗಿ ವಾರದಲ್ಲಿ ಎರಡು ಬಾರಿಯಾದರೂ ಬೀಟ್ ರೂಟ್ ಸೇವಿಸಬೇಕು ಅದು ಸಲಾಡ್ ರೂಪದಲ್ಲೇ ಆಗಿರಲಿ, ಅಥವಾ ಜ್ಯೂಸ್ ಇನ್ನಾವುದೇ ರೂಪದಲ್ಲಿ ಆಗಿರಲಿ. ಯಾರು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೋ ಅಂತವರು ಬೀಟ್ ರೂಟ್ ಅನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಈ ಸಮಸ್ಯೆ ಶಾಶ್ವತವಾಗಿ ನಿವಾರಣೆಯಾಗುತ್ತದೆ.
ಜಾಯಿಕಾಯಿಯಿಂದ ನಿದ್ರಾಹೀನತೆಯ ಸಮಸ್ಯೆಗೆ ಪರಿಹಾರ..!:
ಜಾಯಿಕಾಯಿಯಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದು ತಜ್ಞರು ಹೇಳುತ್ತಾರೆ. ಜಾಯಿಕಾಯಿಯಲ್ಲಿ ಫೈಬರ್, ಥಯಾಮಿನ್, ವಿಟಮಿನ್ ಬಿ6, ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಂಗನೀಸ್ ಮತ್ತು ಪೊಟ್ಯಾಸಿಯಮ್ ಮುಂತಾದ ಪೋಷಕಾಂಶಗಳು ಹೇರಳವಾಗಿವೆ. ಇದು ಮಿರಿಸ್ಟಿಸಿನ್ & ಮೆಸ್ಲಿಗ್ನಾನ್ ಎಂಬ ಶಕ್ತಿಯುತ ವಸ್ತುಗಳನ್ನು ಒಳಗೊಂಡಿದೆ. ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ಪ್ರತಿದಿನ ರಾತ್ರಿ ಬಿಸಿ ಹಾಲಿನಲ್ಲಿ ಒಂದು ಚಿಟಿಕೆ ಜಾಯಿಕಾಯಿ ಪುಡಿ ಕುಡಿದರೆ ನೆಮ್ಮದಿಯ ನಿದ್ದೆ ಬರುತ್ತದೆ.
ಈ ಆಹಾರದ ಜೊತೆ ಹಾಲು ಕುಡಿಯಬೇಡಿ!:
ಮಸಾಲೆಭರಿತ ಆಹಾರ ಪದಾರ್ಥಗಳು ಹೊಟ್ಟೆಯಲ್ಲಿ ಆಮ್ಲವನ್ನು ಉತ್ಪಾದಿಸುತ್ತವೆ, ಇದು ಹಾಲಿನೊಂದಿಗೆ ಸೇರಿಕೊಂಡಾಗ ಕೆಲವರಿಗೆ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಬಿಸಿ ಆಹಾರ, ಮೆಣಸು ಮತ್ತು ಭಾರೀ ಮಸಾಲೆಯುಕ್ತ ಆಹಾರಗಳು ಹಾಲಿನ ಜೊತೆಗೆ ಸೇವಿಸಿದಾಗ ಆಸಿಡ್ ರಿಫ್ಲಕ್ಸ್ ಅಥವಾ ಅಜೀರ್ಣದ ಅಪಾಯವನ್ನು ಹೆಚ್ಚಿಸಬಹುದು. ಹೀಗಾಗಿ ಹಾಲು ದೇಹಕ್ಕೆ ಒಳ್ಳೆಯದಾದರೂ ಯಾವ ಸಮಯಕ್ಕೆ ತೆಗೆದುಕೊಳ್ಳುತ್ತೇವೆ ಎನ್ನುವುದು ಗಮನಿಸಬೇಕಾದ ಅಂಶವಾಗಿರುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296