ಮಧುಗಿರಿ: ಪಟ್ಟಣದ ಎಚ್ ಎಸ್ ಆರ್ ಸಮುದಾಯಭವನದಲ್ಲಿ ಜಾಮಿಯಾ ಮಸೀದಿ ವತಿಯಿಂದ ತಾಲೂಕಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇಕಡ 75ಕ್ಕೂ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾರ್ಮಿಕ ಇಲಾಖೆ ಆಯುಕ್ತರಾದ ಐ ಎ ಎಸ್ ಅಧಿಕಾರಿ ಅಕ್ರಂಪಾಷ, ಅಲ್ಪಸಂಖ್ಯಾತರ ಸಮಾಜದಲ್ಲಿ ಶಿಕ್ಷಣದ ಕೊರತೆ ತುಂಬಾನೇ ಇದೆ, ಎಸೆಸೆಲ್ಸಿ ನಂತರ ವಿದ್ಯಾರ್ಥಿಗಳು ಕೆಲವು ಕುಂದುಕೊರತೆ ಗಳಿಂದ ಮೊದಲ ಹಂತದಲ್ಲಿ ಡ್ರಾಪೌಟ್ ಆಗುತ್ತಾರೆ. ಜೀವನದಲ್ಲಿ ಎಜುಕೇಶನ್ ತುಂಬಾನೇ ಅವಶ್ಯ ಸಮುದಾಯಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಗುತ್ತದೆ ಎಂದರು.
ಅಲ್ಪಸಂಖ್ಯಾತರ ಇಲಾಖೆ ಆಯುಕ್ತರಾಗಿದ್ದ ಸಂದರ್ಭದಲ್ಲಿ ಇಡೀ ರಾಜ್ಯದಲ್ಲಿ ಮೊರಾರ್ಜಿ ವಸತಿ ಶಾಲೆ ಮತ್ತು ಮೌಲಾನಾ ಆಜಾದ್ ವಸತಿ ರಹಿತ ಶಾಲೆ ಪ್ರಾರಂಭಿಸಿದೆ, ಪ್ರಾರಂಭದ ಸಮಯದಲ್ಲಿ ಶಾಲೆಗಳಲ್ಲಿ ಅಡ್ಮಿಶನ್ ಗಾಗಿ ಇಲಾಖೆ ಸಿಬ್ಬಂದಿಯಿಂದ ಕ್ಯಾಂಪೇನ್ ಮಾಡಬೇಕಾಗಿತ್ತು. ಆದರೆ ಈಗ ಅದರ ಅವಶ್ಯಕತೆ ಇಲ್ಲ ಶಾಲೆಗಳ ಇನ್ಫ್ರಾಸ್ಟ್ರಕ್ಚರ್ ಉನ್ನತಮಟ್ಟದ ಶಿಕ್ಷಕರು ಒಳ್ಳೆಯ ಮೂಲಭೂತ ಸೌಕರ್ಯ ಇರುವುದರಿಂದ ಅಡ್ಮಿಶನ್ ಸೀಟುಗಳಿಗಾಗಿ ಪೋಷಕರು ತಮ್ಮ ಮಕ್ಕಳೊಂದಿಗೆ ನಾಮುಂದು ತಾಮುಂದು ಎಂದು ತಮ್ಮ ಮಕ್ಕಳನ್ನು ದಾಖಲಿಸುತ್ತಿದ್ದು ಇದು ತುಂಬಾನೇ ಸಂತೋಷದ ವಿಚಾರ ಎಂದರು.
ತಹಶೀಲ್ದಾರ್ ನಹಿದಾ ಜಮ್ ಜಮ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಸೆಕೆಂಡ್ ಪಿಯುಸಿ ಟರ್ನಿಂಗ್ ಪಾಯಿಂಟ್. ಈ ಹಂತಗಳಲ್ಲಿ ವಿದ್ಯಾರ್ಥಿಗಳು ಡ್ರಾಪೌಟ್ ಆಗುತ್ತಿದ್ದು ಇದರಿಂದ ಅಲ್ಪಸಂಖ್ಯಾತರು ಉನ್ನತ ಶಿಕ್ಷಣ ವಂಚಿತರಾಗುತ್ತಿದ್ದಾರೆ ಎಂದರು.
ಭಾರತದಲ್ಲಿ 74% ಲಿಟ್ರೇಸಿ ರೇಟ್ ಇದೆ, ಮೈನಾರಿಟಿ 68% ಇದೆ ಮುಖ್ಯವಾಗಿ ವಿದ್ಯಾರ್ಥಿ ಹೆಣ್ಣುಮಕ್ಕಳು ತುಂಬಾನೇ ಡ್ರಾಪೌಟ್ ಆಗುತ್ತಿದ್ದಾರೆ, ಪೋಷಕರು ವಿದ್ಯಾರ್ಥಿ ಹೆಣ್ಣುಮಕ್ಕಳಿಗೆ ಶಿಕ್ಷಣದ ಬಗ್ಗೆ ಪ್ರೋತ್ಸಾಹಿಸುತ್ತಿಲ್ಲ. ಇದರಿಂದ ನಮ್ಮ ಸಮುದಾಯಕ್ಕೆ ತುಂಬಾನೇ ಹಿನ್ನಡೆಯಾಗುತ್ತಿದೆ ಎಂದರು.
ಈ ಸಮಾರಂಭದಲ್ಲಿ ಜಿಲ್ಲಾ ಲೋಕಾಯುಕ್ತ ಎಸ್ಪಿ ವಾಲಿ ಬಾಶ, ಸರ್ಕಾರಿ ಅಭಿಯೋಜಕ ಅಜ್ಮಲ್ ಪಾಷಾ, ಸರ್ಕಲ್ ಇನ್ಸ್ಪೆಕ್ಟರ್ ಎಂ.ಎಸ್.ಸರ್ದಾರ್, ಮೋಟಿವೇಷನಲ್ ಸ್ಪೀಕರ್ ಮಸೂದ್, ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಅಬ್ದುಲ್ ರೆಹಮಾನ್, ಅಲ್ಪಸಂಖ್ಯಾತರ ಮುಖಂಡರಾದ ಅರ್ಶದ್ ಹುಸೇನ್, ಪುರಸಭಾ ಸದಸ್ಯರಾದ ಅಲಿಂ ಪಾಷಾ ನಸೀಮಾ ಸಾಧಿಕ್, ಆಸಿಯಾ ಶಾಜು, ಶಬಾನಾ ಶಕೀಲ್, ಜಾಮಿಯಾ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ಅಲಿಂ ಪಾಷಾ, ಉಪಾಧ್ಯಕ್ಷರಾದ ಸಾಧಿಕ್, ಸದಸ್ಯರುಗಳಾದ ಸಯ್ಯದ್ ಕರೀಂ ಮೊಹಮ್ಮದ್ ಹಾರುನ್ ಯೂಸುಫ್, ಕಲೀಮ್ ಶರೀಫ್ ಮಹಮ್ಮದ್ ನೂರ್ ಅಬ್ದುಲ್ ಸಲಾಂ, ಕಲೀಮ್ ಉಲ್ಲಾ ಹಾಜರಿದ್ದರು.
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz