ತುಮಕೂರು: ಸ್ಕೈ ಆರ್ಟ್ ಮೀಡಿಯಾ ಅರ್ಪಿಸುತ್ತಿರುವ ರಾಜಶೇಖರ್ ರಚಿಸಿ ನಿರ್ದೇಶಿಸುತ್ತಿರುವ ‘ಕರ್ನಾಟಕ ಪಬ್ಲಿಕ್ ಸ್ಕೂಲ್’ ಮುಹೂರ್ತ ಸಮಾರಂಭ ತುಮಕೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ತುಮಕೂರು ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದ್ದು ಇದರ ಮುಹೂರ್ತ ಸಮಾರಂಭ ತುಮಕೂರಿನ ಕೋಟೆ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸುವುದರೊಂದಿಗೆ ಆರಂಭವಾಯಿತು.
ಕಲಾಶ್ರೀ ಲಕ್ಷ್ಮಣದಾಸ್, ಉಗಮ ಶ್ರೀನಿವಾಸ್, ಟೈಗರ್ ನಾಗ್, ಬೇಬಿ ಜಾನ್ಹವಿ, ಬೇಬಿ ಸಂಧ್ಯಾ ಮಾಸ್ಟರ್ ಚರಣ್, ಮಾಸ್ಟರ್ ಗೌತಮ್, ಮಾಸ್ಟರ್ ಪೋಷಿತ್, ರಾಜಣ್ಣ, ವೈಷ್ಣವಿ ರಾಜ್, ಇಂದ್ರಕುಮಾರ್ ಮತ್ತಿತರರು ಈ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.
ಭಾಗ್ಯ ಶೇಖರ್ ಅವರು ನಿರ್ಮಿಸುತ್ತಿರುವ ಇವರ ಜೊತೆಗೆ ಸಹ ನಿರ್ಮಾಪಕರಾಗಿರುವ ಯಲ್ಲಯ್ಯ ಮತ್ತು ಡಿಸಿ ಕುಮಾರ್ ಅವರು ಹಾಜರಿದ್ದರು. ಈ ಸಿನಿಮಾಕ್ಕೆ ಸಂಭಾಷಣೆ ಮತ್ತು ಸಹ ನಿರ್ದೇಶನದ ಜವಾಬ್ದಾರಿಯನ್ನು ಮಂಜುನಾಥ್ ಕೋಟೇಕೆರೆ ಹೊತ್ತಿದ್ದಾರೆ.
ಈ ಸಿನಿಮಾದ ಸ್ಕ್ರಿಪ್ಟ್ ಅನ್ನು ಉಗಮ ಶ್ರೀನಿವಾಸ್ ನೀಡಿದರೆ ಕ್ಯಾಮರಾವನ್ನು ಲಕ್ಷ್ಮಣದಾಸ್ ಆನ್ ಮಾಡಿದರು. ಇದೊಂದು ಸಮಾಜಕ್ಕೆ ಅತ್ಯುತ್ತಮ ಸಂದೇಶ ನೀಡುವ ಸಿನಿಮಾ ಎಂದು ನಿರ್ದೇಶಕ ರಾಜ ಶೇಖರ್ ತಿಳಿಸಿದ್ದಾರೆ. ಮುಹೂರ್ತ ಸಮಾರಂಭಕ್ಕೆ ತುಮಕೂರಿನ ಹಲವಾರು ಗಣ್ಯರು ಆಗಮಿಸಿ ಚಿತ್ರ ತಂಡಕ್ಕೆ ಶುಭ ಕೋರಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


