ಮಧುಗಿರಿ: ಯುಕ್ತ ಕೌಶಲ್ಯ ತರಬೇತಿ ಕೇಂದ್ರ ತಾಲ್ಲೂಕಿನ ವಿಕಲಚೇತನರ (M.R.W,U. R. W, V. R. W)ಸ್ಫೂರ್ತಿ ಪುನರ್ವಸತಿ ಕಾರ್ಯಕರ್ತರ ಸಂಘ ಇವರುಗಳ ಸಹಯೋಗದಲ್ಲಿ ಬಾಬು ಜಗಜೀವನ ರಾವ್ ಮತ್ತು . ಡಾ ಬಿ.ಆರ್ . ಅಂಬೇಡ್ಕರ್ ರವರ ಜಯಂತಿ ಪ್ರಯುಕ್ತ, ಮಧುಗಿರಿಯ ಯುಕ್ತ ಕೌಶಲ್ಯ ತರಬೇತಿ ಮಾಹಿತಿ ಕಾರ್ಯಾಗಾರದಲ್ಲಿ msyep ತರಬೇತಿಯನ್ನು ನಮ್ಮ ತಾಲ್ಲೂಕಿನ ಎಲ್ಲಾ V. R.W ಮತ್ತು U. R.W ಗಳಿಗೆ ಆಸಕ್ತಿವುಳ್ಳ ದೈಹಿಕ ವಿಕಲ ಚೇತನರಿಗೆ ತರಬೇತಿ ನೀಡುವುದಾಗಿ ಸಂಸ್ಥಾಪಕ ನಿರ್ದೇಶಕರಾದ ಮಧುಗಿರಿ ದಿಲೀಪ್ ತಿಳಿಸಿದರು.
ಜಿಲ್ಲಾ ಮುಖ್ಯ ಕಾರ್ಯಕ್ರಮ ಆಯೋಜಕರಾದ ದೀಪಿಕಾ ವೆಂಕಟೇಶ್ ರವರು msyep ಕಾರ್ಯಕ್ರಮದಲ್ಲಿ ನೀಡುವ ತರಬೇತಿಗಳ ಬಗ್ಗೆ ಮಾಹಿತಿ ನೀಡಿದರು ಹಾಗೂ ಯುಕ್ತ ಕೌಶಲ್ಯ ತರಬೇತಿ ಕೇಂದ್ರದ ಸಂಸ್ಥಾಪಕ ನಿರ್ದೇಶಕರಾದ ಮಧುಗಿರಿ ದಿಲೀಪ್ ರವರು msyep ತರಬೇತಿ ಕಾರ್ಯಕ್ರಮ ಕ್ಕೆ ಸಹಯೋಗ ನೀಡುವ ಸಂಸ್ಥೆಗಳು ಹಾಗೂ ತರಬೇತಿಯ ಅನುಕೂಲಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ ಜಿಲ್ಲಾ ಪಂಚಾಯತಿಯ ಗಂಗಮ್ಮ ಅವರು ಶ್ರೀಮಂತಿಕೆ ಎನ್ನುವುದು ಹಣಕಾಸಿನಲ್ಲಿ ಇರುವುದಲ್ಲ. ಅವರಲ್ಲಿರುವ ಕೌಶಲ್ಯತೆಯೇ ನಿಜವಾದ ಶ್ರೀಮಂತಿಕೆ ಎಂಬ ಅತ್ಯಮೂಲ್ಯವಾದ ಮಾತುಗಳನ್ನು ನುಡಿದರು. ಮಂಜುನಾಥ್ ಅವರು ಕಾರ್ಯಕ್ರಮ ಕುರಿತು ಮಾತನಾಡಿ ಇಂದು ಜ್ಯೋತಿ ಬಾ ಪುಲೆಯವರ ಜಯಂತಿ ಅವರು ಶಿಕ್ಷಣಕ್ಕೆ ನೀಡಿದ ಕೊಡುಗೆಯ ಬಗ್ಗೆ ಮಾಹಿತಿಯನ್ನು ತಿಳಿಸಿದರು ಕಾರ್ಯಕ್ರಮದಲ್ಲಿ ನಿರೂಪಣೆಯನ್ನು ಮಾಡಿದ ಗೋಪಾಲಪ್ಪ. ಜಿ. ಎನ್ ಅವರು ಅಂಬೇಡ್ಕರ್ ಗೀತೆಗಳನ್ನು ತುಂಬಾ ಸುಮಧುರವಾಗಿ ಹಾಡಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ವೆಂಕಟೇಶ್, ಸ್ಫೂರ್ತಿ ಪುನರ್ವಸತಿ ಕಾರ್ಯಕರ್ತರ ಸಂಘದ ಅಧ್ಯಕ್ಷರು. ಜಿ. ಎಂ ನಾಗರಾಜು, ಸಣ್ಣರಾಮಯ್ಯ, ರಾಜು, ಹಾಗೂ ಮಂಜುನಾಥ್ ರವರು ಹಾಜರಿದ್ದರು…
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5