ತುಮಕೂರು: ತುಮಕೂರು ಜಿಲ್ಲೆಯಲ್ಲಿ ಮರೆಯಾಗದ ಜಾತಿಪದ್ದತಿ ಇದ್ದು, ದಲಿತರು ಎಂಬ ಒಂದು ಕ್ಷುಲ್ಲಕ ಕಾರಣಕ್ಕೆ ಮಲ್ಲಿಗೆರೆ ದಲಿತ ಕಾಲೋನಿ ಜನತೆಗೆ ಅಧಿಕಾರಿಗಳು ನೀರು ಬಿಟ್ಟುಕೊಡುತ್ತಿಲ್ಲ.
ದಲಿತರಾಗಿ ಹುಟ್ಟಿದ್ದೇ ತಪ್ಪಾ..? ಎಂದು ಕಾಲೋನಿಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಲ್ಲಿಗೆರೆ ದಲಿತ ಕಾಲೋನಿ ಜನತೆ ನೀರಿಲ್ಲದೇ ಪರದಾಡ್ತಿದ್ದಾರೆ. ಇದು ಚಿಕ್ಕನಾಯಕನಹಳ್ಳಿ ಮಲ್ಲಿಗೆರೆ ಗ್ರಾಮ ಪಂಚಾಯತಿಯ ಕರ್ಮಕಾಂಡವಾಗಿದ್ದು, ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಮಲ್ಲಿಗೆರೆಯಲ್ಲಿ ಈ ಘಟನೆ ನಡೆದಿದೆ.
ಅಧಿಕಾರಿಗಳು ದಲಿತ ಕಾಲೋನಿಗೆ ತಿಂಗಳಿಂದ ನೀರು ಬಿಡದೇ ತಾರತಮ್ಯ ಮಾಡುತ್ತಿದ್ದಾರೆ. ಮೇಲ್ವರ್ಗದ ಜನರ ರಸ್ತೆಗೆ ನೀರು ಬಿಡುವಾತ ಕಾಲೋನಿಗೆ ನೀರು ಬಿಡದೆ ತಾರತಮ್ಯ ಮಾಡುತ್ತಿದ್ದಾರೆ. ದಲಿತ ಕಾಲೋನಿ ಎಂಬ ಕಾರಣಕ್ಕೆ ನೀರು ಬಿಟ್ಟಿಲ್ಲ ಎಂಬ ಆರೋಪ ಕೇಳಿ ಬಂದಿದ್ದು, ಮೇಲ್ವರ್ಗದವರ ಮನೆಯ ಮುಂದೆ ನೀರು ಹಿಡಿಯಲು ಹೋದಾಗ ಗಲಾಟೆ ಮಾಡಿದ್ದಾರೆ.
ಇದರಿಂದಾಗಿ, ಸದ್ಯ ಖಾಲಿ ಕೊಡ ಹಿಡಿದು ದಲಿತ ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ. ಜಾತಿ ತಾರತಮ್ಯ ಮಾಡುವ ಅಧಿಕಾರಿಗಳನ್ನ ಅಮಾನತು ಮಾಡುವಂತೆ ಒತ್ತಾಯ ಮಾಡಿದ್ದಾರೆ. ಶೀಘ್ರವೇ ದಲಿತ ಕಾಲೋನಿಗೆ ನೀರು ಹರಿಸುವಂತೆ ಸ್ಥಳೀಯರ ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296