ಮಧುಗಿರಿ: ಧಾರಾಕಾರ ಮಳೆಯಿಂದಾಗಿ ದೊಡ್ಡೇರಿ ಹೋಬಳಿಯ ಕೈಮಾರದಲ್ಲಿ ಪ್ರತಿ ಶನಿವಾರ ನಡೆಯುವ ಸಂತೆ ಜಲಾವೃತವಾದ ಘಟನೆ ನಡೆಯಿತು.
ಕೈಮಾರ ರಸ್ತೆ ಕವಣದಾಲ ಹಾದುಹೋಗುವ ರಸ್ತೆ ಜಲಾವೃತವಾಗಿದ್ದು, ರೈತರು ತಾವು ಬೆಳೆದ ತರಕಾರಿಗಳನ್ನು ಮಾರಾಟ ಮಾಡಲಾಗದೇ ಪರದಾಡಿದ ಘಟನೆ ನಡೆದಿದ್ದು, ತಮ್ಮ ತರಕಾರಿಗಳನ್ನು ರಕ್ಷಿಸಿಕೊಳ್ಳುವುದೇ ದುಸ್ಸಾಹಸವಾಗಿ ಮಾರ್ಪಟ್ಟಿತು.
ತರಕಾರಿ, ದವಸ ಧಾನ್ಯಗಳಿಗೆ ಗೋಣಿಚೀಲ ಟಾರ್ಪಲ್ ಒದಿಸಿ ಸಂರಕ್ಷಿಸಿಕೊಳ್ಳಲು ರೈತರು ಪರದಾಡುತ್ತಿರುವ ದೃಶ್ಯ ಕಂಡು ಬಂತು.
ವರದಿ: ದೊಡ್ಡೇರಿ ಮಹಾಲಿಂಗಯ್ಯ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy