ಪಾವಗಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 390ನೇ ನಮ್ಮೂರು ನಮ್ಮ ಕೆರೆ ಹಸ್ತಾಂತರ ಮತ್ತು ಕೆರೆ ಅಂಗಳದಲ್ಲಿ ಅರಣ್ಯ ಸಸಿನಾಟಿ ಕಾರ್ಯಕ್ರಮ ನ್ಯಾಯದಗುಂಟೆ ಗ್ರಾಮ ಪಂಚಾಯತಿಯ ಕೊಡಿಗೆಹಳ್ಳಿ ಗ್ರಾಮದ ದೊಡ್ಡಕಟ್ಟೆಕೆರೆಯಲ್ಲಿ ಯಶಸ್ವಿಯಾಗಿ ನಡೆಯಿತು.
ಶಾಸಕ ವೆಂಕಟರಮಣಪ್ಪರವರು ಕೆರೆಯ ಹಸ್ತಾಂತರ ಮಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೀನಪ್ಪ ಎಂ. ಕೆರೆಯ ನಾಮಫಲಕ ಅನಾವರಣಗೊಳಿಸಿದರು.
ಈ ವೇಳೆ ಮಾತನಾಡಿದ ಶೀನಪ್ಪ ಎಂ., 2021- 22 ನೇ ಸಾಲಿನಲ್ಲಿ ಕೋಡಿಗೆಹಳ್ಳಿ ದೊಡ್ಡಕಟ್ಟೆ ಕೆರೆಯಲ್ಲಿ 12 ಲಕ್ಷ ಖರ್ಚು ಮಾಡಿ ಹೂಳೆತ್ತಲಾಗಿದೆ. ತಾಲೂಕಿನಲ್ಲಿ 5 ಕೆರೆಗಳಿಗೆ 51.98 ಲಕ್ಷ ಮೊತ್ತವನ್ನು ವಿನಿಯೋಗ ಮಾಡಿ ಹೊಳು ಎತ್ತಲಾಗಿದೆ ಎಂದು ತಿಳಿಸಿದರು.
ದೊಡ್ಡ ಕಟ್ಟೆಕೆರೆಯಲ್ಲಿ 33 ದಿನಗಳು ಕಾಮಗಾರಿ ಮಾಡಿದ್ದು, 22,698 ಲೋಡು ಫಲವತ್ತಾದ ಮಣ್ಣನ್ನು ಸುತ್ತಮುತ್ತಲಿನ ಜಮೀನುಗಳಿಗೆ ಹಾಕುವ ಮೂಲಕ ಜಮೀನಿನ ಫಲವತ್ತತೆಯನ್ನು ಹೆಚ್ಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ನಿರ್ದೇಶಕ ದಿನೇಶ್ ಡಿ., ವಲಯದ ಮೇಲ್ವಿಚಾರಕ ಮುಹ್ಮದ್, ಕೃಷಿ ಮೇಲ್ಕ್ಚಾರಕ ಬೋರಣ್ಣ, ಸೇವಾ ಪ್ರತಿನಿಧಿ ರಾಧಮ್ಮ, ಅನುಪಮಾ, ಭಾಗ್ಯಲಕ್ಷ್ಮಿ, ನ್ಯಾಯದಗುಂಟೆ ಗ್ರಾ.ಪಂ. ಅಧ್ಯಕ್ಷೆ ಪಾರ್ವತಮ್ಮ, ಕೆರೆ ಸಂಘದ ಅಧ್ಯಕ್ಷ ಆನಂದ ಗೌಡ, ಗ್ರಾ.ಪಂ. ಸದಸ್ಯ ಗಿರೀಶ ಇತರ ಸಂಘ ಸಂಸ್ಥೆಗಳ, ಊರಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.
ವರದಿ: ರಾಮಪ್ಪ ಸಿ.ಕೆ.ಪುರ, ಪಾವಗಡ ತಾಲ್ಲೂಕು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz