ತುಮಕೂರು : ಟೌನ್ ಹಾಲ್ ಸರ್ಕಲ್ ನಲ್ಲಿ ಎಲ್ಲಾ ಸಮುದಾಯದ ಮುಖಂಡರು ಮತ್ತು ಪ್ರಗತಿಪರ ಚಿಂತಕರು ಸೇರಿ ಬೇವು ಬೆಲ್ಲ ಹಾಗೂ ಒಬ್ಬಟ್ಟನ್ನು ತಿಂದು ಪರಸ್ಪರ ಸಾಮರಸ್ಯವನ್ನು ಸಾರಿದರು.
ಈ ನಡುವೆ ರಾಜ್ಯದಲ್ಲಿ ಜಾತ್ರೆ ಮುಂಗಟ್ಟುಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಕೆಲವು ಕಿಡಿಗೇಡಿಗಳು ನಿರ್ಬಂಧ ಹೇರಿರುವುದು ಮತ್ತು ಹಲಾಲ್ ಕಟ್, ಜಟ್ಕಾ ಕಟ್ ಹೆಸರಿನಲ್ಲಿ ದ್ವೇಷ ವನ್ನು ಹರಡಿಸುತ್ತ ರಾಜ್ಯದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿರುವುದಕ್ಕೆ ಖಂಡನೆ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸ್ಲಂ ಜನಾಂದೋಲನದ ರಾಜ್ಯ ಅಧ್ಯಕ್ಷರಾದ ನರಸಿಂಹಮೂರ್ತಿ, ಜನರನ್ನು ಭಾವೋದ್ವೇಗಕ್ಕೆ ಒಳ ಪಡಿಸುವ ಕೆಲಸವನ್ನು ಸರ್ಕಾರಿ ಪ್ರಾಯೋಜಕತ್ವದಲ್ಲಿ ಮಾಡುತ್ತಿದ್ದಾರೆ. ಸರ್ಕಾರ ಸಂಘಪರಿವಾರಕ್ಕೆ ಬೆಂಬಲವಾಗಿ ನಿಂತಿದೆ ಎಂದರು.
ಡಾ. ಅರುಂಧತಿ ಮಾತನಾಡಿ, ನಮ್ಮ ಸುತ್ತಮುತ್ತ ನಡೆಯುತ್ತಿರುವ ಸಂಗತಿಗಳನ್ನು ನೋಡಿ ನಾಚಿಕೆಯಾಗುತ್ತಿದೆ. ನಮ್ಮ ದೇಶದ ಧರ್ಮ ಆಚರಣೆಗಳನ್ನು ನಮ್ಮ ಮನೆಗಳಲ್ಲಿ ಸೀಮಿತ ಮಾಡಿಕೊಳ್ಳಬೇಕು. ಧರ್ಮಗಳು ಮನುಷ್ಯನಿಗೆ ಬೇಕು ಆಚರಣೆಗಳು ಬೇಕು ನಮ್ಮ ಧರ್ಮದ ಆಚರಣೆಗಳು ನಮ್ಮ ಮನೆಯ ಒಳಗೆ ಇದ್ದರೆ ತುಂಬಾ ಒಳ್ಳೆಯದು ನಮ್ಮ ನಮ್ಮಲ್ಲಿ ನಮ್ಮ ಆಚರಣೆಗಳನ್ನು ಉಳಿಸಿಕೊಳ್ಳಬಹುದು ಧರ್ಮ ಮನೆಯವರ ಬಂದಾಗ ಅದು ಎಲ್ಲರಿಗೂ ಸೇರಿದ್ದು ನೀನಷ್ಟೇ ಇರಬೇಕು ನಿನ್ನಷ್ಟೇ ವ್ಯಾಪಾರ ಮಾಡಬೇಕು ಎಂದು ಹೇಳುವ ಹಕ್ಕು ಸಂವಿಧಾನದ ಅಡಿಯಲ್ಲಿ ಯಾರಿಗೂ ಇಲ್ಲ ಎಂದರು.
ತಾಜುದ್ದೀನ್ ಶರೀಫ್ ಜಿಲ್ಲಾಧ್ಯಕ್ಷರು ವೆಲ್ಪರ್ ಪಾರ್ಟಿಆಫ್ ಇಂಡಿಯಾ ಇವರು ವಂದನಾರ್ಪಣೆ ಮಾಡಿದರು ಈ ಸಂದರ್ಭದಲ್ಲಿ ಮತಿ ರಾಜು ರೈತ ಮುಖಂಡರು, ದೊರೆರಾಜು ದಲಿತ ಮುಖಂಡರು, ಡಾಕ್ಟರ್ ಅರುಂಧತಿ, ಅಲ್ತಾಫ್ ಅಹ್ಮದ್, ಸಿಐಟಿಯುನ ಸುಬ್ಬಣ್ಣ, ಸೈಯದ್ ಮುಜೀಬ್, ಕಟ್ಟಡ ಕಾರ್ಮಿಕ ರಾಜ್ಯ ಕಾರ್ಯದರ್ಶಿ ಉಮೇಶ್ ಮತ್ತು ಸ್ಲಂ ಜನಾಂದೋಲನ ರಾಜ್ಯ ಅಧ್ಯಕ್ಷರು ನರಸಿಂಹಮೂರ್ತಿ, ಜಮಾಯತ್ ಎ ಇಸ್ಲಾಮಿಕ್ ನ ಅಧ್ಯಕ್ಷರು ಆದ ಅಸದುಲ್ಲಾ ಖಾನ್, ಡಿಎಸ್ಎಸ್ ನ ರಾಮಯ್ಯ ಪಿ ಎನ್, ವಡ್ಡಗೆರೆ ನಾಗರಾಜಯ್ಯ, ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು
ವರದಿ: ಎ.ಎನ್. ಪೀರ್ , ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5