ತುಮಕೂರು: ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ವತಿಯಿಂದ ಅರ್ಧ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಹಾಗೂ ವಿಷಯವಾರು ಪಠ್ಯ ಯೋಜನೆ ಕಾರ್ಯಾಗಾರ ನಗರದ ಎಂಪ್ರೆಸ್ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿತ್ತು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ತುಮಕೂರು ಉಪನಿರ್ದೇಶಕರಾದ ಡಾ.ಬಾಲಗುರುಮೂರ್ತಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡುತ್ತಾ, ವಿವಿಧ ವಿಷಯಗಳ ವೇದಿಕೆಗಳ ಮೂಲಕ ಸಿದ್ಧಪಡಿಸಿರುವ 2024–25 ನೇ ಸಾಲಿನ ಪ್ರಯೋಗ ರಹಿತ ವಿಷಯಗಳ ಯೋಜಿತ ಕಾರ್ಯಗಳ ಶೀರ್ಷಿಕೆಗಳ ಕೈಪಿಡಿ ಬಿಡುಗಡೆ ಮಾಡಿ ಜಿಲ್ಲೆಯ ಫಲಿತಾಂಶ ಹೆಚ್ಚಿಸಲೂ ನಿಮ್ಮ ಸಹಕಾರ ಅಗತ್ಯವಿದ್ದು, ಯಾವುದೇ ಲೋಪವಾಗದೆ ಇಲಾಖೆಯ ನಿಯಮದಂತೆ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ. ಹಾಗೆ ಈ ಶೈಕ್ಷಣಿಕ ವರ್ಷದಲ್ಲಿ ದ್ವೈಮಾಸಿಕ ಸಂಚಿಕೆಯನ್ನೂ ಹೊರತರಲಾಗುವುದು ಉಪನ್ಯಾಸಕರಿಗೂ ಅವಕಾಶ ಇರುವುದರಿಂದ ನೀವು ಹೆಚ್ಚು ವೈಜ್ಞಾನಿಕ ಚಿಂತನೆ ಬರಹಗಳಿಗೆ ಹಾಗೂ ಉತ್ತಮ ಶೀರ್ಷಿಕೆ ಸಂಚಿಕೆಗೆ ನೀಡಲು ತಿಳಿಸಿದರು.
ಎಲ್ಲಾ ಕಾಲೇಜಿನ ಮಕ್ಕಳು ನಮ್ಮ ಮಕ್ಕಳೇ ಎಂದು ತಿಳಿದು ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಬೇಕು, ತುಮಕೂರು ಜಿಲ್ಲೆ ಕಳೆದ ವರ್ಷ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ 24ನೇ ಸ್ಥಾನದಲ್ಲಿದ್ದು, ಈ ಶೈಕ್ಷಣಿಕ ಸಾಲಿನಲ್ಲಿ ಅತ್ಯುನ್ನತ ಸ್ಥಾನ ಪಡೆಯಲು ನಾವು ನೀವು ಒಟ್ಟಾಗಿ ಶ್ರಮಿಸೋಣ ಎಂದರು.
ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪ್ರಭಾಕರ್ ರೆಡ್ಡಿ ಮಾತನಾಡಿ, ಪ್ರಥಮ ದ್ವಿತೀಯ ಪಿಯುಸಿ ಪಠ್ಯಯೋಜನೆ, ಯೋಜಿತ ಕಾರ್ಯಗಳ ಶೀರ್ಷಿಕೆಗಳ ಬಗ್ಗೆ ಹಾಗೂ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಬಗ್ಗೆ ತಿಳಿಸಿಕೊಟ್ಟರು. ಎರಡನೇ ಕಿರುಪರೀಕ್ಷೆ ಹಾಗೂ ಪೂರ್ವ ಸಿದ್ಧತೆಯ ಪರೀಕ್ಷೆ ನಡೆಸಲು ಇದೆ ರೀತಿಯ ಕಾರ್ಯಾಗಾರ ಮಾಡಲಾಗುವುದು. ಎಲ್ಲಾ ಕಾಲೇಜಿನ ಪ್ರಾಚಾರ್ಯರ ಸಹಕಾರದಿಂದ ಸಂಘದ ಪದಾಧಿಕಾರಿಗಳಿಂದ ಈರೀತಿಯ ಉತ್ತಮ ಕಾರ್ಯಾಗಾರ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಮಲ್ಲಯ್ಯ, ಜಗದೀಶ್, ಪ್ರಸಾದ್, ಓಬಳೇಶಪ್ಪ, ಸಿದ್ದಗಂಗಾ ಚಂದ್ರಶೇಖರ್, ಮಂಜುನಾಥ್ ಬಿ.ಆರ್., ಸಂಘದ ಪದಾಧಿಕಾರಿಗಳು ಪರೀಕ್ಷಾ ಸಮಿತಿಯ ಸದಸ್ಯರು ಹಾಗೂ ವಿಷಯವಾರು 54 ಕಕ್ಕೂ ಹೆಚ್ಚು ವಿಷಯ ಸಂಪನ್ಮೂಲ ಉಪನ್ಯಾಸಕರು ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಆರಾಧ್ಯ ಎಚ್.ವಿ. ಸ್ವಾಗತಿಸಿದರು. ಪ್ರಾಂಶುಪಾಲರಾದ ತ್ರಿವೇಣಿ ಕಾರ್ಯಕ್ರಮ ನಿರೂಪಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296