ಮಧುಗಿರಿ: ರಾಜೀವ್ ಗಾಂಧಿ ಕ್ರೀಡಾಂಗಣದ ಹಿಂಭಾಗದ ಜಮೀನಿನಲ್ಲಿ ಸುಮಾರು 30 ಕೋತಿಗಳನ್ನು ಜಮೀನಿನ ಮಾಲಿಕ ಕುಮಾರ್ ಅವರು ಹಿಡಿದು ತೆಂಗಿನ ತೋಟದಲ್ಲಿ ಬೋನ್ ನಲ್ಲಿ ಕೂಡಿ ಹಾಕಿರುವ ಘಟನೆ ನಡೆದಿದೆ.
ಬೋನಿನಲ್ಲಿ ಕೋತಿಗಳು ಹಿಂಸೆಗೆ ತಾಳಲಾರದೆ ಒಂದಕ್ಕೊಂದು ಕಿತ್ತಾಡಿಕೊಂಡು ಪರಸ್ಪರ ಗಾಯ ಮಾಡಿಕೊಂಡು ಬೋನಿನಲ್ಲಿ ನರಳುತ್ತಿದ್ದ ದೃಶ್ಯ ಕಂಡುಬಂದಿದ್ದು, ಈ ದೃಶ್ಯವನ್ನು ಕಂಡ ವಾಲ್ಮೀಕಿ ನಗರದ ನಿವಾಸಿಯಾದ ಯುವಕರು ಜನರ ಸಹಯೋಗದಿಂದ ರಮೇಶ್ ಸಾರ್ ಇಂದು ಮುಖಂಡ ಚಂದ್ರಶೇಖರ್, ಮಂಜುನಾಥ್ ಶಿವರಾಜ್ ಅವರಿಗೆ ತಿಳಿಸಿದ್ದು, ಅವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಕೋತಿಗಳನ್ನು ಬೋನಿನ ಮೂಲಕ ಬೇರೆ ಕಡೆಗೆ ರವಾನಿಸಿದ್ದು, ಬೋನಿನಿಂದ ಬಿಡುಗಡೆ ಮಾಡಿದ್ದಾರೆ.
ಇನ್ನೂ ಜಮೀನಿನ ಮಾಲಿಕ ಕುಮಾರ್ ಕೋತಿಗಳನ್ನು ಬೋನಿನಲ್ಲಿ ಕೂಡಿ ಹಾಕಿ ಹಿಂಸಿಸುತ್ತಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ವರದಿ: ದೊಡ್ಡೇರಿ ಮಹಾಲಿಂಗಯ್ಯ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5