ಮಧುಗಿರಿ: ಬಳ್ಳಿ ಮತ್ತು ಮುಳ್ಳುಗಳು ರೆಕ್ಕೆಗೆ ಚುಚ್ಚಿ ಸಿಲುಕಿದ್ದ ರಾಷ್ಟ್ರೀಯ ಪಕ್ಷಿ ನವಿಲನ್ನು ಅರಣ್ಯ ಇಲಾಖೆ ರಕ್ಷಿಸಿದ ಘಟನೆ ನಡೆದಿದೆ.
ದೊಡ್ಡೇರಿ ಗ್ರಾಮ ನಿವಾಸಿ ದೊಡ್ಡೇರಿ ಮಹಲಿಂಗಯ್ಯನವರು ಹೆಣ್ಣು ನವಿಲೊಂದು ಪೊದೆಯಲ್ಲಿ ಸಿಲುಕಿಕೊಂಡಿರುವುದನ್ನು ನೋಡಿ ತಕ್ಷಣವೇ ಅರಣ್ಯ ಇಲಾಖೆಅಧಿಕಾರಿಯಾದ ಮುತ್ತುರಾಜ್ ರವರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಬಡವನಹಳ್ಳಿ ಮತ್ತು ತಿಮ್ಮಲಾಪುರ ಅರಣ್ಯ ರಕ್ಷಕರಾದ ಎಲ್ಲಪ್ಪ ಹಂಚಿನಾಳ್, ಚಿದಾನಂದ ಚೆನ್ನಾಗಿರಿ ಅಧಿಕಾರಿಯವರಿಗೆ ತಿಳಿಸಿದ್ದು, ತಕ್ಷಣ ನವಿಲು ಸಿಲುಕುಕೊಂಡಿರುವ ಸ್ಥಳಕ್ಕೆ ಆಗಮಿಸಿ ಸುಮಾರು ಒಂದು ವರ್ಷ ವಯಸ್ಸಿನ ಹೆಣ್ಣು ನವಿಲನ್ನು ರಕ್ಷಣೆ ಮಾಡಿದ್ದಾರೆ.
ಪಕ್ಷಿಯು ಆಹಾರವಿಲ್ಲದೆ ಸುಸ್ತಾಗಿದ್ದು, ಇದೀಗ ನವಿಲನ್ನು ರಕ್ಷಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ ನವಿಲಿಗೆ ಚಿಕಿತ್ಸೆ ನೀಡಿ, ಆರೈಕೆ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಸದಸ್ಯರಾದ ಡಿ.ಬಿ.ಮಂಜುನಾಥ್, ಕಾರ್ತಿಕ್, ಜಗದೀಶ್, ರವಿಚಂದ್ರ ಮುಂತಾದವರು ನವಿಲನ್ನು ರಕ್ಷಣೆ ಮಾಡಲು ಸಹಕರಿಸಿದ್ದರು.
ವರದಿ: ದೊಡ್ಡೇರಿ ಮಹಾಲಿಂಗಯ್ಯ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz