ಮಧುಗಿರಿ: ರೈತರೊಬ್ಬರ ಜಮೀನಿನಲ್ಲಿ ನೆಲದಡಿಯಿಂದ ನೀರು ಉಕ್ಕಿ ಬಂದಿದ್ದು, ಇನ್ನು ಮೂರು ವರ್ಷಗಳ ಕಾಲ ನಮಗೆ ಕೃಷಿಗೆ ನೀರಿನ ಬರವಿಲ್ಲ ಎಂದು ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ.
ದೊಡ್ಡ ತಿಮ್ಮಯ್ಯ ಮತ್ತು ಮೂಡಲಗಿರಿಯಪ್ಪ ಎಂಬ ರೈತರ ಜಮೀನಿನಲ್ಲಿ ನೀರು ಉಕ್ಕುತ್ತಿದ್ದು, ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.
ವಕೀಲರಾದ ಶಿವಣ್ಣನವರು ಈ ಬಗ್ಗೆ ಮಾತನಾಡಿ, ಲಕ್ಷ್ಮಿಪುರದ ಕೆರೆ ತುಂಬಿ ಕೋಡಿ ಹರಿಯುತ್ತಿದ್ದು, ಸುತ್ತಮುತ್ತಲಿನ ಹಳ್ಳ ತುಂಬಿ ಹರಿಯುತ್ತಿದೆ. ದೊಡ್ಡೇರಿ ಗ್ರಾಮದ ಲಕ್ಷ್ಮಿಪುರದ ಕೆರೆಯ ಹಿಂಬದಿ ಇರುವ ಜಮೀನುಗಳಲ್ಲಿ ವ್ಯವಸಾಯಕ್ಕೆ ಯೋಗ್ಯವಾಗಿ ಇನ್ನೂ ಎರಡು ಮೂರು ವರ್ಷ ವ್ಯವಸಾಯ ಮಾಡಿಕೊಳ್ಳಲು ಜೀವನ ನಡೆಸಲು ಯಾವುದೇ ತೊಂದರೆ ಇಲ್ಲ ಎಂದರು.
ದೊಡ್ಡೇರಿ ಗ್ರಾಮದ ವಾಸಿಯಾದ ಡಿ.ಟಿ.ಚೇತನ್ ಮಾತನಾಡಿ, ದೊಡ್ಡೇರಿ ಲಕ್ಷ್ಮಿಪುರದ ಕೆರೆ ಹಿಂಭಾಗ ಎಲ್ಲಾ ಬಾವಿಗಳು ತುಂಬಿ ತುಳುಕಿದ್ದು, ಹೊಲಗಳಲ್ಲಿ ನೀರು ನಿಂತಿವೆ. ಇದು ಸಂತೋಷದ ವಿಚಾರ ಎಂದರು. ಈ ಸಂದರ್ಭದಲ್ಲಿ ಸತೀಶ್ ಡಿ.ಎಂ. ರಮೇಶ್ ಡಿಎಸ್ ರಮೇಶ್ ರಾಮಣ್ಣನವರು ಹೊಲದ ಮಾಲೀಕರು ಇದ್ದರು.
ವರದಿ: ದೊಡ್ಡೇರಿ ಮಹಾಲಿಂಗಯ್ಯ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz