ಮಧುಗಿರಿ: ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕು ಕಡಬ ಹೋಬಳಿಯ ಪೆದ್ದನಹಳ್ಳಿಯಲ್ಲಿ ಪೆದ್ದನಹಳ್ಳಿ ಗ್ರಾಮದ ದಲಿತ ಮಾದಿಗ ಸಮುದಾಯಕ್ಕೆ ಸೇರಿದ ಗಿರೀಶ್, ಹಾಗೂ ಮಂಚಲದೊರೆ ಗ್ರಾಮದ ಅನಿಲ್ ಇಬ್ಬರು ಸ್ನೇಹಿತರಾಗಿದ್ದು, ಇಬ್ಬರ ಮೇಲೆ ಕಳ್ಳತನ ಆರೋಪ ವರಿಸಿ ತೋಟದ ಮನೆಯಲ್ಲಿ ಇಬ್ಬರನ್ನು ಕೂಡಿ ಹಾಕಿ ಬಟ್ಟೆ ಬಿಚ್ಚಿಸಿ ಇಡೀ ರಾತ್ರಿ ಮನಬಂದಂತೆ, ಅಮಾನುಷವಾಗಿ, ಚಿತ್ರಹಿಂಸೆ ನೀಡಿ,ಕೊಲೆ ಮಾಡಿರುವುದು ನಾಗರಿಗ ಸಮಾಜದಲ್ಲಿ ತಲೆ ತಗ್ಗಿಸುವಂತೆ ಆಗಿದೆ ಎಂದು ದಲಿತ ಪರ ಸಂಘಟನೆಗಳು ಅಭಿಪ್ರಾಯಪಟ್ಟಿವೆ.
ಇಂದಿಗೂ ಜಾತಿ ಬೇಧ ಹಾಗೂ ಬಡತನ ಇನ್ನು ಹಳ್ಳಿಗಳಲ್ಲಿ ಜೀವಂತವಾಗಿದ್ದು, ದಲಿತರ ಮೇಲೆ ಸವರ್ಣಿಯರು ಇಂದಿಗೂ ದೌರ್ಜನ್ಯ ಎಸಗುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಬಡ ದಲಿತ ಮಾದಿಗ ಸಮುದಾಯದ ಬಡಕುಟುಂಬಕ್ಕೆ ಆಸರೆಯಾಗಿದ್ದ ಯುವಕರನ್ನು ಹಿಂಸಿಸಿ “ಕೊಲೆ ಮಾಡಿದ “ಪಾಪಿಗಳಿಗೆ ಕಾನೂನಿ ನಡಿ ಶಿಕ್ಷೆ ನೀಡಬೇಕು. ಕೊಲೆಯಾದ ಕುಟುಂಬದ ಸದಸ್ಯರಿಗೆ ತಲಾ 25 ಲಕ್ಷ ರೂ. ಅನುದಾನವನ್ನು ಸರ್ಕಾರದಲ್ಲಿ ನೀಡಬೇಕು ಮಾತು ಕೊಲೆಯಾದ ಕುಟುಂಬದವರ ಸದಸ್ಯರಿಗೆ ಸರ್ಕಾರಿ ಹುದ್ದೆ ನೀಡಬೇಕೆಂದು ದಲಿತ ಪರ ಸಂಘಟನೆಗಳು ಆಗ್ರಹಿಸಿದರು.
ಎಂ.ಐ.ಶಿವಕುಮಾರ್ ಮಾದಿಗ ದಂಡೋರ ತಾಲೂಕ ಅಧ್ಯಕ್ಷರು, ಸಿದ್ದಾಪುರ ರಂಗ ಶಾಮಣ್ಣ ಬಿ ಡಿಎಸ್ ಎಸ್ ಜಿಲ್ಲಾ ಸಂಚಾಲಕರು, ದೊಡ್ಡೇರಿ ಮಹಾಲಿಂಗಯ್ಯ, ಕಲಾವಿದರಾದ ಸಿದ್ದಾಪುರ ಸಂಜೀವಯ್ಯ, ಜೀವಿಕ, ಮಂಜುನಾಥ್, ನೀರಕಲ್ಲು ನಾಗೇಶ್, ದೊಡ್ಡೇರಿ ಕಣಿಮಯ್ಯ ಹಾಗೂ ವಕೀಲರಾದ ಶಿವಕುಮಾರ್ ಮೈಲಾರಪ್ಪ, ತಿಪ್ಪಾಪುರ ಬಡಕನಹಳ್ಳಿ ರಾಜು, ಬೇಡತ್ತೂರು ತಿಪ್ಪೇ ಸ್ವಾಮಿ ಹಾಗೂ ಎಲ್ಲಾ ದಲಿತ ಪರ ಹೊರಟಗಾರರು ನ್ಯಾಯಕ್ಕಾಗಿ ಆಗ್ರಹಿಸಿದರು.
ವರದಿ: ದೊಡ್ಡೇರಿ ಮಹಾಲಿಂಗಯ್ಯ, ಮಧುಗಿರಿ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5