ಮಧುಗಿರಿ: ತಾಲೂಕಿನ ಬಂದ್ರೆ ಹಳ್ಳಿ ಗ್ರಾಮದ ಪಕ್ಕದ ಹೊಲಬಿನಲ್ಲಿ ರುವ ಶ್ರೀ ಮೀನಗೊಂದಿ ಮಲೆ ರಂಗನಾಥ ಸ್ವಾಮಿ ಜಾತ್ರೆಯು ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಪ್ರತಿ ವರ್ಷ ಇಲ್ಲಿ ಬ್ರಹ್ಮ ರಥೋತ್ಸವ ಬಹಳ ಅದ್ದೂರಿಯಾಗಿ ನಡೆಯುತ್ತದೆ. ಭಕ್ತಾದಿಗಳು ತೇರಿನ ಮೇಲೆ ಹೂವು ಹಣ್ಣು ಭಕ್ತಿಯಿಂದ ಎಸೆಯುವ ಮೂಲಕ ತಮ್ಮ ಪ್ರಾರ್ಥನೆ ಸಲ್ಲಿಸಿದರು.
ಜಾತ್ರೆಯಲ್ಲಿ ಎಲ್ಲಾ ಕಡೆ ಮಜ್ಜಿಗೆ ಪಾನಕ ಹೆಸರುಬೇಳೆ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿನ ವಿಶೇಷ ಏನೆಂದರೆ ತುಂಬಾ ದೂರದ ಊರುಗಳಿಂದ ಬಂದು ಕೊಪ್ಪಲು ಕಟ್ಟಿಕೊಂಡು ಭೋಜನ ವ್ಯವಸ್ಥೆ ಮಾಡಲಾಗುತ್ತದೆ. ನೋಡಲು ಮನಮೋಹಕವಿದ್ದು , ಬೆಟ್ಟದ ಮೇಲೆ ಮೀನಗೋಂದಿ ಮಲೇರಂಗನಾಥ ಸ್ವಾಮಿಯ ವಿಶೇಷ ಪೂಜೆ ಇರುತ್ತದೆ. ಈ ಪ್ರದೇಶ ಟ್ರಕ್ಕಿಂಗ್ ಗೆ ಕೂಡ ಹೆಸರುವಾಸಿಯಾಗಿದೆ.
ವರದಿ: ತಿಪ್ಪೇಸ್ವಾಮಿ ಎಂ ಕೆ, ಮುದ್ದೇನೆರಳೆಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5